ಅದೊಂದು ಕುಗ್ರಾಮ ಆ ಊರಿನಲ್ಲಿ ಆರೇಳು ನೂರು ಜನರು ವಾಸಿಸುತ್ತಿದ್ದರು. ಸಾಕ್ಷರತೆ ಅಷ್ಟಕ್ಕಷ್ಟೆ ಜನರೆಲ್ಲ ತಮ್ಮ ಮೂಲ ಕಸುಬು ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಅಲ್ಲಿಗೆ ಬಂದವರೆ ಮಲ್ಲಯ್ಯ ಹಿರೇಮಠ ಮಾಸ್ತರರು ಬಹುದೂರದಿಂದ ವರ್ಗವಾಗಿ ಬಂದಿದ್ದರು ಹಾಗಾಗಿ ಆ ಊರಿನ ಶಾಲೆಯೆ ಅವರಿಗೆ ಮನೆಯು ಹೌದು ಶಾಲೆಯು ಹೌದು ಅವರು ಸೋಮವಾರ ಬಂದು ಶನಿವಾರ ತಮ್ಮ ಊರಿಗೆ ಹೋಗುವುದು ಅವರ ವಾಡಿಕೆ, ಮಧ್ಯದ ಈ ಅವಧಿಯಲ್ಲಿ ಅವರಿಗೆ ಶಾಲೆಯಲ್ಲಿರುವ ಮಕ್ಕಳೆ ಅವರ ಮಕ್ಕಳು. ಅವರೊಂದಿಗೆ ಕಾಲ ಕಳೆಯುವುದು ಮಾಸ್ತರ ಮಲ್ಲಯ್ಯ ಹಿರೇಮಠರಿಗೆ ಎಲ್ಲಿಲ್ಲದ ಸಂತಸದ ಸಮಯ. ಪ್ರತಿ ಕ್ಷಣವೂ ಅವರಿಗಾಗಿ ಕಳೆಯುತ್ತಿದ್ದರು ಮಕ್ಕಳಂತೂ ಅವರ ಹಿಂದು ಮುಂದು, ಅದೊಂದು ಗುರುಕುಲದ ವಾತಾವರಣ ಗುರುಗಳಿಗೆ ಹಾಲು ಮೊಸರು ತಂದು ಕೊಡುವುದು, ಅವರಿಗೆ ನೀರು ತಂದು ಕೊಡುವುದು ಕಸಮುಸುರೆ ಮಾಡುವುದು ಮಕ್ಕಳ ಕೆಲಸವೆ, ಯಾವ ಪಾಲಕರು ತಮ್ಮ ಮಕ್ಕಳು ಕೆಲಸ ಮಾಡುತ್ತಿದ್ದಾರೆ ಎಂಬ ಭಾವನೆ ಇರಲಿಲ್ಲ ಬದಲಾಗಿ ಗುರುವಿನ ಸೇವೆ ಮಕ್ಕಳ ಭಾಗ್ಯ ವೆಂದು ಭಾವಿಸಿದವರೆ. ಮಾಸ್ತರರು ಊರಿನಲ್ಲಿ ಪ್ರತಿಯೊಂದು ಕಾರ್ಯದಲ್ಲಿ ಅತ್ಯಂತ ಶ್ರದ್ಧೆಯಿಂದ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು ಅದು ಹುಟ್ಟಿದ ಮಗುವಿನ ನಾಮಕರಣ ಕಾರ್ಯಕ್ರಮವಿರಲಿ, ಶವ ಸಂಸ್ಕಾರ ವಿರಲಿ ಮುಂದೆ ನಿಂತು ಮಾಡುತ್ತಿದ್ದರು. ಅವ ಬಡವನೆ ಇರಲಿ ಶ್ರೀಮಂತನೆ ಇರಲಿ ಭೇಧ ಮಾಡಿದವರೆ ಅಲ್ಲ. ಶ್ರಾವಣ ಬಂದರೆ ಭಜನೆಗೂ ಇವರೆ ಬೇಕು ಅವರ ಭಜನೆ ಪದಗಳು ಜನರನ್ನು ಮಂತ್ರ ಮಂತ್ರಮುಗ್ಧರಾಗುವಂತೆ ಮಾಡುತ್ತಿದ್ದವು.ಅವರ ಮಂಗಳಾರತಿ ಕೇಳುವದೆಂದರೆ ಕೂಡಿದ ಜನರಗೆ ಭಕ್ತಿಯ ಸಾಗರದಲ್ಲಿ ತೇಲಿದ ಅನುಭವ. ಮದುವೆಯ ಸಂದರ್ಭದಲ್ಲಿ ಶಾಲೆಯು ಕಲ್ಯಾಣ ಮಂಟಪ ವಾಗುತ್ತಿತ್ತು.ಮಕ್ಕಳಗೂ ಇದು ಸೂಟಿಯೂ ಹೌದು ಸ್ವೀಟ್ ಸಿಗುವ ಸದವಕಾಶವೂ ಹೌದು. ಬಸವ ಮಕ್ಕಳ ಗುಂಪಿನಲ್ಲಿ ಒಬ್ಬ ,ಆತನಿಗೆ ಬಡತನವೂ ಅಲ್ಲದ ಸಿರಿತನವೂ ಅಲ್ಲದ ಮನೆತನವಿತ್ತು.ಹೆಸರು ಬಸವನಾದರೂ ಬಸವಣ್ಣನ ತತ್ವಕ್ಕೆ ವಿರುದ್ಧವಿದ್ದ, ತುಂಟತದನಲ್ಲಿ ಮುಂದೆ. ಹಾಗಾಗಿ ಆತನ ತಂದೆ ತರಲೆಯನ್ನು ತಡೆಯಲಾಗದೇ ವಯಸ್ಸಿಗೂ ಮೊದಲೆ ಮಲ್ಲಯ್ಯ ಮಾಸ್ತರ ಮಡಲಿಗೆ ತಂದು ಹಾಕಿ ಮತ್ತೆ ಮಾಸ್ತರರಿಗೆ ಹೇಳಿದ " ಆತನ ಶಿಕ್ಷಣಕ್ಕೆ ಕೇಳಿದ್ದು ಕೊಡಿರಿ ಹಣ ಮಾತ್ರ ಮೊದಲೆ ತೆಗೆದುಕೊಳ್ಳಿರಿ ಸಂಸ್ಕಾರ ಮಾತ್ರ ಸರಿಯಾಗಿ ಬೀಳಲಿ" ಎಂದು ನಮಸ್ಕರಿಸಿ ಮುಂದೆ ಸಾಗಿದರು.ಗುರುಗಳಿಗೆ ಆಗದ ಕಾರ್ಯ ವೇನಿದೆ ಹೇಳಿ.ಪ್ರಾಚೀನ ಕಾಲದಲ್ಲಿ ಒಬ್ಬ ರಾಜನಿದ್ದ ಆತನಿಗೆ ರಾಜ್ಯಾಡಳಿತ ನೋಡಿ ಕೊಳ್ಳುವಾಗ ಮಗನನ್ನು ಸರಿಯಾಗಿ ನೋಡಿ ಕೊಳ್ಳಲಾಗದೆ ಉಂಡಾಡಿ ಗುಂಡನಾಗಿ ಬೆಳೆದ ರಾಜನಿಗೆ ಮುಪ್ಪು ಆವರಿಸಿತು ಇನ್ನಾರು ತಿಂಗಳಲ್ಲಿ ಸಾಯುವವನಾದ ಹೀಗಾಗಿ ಚಿಂತಾಕ್ರಾಂತನಾದ ಕಾರಣವೆಂದರೆ ಈ ರಾಜ್ಯದ ಆಡಳಿತ ನೋಡಿ ಕೊಳ್ಳುವವರು ನನ್ನ ನಂತರ ಯಾರು ? ರಾಜ ಮಂತ್ರಿ ಗಳನ್ನು ಕರೆದು ಇದಕ್ಕೆ ಪರಿಹಾರ ಸೂಚಿಸಲು ತಿಳಿಸಿದ ರಾಜನಾಗಬೇಕಾದರೆ ವೇದ,ಉಪನಿಷತ್, ತತ್ವಜ್ಞಾನ, ರಾಮಾಯಣ, ಮಹಾಭಾರತ,ತರ್ಕ, ವ್ಯಾಕರಣ ಯುದ್ಧದ ಕಲೆ ಮುಂತಾದುವುಗಳನ್ನು ಕಲಿಯಲು 20 ವರ್ಷವಾದರೂ ಬೇಕು ಆದರೆ ರಾಜನಾದರೂ ಇನ್ನಾರು ತಿಂಗಳಲ್ಲಿ ಸಾಯುತ್ತಾನೆ ಅಷ್ಟರಲ್ಲಿ ಮಗನ ಪಟ್ಟ ಕಟ್ಟಬೇಕು ಅಷ್ಷರಲ್ಲ ಎಲ್ಲಾ ವಿದ್ಯೆಗಳನ್ನು ಹೇಗೆ ಕಲಿಸುವುದು .ಆಗ ಮಂತ್ರಿಗಳು ಸಲಹೆ ನೀಡುತ್ತಾರೆ ಇದು ಗುರುವಿನಿಂದ ಮಾತ್ರ ಸಾಧ್ಯ ಎಂದು ಗುರುವಿನ ಬಳಿ ಹೋಗುತ್ತಾರೆ. ಗುರುಗಳು ತಮ್ಮ ಅದ್ಭುತ ಶಕ್ತಿ ಯಿಂದ ಪ್ರಾಣಿ ಪಕ್ಷಿಗಳ ಕತೆಯ ಮೂಲಕ ಎಲ್ಲಾ ವಿದ್ಯಗಳ ಸಾರಗಳನ್ನು ಆರು ತಿಂಗಳಲ್ಲಿ ಕಲಿಸಿಕೊಡುತ್ತಾರೆ ಮುಂದೆ ಆತ ರಾಜನಾಗುವ ಅರ್ಹತೆ ಪಡೆದ. ಅವುಗಳೆ ವಿಷ್ಣಶರ್ಮ ಬರೆದ ಪಂಚತಂತ್ರದ ಕತೆಗಳು.ಹೀಗೆ ಗುರುವಿಗೆ ಆಗದ ಕೆಲಸವಿಲ್ಲ ಮಲ್ಲಯ್ಯ ಗುರುಗಳು ಬಸವನನ್ನು ವಿದ್ಯೆಗೆ ಹಪಹಪಿಸುವ ಒಳ್ಳೆಯ ಕೇಳುಗನನ್ನಾಗಿ ನಿರ್ಮಿಸಿದರು.ನಂತರ ಆಶೀರ್ವಾದ ಮಾಡಿ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲಾ ಹಂತಕ್ಕೆ ಪಕ್ಕದ ಊರಿಗೆ ಕಳುಹಿಸಿದರು ಸಮರ್ಪಕ ಶಿಕ್ಷಣ ಬಸವನ ಸತತ ಪ್ರಯತ್ನ ಪರಿ ಪೂರ್ಣತೆ ಕಡೆ ತೆಗೆದುಕೊಂಡು ಹೋಯಿತು.ಆದರೆ ತಂದೆ ತಾಯಿಯ ದುರ್ದೆಶೆ ಕೃಷಿಯನ್ನೆ ನಂಬಿದ ಅವರ ಬದುಕು ಬಯಲಿಗೆ ಬಂದಿತು.ಶಿಕ್ಷಣ ಅರ್ಧಕ್ಕೆ ನಿಲ್ಲಿಸಬೇಕೆನ್ನುವ ತಂದೆ ತಾಯಿಗಳ ನಿರ್ದಾರಗಳನ್ನು ಮೀರಿ ಸಂಸ್ಕಾರ ಸೆಟೆದು ನಿಂತತು ಕೃಷಿಯಲ್ಲಿ ತಂದೆ ತಾಯಿಗೆ ಸಹಾಯ ಮಾಡುತ್ತ ಮುನ್ನಡೆದ. ಕಾಲೇಜು ಬಿಟ್ಟಾಗ ಒಬ್ಬ ವ್ಯಕ್ತಿ ಏನು ಮಾಡುವುದು ಸಾಧ್ಯವಿತ್ತೊ ಅದೆನ್ನಲ್ಲವನ್ನು ಮಾಡಿದ ಬೀದಿ ದೀಪಗಳೆ ಆತನಿಗೆ ಓದಲು ಬೆಳಕು ನೀಡಿದವು ಸಂಬಂಧಿಗಳ ಬಿರುನುಡಿಗಳು ಮೆಟ್ಟಲುಗಳಾದವು ಕಾಲೇಜು ಪೂರ್ತಿಯಾಗಿ ಮುಗಿಸಿದಾಗ ಅದು ಮುಂದಿನ ಕ್ಲಾಸ್ ಬಡ್ತಿ ಯಾಗಿರಲಿಲ್ಲ ಬದಲಾಗಿ ಪ್ರಥಮ ದರ್ಜೆ ಯಲ್ಲಿ ಕಾಲೇಜಿಗೆ ಪ್ರಥಮನಾಗಿ ಪಾಸಾಗಿದ್ದ ಫಲಶ್ರುತಿ ಯಾಗಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಕನಾಗುವ ತರಬೇತಿ ಅವಕಾಶ ಒದಗಿ ಬಂದಿತು ಆ ಅವಧಿಯಲ್ಲಿ ಯೂ ಕೂಡಾ ಉಪನ್ಯಾಸಕರ ಪ್ರೀತಿಯ ವಿದ್ಯಾರ್ಥಿಯಾಗಿ ಒಬ್ಬ ಶ್ರೇಷ್ಠ ಉಪಾಧ್ಯಾಯನಾಗಿ ಹೊರಬಂದ. ಸರಕಾರದ ನಿಯಮಗಳು ಅವನನ್ನು ಕೈ ಹಿಡಿದವು ನೇರನೇಮಕದಿಂದ ಸಾವಿರಾರು ವಿದ್ಯಾರ್ಥಿಗಳ ಆಶಾಕಿರಣವಾದ ಅದು ಗುರುವಿನ ಬಲದ ಆಶೀರ್ವಾದವೆ ವಿನಹ ಬೇರೆ ಏನಲ್ಲ .ಗುರು ಕುಲ ತುಂಬಿದ ಆತ್ಮವಿಶ್ವಾಸ ಗುರುವಾಗಲು ದಾರಿ ದೀಪವಾಯಿತು.
Friday, February 12, 2021
Subscribe to:
Posts (Atom)
"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"
ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...
-
🌺 ಪ್ರಿಯ ಮಿತ್ರರೇ 💐🙏 ಭಾರತದ ಇತಿಹಾಸದಲ್ಲಿ ಗುಪ್ತರ ಕಾಲವನ್ನು "ಸುವರ್ಣಯುಗ" ಎಂದು ಕರೆಯಲಾಗುತ್ತದೆ, ಆದ್ದರಿಂದ ಕೆಎಎಸ್, ಪಿಎಸ್ಐ, ಇಎಸ್ಐ, ಎಸ್ಡಿಎ, ...
-
ಬಸವೇಶ್ವರರ ಸಾಮಾಜಿಕ –ಧಾರ್ಮಿಕ ಸುಧಾರಣೆಗಳು ಬಸವೇಶ್ವರರು ಬಾಗೆವಾಡಿಯಲ್ಲಿ ಮಾದರಸ ಮಾದಲಾಂಬಿಕೆಯ ಮಗನಾಗಿ ಜನಿಸಿ ಜಾತವೇದ ಮುನಿಗಳಲ್ಲಿ ವಿದ್ಯಾಭ್ಯಾಸ ಮಾಡಿ ಬಿಜ್ಜಳನ ಆಸ...
-
ಅಕ್ಬರನ ಸಾಧನೆಗಳು ಮೊಗಲರ ಅರಸರಲ್ಲಿಯೇ ಅಕ್ಬರ ಅತ್ಯಂತ ಶ್ರೇಷ್ಟ ಅರಸ.ಶೂರ ಸೇನಾನಿಯಾಗಿ ,ದಕ್ಷ ಆಡಳಿತಗಾನಾಗಿ, ಧರ್ಮ ಸಹಿಷ್ಣುವಾಗಿ,ಕಲೆ & ಸಾಹಿತ್ಯ ಫೋಷಕನಾಗ...