Wednesday, January 30, 2019

ಪ್ರಮುಖ ಘಟನೆಗಳ ಕಾಲಾನುಕ್ರಮಣಿಕೆ

7
ಕಾಲ                                      ಘಟಣೆ

4.5     ಬಿಲಿಯನ್ ವರ್ಷ       ಭೂಮಿಯ ಉಗಮ

700   ಮಿಲಿಯನ್ ವರ್ಷ      ಜೀವವು ನೀರಿನಲ್ಲಿ ಉಗಮ

500   ಮಿಲಿಯನ್ ವರ್ಷ  ಪ್ರೋಟೊಜೋವ ಉತ್ಪತಿ

 6000    ವರ್ಷಗಳ  ಹಿಂದೆ  ಉಳುಮೆ ಶೋಧ

BCE 3000    ಮಿನಸ್ ಇಜಿಪ್ತ ಒಂದುಗೂಡಿಸಿದ

 BCE 1500              ಇಜಿಪ್ತಿಯನ್ನರ ನೆರಳಿನ ಗಡಿಯಾರ

BCE 2123               ಹಮ್ಮುರಾಬಿ ಆಡಳಿತ ಪ್ರಾರಂಭ

BCE 221 -210          ಚೀನಾದ ಮಹಾಗೋಡೆ ನಿರ್ಮಾಣ

BCE 600              ಲಾವೋತ್ಸೆ

BCE 571             ಕನ್ ಪ್ಯೂಶಿಯಸ್

BCE 372             ಮೆನ್ಸಿಯಸ್

BCE 469-429        ಪೆರಿಕ್ಲಸ್  ಪಾರ್ಥನಾನ್ ದೇವಾಲಯ

BCE 485 -425         ಹೆರೋಡೋಟಸ್

BCE 469-399         ಸಾಕ್ರೆಟಸ್

BCE 427-347        ಪ್ಲೇಟೋ

BCE 384-322      ಅರಿಸ್ಟಾಟಲ್

BCE 776          ಒಲಂಪಿಕ್ಸ್ ಪ್ರಾರಂಭ

BCE  753        ರೋಮ ನಗರದ ಸ್ಥಾಪನೆ

BCE 509            ರೋಮನಲ್ಲಿ ಗಣರಾಜ್ಯ

 BCE 264-146         ಕಾರ್ಥೆಜಿಯನ್ ಯುದ್ಧಗಳು

BCE 48-44         ಜ್ಯೂಲಿಯಸ್ ಸೀಜರ್

BCE  29 -CE 15   ಅಗಸ್ಟಸ್ ಸೀಜರ್

BCE 4 - CE 30    ಯೇಸು ಕ್ರಿಸ್ತನ ಜನನ

CE 570           ಮಹಮ್ ದ ಪೈಗಂಬರರ ಜನ

CE 622           ಹಿಜಿರಾ ಶಕೆ

CE 476          ರೋಮ ಸಾಮ್ರಾಜ್ಯದ ಪತನ

CE 1414         ಪೋಪನ ಪ್ರಭುತ್ವದಲ್ಲಿ ಒಡಕು

CE 1453          ಕಾನಸ್ಟಾಂಟಿನೊಪಲ್ ಪತನ

CE 1454.    ಮದ್ರಣ ಯಂತ್ರದ ಶೋಧ

CE 1488    ಬಿ ಡಯಾಜ ದಕ್ಷಣ ಆಪ್ರಿಕಾದ ತುದಿ ತಲುಪದ್ದು

CE 1492    ಕೋಲಂಬಸ್ ಅಮೆರಿಕಾ ಕಂಡುಹಿಡಿದಿದ್ದು

CE 1498          ವಾಸ್ಕೋ ಡ ಗಾಮ ಭಾರತಕ್ಕೆ ಜಲಮಾರ್ಗ್ ಕಂಡು ಹಿಡಿದದ್ದು.

CE 1483 -1546    ಮಾರ್ಟಿನ್ ಲೂಥರ್

CE 1545      ಟ್ರೆಂಟ್ ಕೌನ್ಸಿಲ್

CE 1555        ಆಗ್ಸ್ ಬರ್ಗ ಶಾಂತಿ ಒಪ್ಪಂದು.

CE 1750-1850    ಕೈಗಾರಕಾ ಕ್ರಾಂತಿ

CE 1776         ಅಮೆರಕಾ ಕ್ರಾಂತಿ

CE 1789         ಪ್ರಾನ್ಸ ಮಹಾಕ್ರಾಂತಿ

CE 1764          ಸಕ್ಕರೆ ಕಾಯಿದೆ   ಸ್ಟಾಂಪ್ ಕಾಯಿದೆ

CE 1768         ಬೋಸ್ಟನ್ ಕಗ್ಗೊಲೆ

CE 1773          ಬೋಸ್ಟನ್ ಟಿ ಪಾರ್ಟಿ

CE 1774         ಪ್ರಥಮ ಪಿಲಿಡೆಲ್ಪಯಾ ಕಾಂಗ್ರೆಸ್

CE 1783       ಪ್ಯಾರಿಸ್ ಒಪ್ಪಂದ

CE 1769-1821   ನೆಪೋಲಿಯನ್ ಬೋನಾಪಾರ್ಟಿ

CE 1802       ಕಾನ್ ಕಾರ್ಡಟ್

CE 1804       ಟ್ರಫಾಲ್ಗಾರ ಕಾಳಗ

CE 1805       ಆಸ್ಟರ್ ಲಿಡ್ಜ ಕಾಳಗ

CE 1806-07   ಖಂಡಾಂತಾರ ಪದ್ಧತಿ

CE 1812       ರಷ್ಯ ದಂಡ ಯಾತೆ

CE 1813      ಲಿಪಜಿಗ್ ಕಾಳಗ

CE 1815       ವಾಟರಲೂ ಕಾಳಗ

CE 1815 1898   ಬಿಸ್ಮಾರ್ಕ

CE 1831        ಯಂಗ ಇಟಲಿ ಸ್ಥಾಪನೆ

CE 1848       ಫ್ರಾಂಕ ಫರ್ಟ ಸಂಸತ್ತು

CE 1854 56    ಕ್ರಿಮಿಯಾ ಯುದ್ಧ

CE  1859       ವಿಲ್ಲಾಫ್ರಾಂಕ ಒಪ್ಪಂದ

CE  1864      ಡೆನ್ಮಾರ್ಕನೋಂದಿಗೆ ಯುದ್ಧ

CE 1866          ಆಸ್ಟೋ-ಪ್ರಷ್ಯನ್ ಯುದ್ಧ

 CE 1870         ಇಟಲಿ ಏಕೀಕರಣ

CE 1871         ಜರ್ಮನಿ ಎಕೀಕರಣ

CE 1870-71      ಪ್ರಾಂಕೋ--ಪ್ರಷ್ಯನ್ ಯುದ್ಧ

CE  1872-1924     ಲೆನಿನ್

CE 1883           ಮುಸೋಲಿನ್ ಜನನ

CE 1889          ಹಿಟ್ಲರ್ ಜನನ

CE 1905          ರಕ್ತ ಸಿಕ್ತ ರವಿವಾರ

CE 1914 -1918     ಜಾಗತಿಕ ಪ್ರಥಮ ಮಹಾಯುದ್ದ

CE 1917          ರಷ್ಯ ಕ್ರಾಂತಿ

CE 1919         ವರ್ಸೇಲ್ಸ ಒಪ್ಪಂದ

CE 1921         ಹೊಸ ಆರ್ಥಿಕ ನೀತಿ

CE 1937        ರೋ-ಬರ್ಲಿನ್ ಟೋಕಿಯೋ ಅಕ್ಸಸ್

CE 1945        ವಿಶ್ವ ಸಂಸ್ಥೆ ಸ್ಥಾಪನೆ.

CE 1948         ಡಿಸೆಂಬರ್ 25 ಮಾನವ ಹಕ್ಕುಗಳ ಘೋಷಣೆ

CE 1949         ಮೊದಲನೆ ಬರ್ಲಿನ್ ಬೊಕ್ಕಟ್ಟು

CE 1950         ರಷ್ಯ –ಚೀನಾ ರಕ್ಷಣಾ ಒಪ್ಪಂದ

CE  1950-53  ಕೋರಿಯಾ ಆಂತರಿಕ ಬಿಕ್ಕಟ್ಟು

CE 1955        ವಾರ್ಸಾ ಒಪ್ಪಂದ

CE 1958-1961        ಎರಡನೆ ಬರ್ಲಿನ್ ಬಿಕ್ಕಟ್ಟು

CE 1955 75            ವಿಯಟ್ನಾಂ ಯುದ್ಧ

CE 1949            ನ್ಯಾಟೋ ಒಪ್ಪಂದ

CE 1954          ಸಿಯಾಟೋ

CE 1951                ಅಂಜುಸ್

CE 1955               ಸೆಂಟೋ

CE 1961          ಬೆಲ್ಗ್ರೆಡ್ ಸಮ್ಮೇಳನ

CE 1963         ಅಣು ಪರೀಕ್ಷೆ ನಿಷೇದ ಒಪ್ಪಂದ

CE 1973       ನೇ ಸಾಲ್ಟ ಒಪ್ಪಂದ

CE 1979       ಎರಡನೆ ಸಾಲ್ಟ ಒಪ್ಪಂದ

CE 1983       ದೆಹಲಿ ಅಲಿಪ್ತ ಸಮ್ಮೇಳನ

CE 1991       ಶೀತಲ ಸಮರದ ಅಂತ್ಯ

CE  1991       ಸ್ವತಂತ್ರ ರಾಜ್ಯಗಳ ಕಾಮನ್ ವೆಲ್ತ ಒಕ್ಕೂಟ

CE 2012        ಟೆಹರಾನ್ ಸಮ್ಮೇಳನ













Monday, January 14, 2019

ಅಕ್ಬರನ ಸಾಧನೆಗಳು

ಅಕ್ಬರನ ಸಾಧನೆಗಳು
    ಮೊಗಲರ ಅರಸರಲ್ಲಿಯೇ ಅಕ್ಬರ ಅತ್ಯಂತ ಶ್ರೇಷ್ಟ ಅರಸ.ಶೂರ ಸೇನಾನಿಯಾಗಿ ,ದಕ್ಷ ಆಡಳಿತಗಾನಾಗಿ, ಧರ್ಮ ಸಹಿಷ್ಣುವಾಗಿ,ಕಲೆ & ಸಾಹಿತ್ಯ ಫೋಷಕನಾಗಿ ಭಾರತ ಚರಿತ್ರೆಯಲ್ಲಿ ಮಹಾಶಯನೆಂದು   ಹೆಸರಾಗಿದ್ದಾನೆ.
  ಅಕ್ಬರ ಹುಮಾಯೂನ ಹಾಗು ಹಮೀದಾಬಾನು ಬೇಗಂ ಮಗನಾಗಿ  ಸಾ.ಶ.1542 ಸಿಂಧದ ಅಮರಕೊಟದಲ್ಲಿ ಜನಿಸಿದ ತಂದೆಯ ಅಕಾಲ ಮರಣದಿಂದಾಗಿ ಚಿಕ್ಕಪ್ಪ ಬೈರಮಖಾನನ ಪೋಷಣೆಯಲ್ಲಿ ಬೆಳೆದ ಈತ ಅಧಿಕಾರಕ್ಕೆ ಬಂದಾಗ ಅನೇಕ ಆಂತರಿಕ ಸಮಸ್ಯೆಗಳನ್ನು ಎದುರಿಸಿ ಅವುಗಳಿಂದ ಮುಕ್ತನಾದ
ಸೈನಿಕ ಸಾದನೆಗಳು
2ನೇ ಪಾನಿಪತ್ ಕಾಳಗ : 1556 ಬಂಗಾಳದ ಆದಿಲ್ ಷಾನ ಮಂತ್ರಿ ಹೇಮುವನ್ನು ಪಾಣಿಪತ್ ಕದನದಲ್ಲಿ ಸೋಲಿಸಿ ದೆಹಲಿ,ಆಗ್ರಾ ವಶಪಡಿಸಿಕೊಂಡ.
ಗೊಂಡವನದ ರಾಣಿದುರ್ಗಾವತಿ ಸೋಲಿಸಿ ಗೊಂಡವನ ರಾಜ್ಯವನ್ನು ವಿಲೀನೀಕರಿಸಿಕೊಂಡ.
ಗುಜರಾತಿನ ಮುಜಾಫರ ಷಾನನ್ನು ಸೋಲಿಸಿ ಗುಜರಾತ ವಶಪಡಿಸಿಕೊಂಡ.ಬಂಗಾಲ ಓರಿಸ್ಸಗಳನ್ನು ವಶಪಡಿಸಿಕೊಂಡು ರಾಜ್ಯದಲ್ಲಿ ವಿಲಿನೀಕರಿಸಿದ. ಹಕೀಮ ಮಿರ್ಜಾನನ್ನು ಸೊಲಿಸಿ ಕಾಬುಲು ಹಾಗೂ ಕಾಶ್ಮೀರಗಳನ್ನು ವಶಪಡಿಸಿಕೊಂಡ.
ರಜಪೂತ ನೀತಿ: ಸಾಮ್ರಾಜ್ಯ ವಿಸ್ತರಿಸಲು ರಜಪೂತರೊಂದಿಗೆ ಸ್ನೇಹ ಸಂಬಂಧದ ,ಸಹಕಾರದ ಹಾಗೂ ವೈವಾಹಿಕ ಸಂಬಂಧ ಬೆಳೆಸುವ ನೀತಿಯನ್ನು ಅನುಸರಿಸಿದ. ಅಂಬರದ ಬಿಹಾರಿಮಲ್ಲನ ಮಗಳಾದ ಜೋದಾಬಾಯಿಯನ್ನು ಮದುವೆಯಾದ.ರಣತಂಭೊರ ,ಕಲಿಂಜರ ಬಿಕಾನೇರ ಮುಂತಾದ ಅರಸರು ಇವನ ಸಾರ್ವಭೌಮತ್ವವನ್ನು ಒಪ್ಪಿಕೊಂಡರು.ಅಲ್ಲದೆ ದಕ್ಷಿಣÀದ ರಾಜ್ಯಗಳಾದ ಬೀದರ್ ಖಾನ್ದೇಶ,ಅಹಮದನಗರ ಬಿಜಾಪುರ ಅಕ್ಬರನ ಸಾರ್ವಭೌಮತ್ವನ್ನು ಒಪ್ಪಿಕೊಂಡವು.
ಅಕ್ಬರನ ಆಡಳಿತ; ಸಾಮ್ರಾಜ್ಯಕ್ಕೆ ಒಂದು ಉತ್ತಮ ಆಡಳಿತ ಒದಗಿಸಿದನು ಆಡಳಿತದ ಕೇಂದ್ರವಾಗಿದ್ದ ಇವನನ್ನು ಬಾದಷಹಾ ಎಂದು ಕರೆಯಲಾಗುತ್ತಿತ್ತು.ಮಂತ್ರಿಗಳ ಸಹಾಯದಿಂದ ಆಡಳಿತ ನಿರ್ವಹಿಸುತ್ತಿದ್ದ.ಅವರುಗಳೆಂದg ವಕೀಲ,ದಿವಾನ,ದಿವಾನ್ ಇ ಅಲ್  ಮಿರ್ ಬಕ್ಷಿ,ಸದರ್ ಉಸ್ ಸದರ ಖಾನ ಇ ಸಮನ್ ಹಾಗೂ ಖಾಜಿ ಇತ್ಯಾದಿ.ಅಕ್ಬರ ತನ್ನ ಸಾಮ್ರಾಜ್ಯವನ್ನು 16 ಪ್ರಾಂತ್ಯಗಳನ್ನಾಗಿ ಮಾಡಿದ್ದ ಪ್ರಾಂತ್ಯಗಳ ಆಡಳಿತವನ್ನು ದಿವಾನ,ಬಕ್ಷಿ,ಸದರ,ಪೌಜದಾರ ಕೊತ್ವಾಲ ನೋಡಿಕೊಳ್ಳುತ್ತಿದ್ದರು.
ಮನಸಬ್ದಾರಿ ಪದ್ದತಿ: ಅಕ್ಬರ ಸೈನಿಕ ಹಾಗೂ ನಾಗರಿಕ ಆಡಳಿತದಲ್ಲಿ ಮನಸಬ್ದಾರಿ ಪದ್ದತಿ ಜಾರಿಗೆ ತಂದ ಮನಸಬ್ ಎಂದರೆ ಶ್ರ್ರೀಣಿ ಎಂದರ್ಥ ಈತನ ಆಸ್ಥಾನದಲ್ಲಿ 10ರಿಂದ 10 ಸಾವಿರದ ಸೈನಿಕರನ್ನು ನಿಯಂತ್ರಿಸುವ ವಿವಿಧ ಶ್ರೇಣಿಯ ಮನಸಬ್ದಾರರಿದ್ದರು ಮನಸಬ್ದಾರಿ ಪದ್ಧತಿಯು “ಜಾಟ” ಮತ್ತು “ಸವಾರ್’ರನ್ನು ಒಳಗೊಂಡಿತ್ತು. ಮನಸಬ್ದಾರನು ನಿರ್ವಹಿಸುವ ಸೈನಿಕರ ಸಂಖ್ಯೆಯನ್ನು ಜಾಟ ಸೂಚಿಸುತ್ತದೆ.ಸವಾರ ಎಂದರೆ ಅವನು ನಿರ್ವಹಿಸುವ ನಿರ್ದಷ್ಟ ಕುದುರೆ ಸಂಖ್ಯೆಯಾಗಿತ್ತು.
ರಾಜಾ ತೋದರ ಮಲ್ಲನ ಕಂದಾಯ ಪದ್ದತಿ: ಅಕ್ಬರನು ಕಂದಾಯ ಮಂತ್ರಿ ತೊದರ ಮಲ್ಲನಿಂದ ಅತ್ಯುತ್ಮಮ ರೀತಿಯ ಕಂದಾಯ ಪದ್ಧತಿ ರೂಪಿಸಿದ್ದ ಇದನ್ನು ಜಬ್ತಿ ಪದ್ಧತಿ ಎಂದುಕರೆಯಲಾಗಿತ್ತು ಈ ಪದ್ಧತಿಯನ್ವಯ ಭೂಮಿಯ ಫಲವತ್ತತೆ ಆಧಾರದ ಮೇಲೆ ಪೋಲಜ್, ಪರೌತಿ, ಚಚರ್, ಬಂಜರ ಎಂದು ವರ್ಗಿಕರಿಸಲಾಗಿತ್ತು.ಬಂದೋಬಸ್ತ ಪದ್ಧತಿಯಲ್ಲಿ ಸುಗ್ಗಿ ಕಾಲದಲ್ಲಿ ಅಧಿಕರಿಗಳು ವೀಕ್ಷಣೆಗೆ ಹೋಗಿ ಕೃಷಿ ಭೂಮಿಗಳ ಸ್ಥಿತಿಗತಿಗಳನ್ನು ಗಮನಿಸಿ ಸಲಹೆ ಸೂಚನೆ ಹಾಗೂ ಸಾಲ ಸೌಲಬ್ಯ ನಿಡುತ್ತಿದ್ದರು.
ಧಾರ್ಮಿಕ ನೀತಿ: ಅಕ್ಬರ ಮಧ್ಯಕಾಲೀನ ಭಾರತದಲ್ಲಿ ಜ್ಞಾನ ಸಂಪನ್ನ ಅರಸ 1581-82 ರಲ್ಲಿ ದಿನ್ –ಇ-ಇಲಾಹಿ ಎಂಬ ಹೊಸ ಧರ್ಮ ಸ್ಥಾಪಸಿದ ಈ ಹೊಸ ಧರ್ಮ ಸರ್ವರಿಗೂ ಶಾಂತಿ ಎಂಬ ತತ್ವವನ್ನಾಧರಸಿತ್ತು .ವಿವಿಧ ಮತಗಳನ್ನು ಭ್ರಾತೃ ಭಾವನೆಯಂದ ಒಗ್ಗೂಡಿಸುವ ಪ್ರಯತ್ನ ಇದಾಗಿತ್ತು.
ಸಾಹಿತ್ಯ ಫೋಷಣೆ :ಅಕ್ಬರನ ಕಾಲದಲ್ಲಿ ಅಪಾರ ಪ್ರಮಾಣದ ಸಂಸ್ಕತ ಹಾಗೂ ಇ್ರತರೆ ಭಾಷೆಯ ಸಾಹಿತ್ಯ ಕೃತಿಗಳು ಭಾಷಾಂತರಗೊಂಡವು,ರಾಮಾಯನ,ಮಹಾಭಾರತ, ರಾಜತರಂಗಿಣಿ,ಪಂಚತಂತ್ರ ಇತ್ಯಾದಿ. ಹಿಂದಿ ಸಾಹಿತ್ಯದಲ್ಲಿ ಸೂರದಾಸ, ತುಳಿಸಿದಾಸ,ಅಬ್ದುಲ್ ರಹಿಮ ಖ್ಯಾತ ಸಾಹಿತಿಗಳಾಗಿದ್ದರು.ಅಬಲ್ ಫಜಲ್ ಐನ್-ಇ-ಅಕ್ಬರಿ ಮತ್ತು ಅಕ್ಬರನಾಮಾ ಕೃತಿ ಬರೆದ.
ಕಲೆ ಮತ್ತು ವಾಸ್ತು ಶಿಲ್ಪ ;ಅಂಬರ್,ಬಿಕಾನೇರ ,ಜೋಧ್‍ಪುರ್ ಹಲವಾರು ಕಡೆ ಅರಮನೆ ನಿರ್ಮಿಸಿದನು.ಕರೆ ಕಾಲುವೆ ನಿರ್ಮಿಸಿದ,ಅವನ ಪ್ರಭಾವ ಪೂರ್ಣ ಕಟ್ಟಡಗಳನ್ನು ಪತ್ತೇಪುರ ಸಿಕ್ರಿಯಲ್ಲಿ ಕಾಣಬಹುದು.ಅವುಗಳೆಂದರೆ ಬುಲಂದ್ ದರ್ವಾಜ,ಪಂಚಮಹಲ್ ಸಲೀಂ ಚಿಸ್ತಿ ಘೋರಿ,ಜೋಧಾಬಾಯಿ ಅರಮನೆ, ದಿವಾನ -ಇ-ಅಮ್,ದಿವಾನ –ಇ-ಖಾಸ್ ಇತ್ಯಾದಿ.
   ಮೊಗಲ್ ಚಕ್ರವರ್ತಿಗಳಲ್ಲಿಯೆ ಅತ್ಯಂತ ಪ್ರಸಿದ್ದ ಅರಸನಾದ ಅಕ್ಬರ ಅನಕ್ಷರನಾದರೂ ಎಲ್ಲಾ ವಿವರ ಗಳನ್ನು ಗ್ರಹಿಸುವ ಅಗಾದವಾದ ತಿಳುವಳಿಕೆ ಹಾಗೂ ಅಪುರ್ವ ಜ್ಞಾನ ಶಕ್ತಿಯನ್ನು ಹೊಂದಿದ್ದನು ತತ್ವ ಶಾಸ್ತ್ರ ಇತಿಹಾಸ ಸಾಹಿತ್ಯಗಳಲ್ಲಿ ಅಪಾರ ಜ್ಞಾನ ಹೊಂದಿದ್ದನು. ಹಿಗಾಗಿಯೆ  ಅಕ್ಬರನನ್ನು ಮಹಾಶಯ ಎಂದು ಕರೆಯಲಾಗಿದೆ




"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...