Sunday, June 1, 2025

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"


ಶಾಂತಿ ಮಂತ್ರ ಪಠಿಸುವ ಶಾಲೆಯ
ಕ್ರಾಂತಿಯ ಗೀತೆಯ ಹಾಡುವ ಕಲಿಗಳು
ಕೆದುಕದೆ ಕದನ ಮಾಡದ ಹುಲಿಗಳು
ಭಾರತದ ಯೋಧರು ಭಾಗ್ಯವಿದಾತರು॥

ಹೆತ್ತವರ ಮಮತೆ ಮನದಲ್ಲಿ ನೆಟ್ಟು
ಮಡದಿಯ ಪ್ರೀತಿಯ ಅದುಮಿಟ್ಟು
ಉತ್ತರದ ಹಿಮಶಿಖರ ಹತ್ತುವರು, 
ತಟ್ಟಿದರೆ ನೆತ್ತರಿನೋಕಳಿಯಾಡುವರು॥

ರಕ್ತ ಹೆಪ್ಪುಗಟ್ಟಿದರೂ ತಪ್ಪಿಸಿಕೊಳ್ಳದೆ
ಸೂಕ್ತ ಸಮಯಕೆ ಕಾಯುವವರು
ವೈರಿ ತಂತ್ರಕೆ ಪ್ರತಿ ತಂತ್ರ ಹೆಣೆಯುವರು
ಮಂತ್ರ ಒಂದೆ ನಾವು ಭಾರತೀಯರು॥

ಪಾಕ್ ಕುನ್ನಿಗಳ ಹೇತು ಒಂದೇ
ಕಾಶ್ಮೀರ ಕದಿಯಲು ಭಯೋತ್ಪಾದನೆ ಮುಂದೆ
ಕಾರ್ಗಿಲ್ ದ್ರಾಸ್ ಭೇಧಿಸ ಬಯಸಿದರು
ಧೀರ ಯೋಧರು ಗುನ್ನ ಇಟ್ಟರು ಅಂದು॥

ಜೈ ಜವಾನ ಜೈ ಕಿಸಾನ
ಬರಿ ಘೋಷಣೆಯಲ್ಲ ಭಾರತದುಸಿರು
ಯೋಧರ ಕಷ್ಟಕೆ ಹಿಂದುಸ್ತಾನ ಮುಂದು
ಗಡಿ ಕಾಯುವವರಿಗೆ ಗುಡಿ ಕಟ್ಟುವರಿಂದು ॥


No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...