Friday, February 1, 2019

ಬಸವೇಶ್ವರರ ಸಾಮಾಜಿಕ –ಧಾರ್ಮಿಕ ಸುಧಾರಣೆಗಳು

ಬಸವೇಶ್ವರರ ಸಾಮಾಜಿಕ –ಧಾರ್ಮಿಕ ಸುಧಾರಣೆಗಳು ಬಸವೇಶ್ವರರು ಬಾಗೆವಾಡಿಯಲ್ಲಿ ಮಾದರಸ ಮಾದಲಾಂಬಿಕೆಯ ಮಗನಾಗಿ ಜನಿಸಿ ಜಾತವೇದ ಮುನಿಗಳಲ್ಲಿ ವಿದ್ಯಾಭ್ಯಾಸ ಮಾಡಿ ಬಿಜ್ಜಳನ ಆಸ್ಥಾನದಲ್ಲಿ ಕರಣಿಕನಾಗಿ ನಂತರ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅಂದಿನ ಸಮಾಜದಲ್ಲಿ ರೂಢಿಯಲ್ಲಿದ್ದ ಮೂಢನಂಬಿಕೆ ಮೂರ್ತಿಪೂಜೆ ಪ್ರಾಣಿಬಲಿಗೆ ಆಧಾರವಿಲ್ಲಿವೆಂದು ಅದರ ವಿರುದ್ಧ ಜಾಗ್ರತಿ ಮೂಡಿಸಿದರು ಅಲ್ಲದೆ ಜಾತಿ ಪದ್ಧತಿಗೆ ಧರ್ಮಶಾಸ್ತ್ರಗಳ ಆಧಾರವಿಲ್ಲವೆಂಬದನ್ನು ಸ್ಪಷ್ಟಪಡಿಸದರು. ಧಾರ್ಮಿಕಸುಧಾರಣೆಗಳು :
ಬಸವೇಶ್ವರರು ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಿಸಿದರು.ಲಿಂಗಪೂಜೆಗೆ ಆದ್ಯತೆ ನೀಡಿದರು ಮತ್ತು ಜಾತಿ,ಲಿಂಗ ಭೇಧವಿಲ್ಲದೆ ಎಲ್ಲರೂ ಲಿಂಗಧಾರಣೆ ಮಾಡಲು ಅವಕಾಶ ನೀಡಿದರು. ಲಿಂಗಾಯಿತ ಧರ್ಮದಲ್ಲಿ ಶಿವಪೂಜೆಗೆ ಆದ್ಯತೆ, ಇಲ್ಲಿ ಲಿಂಗ ಮತ್ತು ಅಂಗ ಎಂಬ ಎರಡು ಭಾಗಗಳಿವೆ,ಅಂಗವು ಲಿಂಗೈಕ್ಯವಾಗುವದೆ ಮೋಕ್ಷ, ಶಿವ ಮತ್ತು ಶಕ್ತಿ ವಿಲೀನ ಬಸವ ತತ್ವಕ್ಕೆ ಆಧಾರಇದನ್ನೆ ಶಕ್ತಿ ವಿಶಿಷ್ಟಾದ್ವೈತ ಎಂದು ಕರೆಯಲಾಗಿದೆ ಲಿಂಗಾಯತರು ಅಷ್ಟಾವರಣ ಪಾಲಿಸಬೇಕು. ಗುರು ಲಿಂಗ ಜಂಗಮಕ್ಕೆ ಗೌರವತೋರುವುದು,ಹಣೆಗೆ ವಿಭೂತಿ ಧರಿಸುದು ಮುಂತಾದವು .ಬಸವೇಶ್ವರರು ಭಕ್ತಿ ಮಾರ್ಗ ಪ್ರತಿಪಾದಿಸಿರು.
ಸಾಮಾಜಿಕ ಸುಧಾರಣೆಗಳು: ಬಸವೇಶ್ವರು ಜಾತಿ ಪದ್ಧತಿಯನ್ನು ಕಟುವಾಗಿ ಟೀಕಿಸಿದರು ಮಾನವನ ಅಂತಸ್ತು ಅವನ ಯೋಗ್ಯತೆಯಿಂದ ನಿರ್ದಾರವಾಗುವದೆ ಹೊರತು ಜಾತಿಯಿಂದಲ್ಲ ಎಂದರು. ಅದನ್ನು ಹೋಗಲಾಡಿಸಲು ಸಹಬೋಜನ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹಿಸಿದರು.ಬ್ರಾಹ್ಮಣ ಮಧುವಯ್ಯನ ಮಗಳಿಗೂ ಹರಿಜನ ಹರಳಯ್ಯ ನ ಮಗನಿಗೂ ವಿವಾಹ ಮಾಡಿಸದರು ಅವರಿಬ್ಬರೂ ಶಿವಭಕ್ತರಾದರು. ಪ್ರಾಣಿ ಬಲಿ ತಡೆದು ದಯವೇ ಧರ್ಮದ ಮೂಲವಯ್ಯ ಎಂದರು. ‘ಕಲ್ಲು ನಾಗರ ಕಂಡರೆ ಹಾಲನೆರೆ ಎಂಬವರು ದಿಟ ನಾಗರ ಕಂಡರೆ ಕೊಲ್ಲೆಂಬರಯ್ಯ’ಎನ್ನುವ ಮೂಲಕ ಕಲ್ಲು ಮರಗಳ ಪೂಜೆ ಯನ್ನು ಕಂಡಿಸಿದರು.ಉಳ್ಳವರು ಶಿವಾಲಯ ಮಾಡುವರಯ್ಯ ನಾನೇನು ಮಾಡವೆ ಬಡವನಯ್ಯ…..ಎಂಬ ವಚನಗಳ ಮೂಲಕ ಡಂಬಾಚಾರ ಬಯಲಿಗೆಳೆದರು ಕಾಯಕ ಮುಕ್ತಿಗೆ ದಾರಿ ತೋರಬಲ್ಲದು ಮತ್ತು ಕಾಯಕವು ಭಕ್ತಿಯ ಇನ್ನೊಂದು ರೂಪವಾದ್ದರಿಂದ ಕಾಯಕವೆ ಕೈಲಾಸ ವೆಂದರು. ಸರಳತೆ ಸಚ್ಚಾರಿತ್ರ್ಯ ಅನುಕಂಪ ರೂಡಿಸಿಕೊಳ್ಳಲು ಆಚಾರವೆ ಸ್ವರ್ಗ ಅನಾಚರವೆ ನರಕವೆಂದರು. ಕಳಬೇಡ,ಕೊಲಬೇಡ,ಹುಸಿಯ ನುಡಿಯಲುಬೇಡ, ಇದೆ ಅಂತರಂಗ ಶುದ್ಧಿ, ಇದೆ ಬಹಿರಂಗ ಶುದ್ಧಿ ಎಂದು ಅಂತರಂಗದ ಶುದ್ಧಿಗೆ ಆದ್ಯತೆ ನೀಡಿದರು ,ಅಲ್ಲದೆ ವ್ಯಕ್ತಿಯು ಸಂಗ್ರಹಣೆಯಲ್ಲಿ ತೋಡಗದೆ ದಾಸೋಹದಲ್ಲಿ ತೊಡಗಬೇಕೆಂದರು .ತಮ್ಮ ಈ ತತ್ವಗಳ ಪ್ರಚಾರಕ್ಕೆ ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಸಿದರು .ಜನರಲ್ಲಿ ಜಾಗೃತಿ ಮತ್ತು ಸಮಾಜ ಸುಧಾರಣೆ ಮಾಡಲು 5000 ಕ್ಕೂ ಹೆಚ್ಚು ವಚನಗಳನ್ನು ರಚಿಸಿದರು.

3 comments:

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...