Friday, May 24, 2019

ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವ


ಭಾರತದ ಇತಿಹಾಸದ  ಮೇಲೆ ಭೂಗೋಳದ ಪ್ರಭಾವ

       ಭಾರತದ ಭೌಗೋಳಿಕ ಲಕ್ಷಣಗಳಾದ ಹಿಮಾಲಯ ಪರ್ವತಗಳು ಉ.ಬಯಲು ದ.ಪ್ರಸ್ಥಭೂಮಿ ಮತ್ತು ಕರಾವಳಿಗಳು  ಭಾರತದ ಸಾಂಸ್ಕೃತಿಯ ಬೆಳವಣಿಗೆಗೆ ಸಹಾಯಕವಾಗಿವೆ.
   ಹಿಮಾಲಯ ಪರ್ವತ ಭಾರತವನ್ನು ಏಷ್ಯಾದ ಇನ್ನುಳಿದ ಭಾಗಗಳಿಂದ ಪ್ರತ್ಯೆಕಿಸಿದೆ. ನೈಸರ್ಗಿಕ ತಡೆಗೋಡೆಯಾಗಿ ಉತ್ತರದ ಆಕ್ರಮಣಕಾರರನ್ನು ಹಾಗೂ ಶೀತ ಮಾರುತಗಳಿಂದ ರಕ್ಷಿಸಿದೆ
    ಸದಾಕಾಲ ಹರಿಯುವ ನದಿಗಳಿಂದ ನಿರ್ಮಾಣವಾದ ಉತ್ತರದ ಫಲವತ್ತಾದ ಬಯಲುಗಳು ನಾಗರಿಕತೆ ಮತ್ತು ಸಾಮ್ರಾಜ್ಯದ ತೊಟ್ಟಿಲುಗಳಾಗಿದ್ದವು &ಆಧ್ಯಾತ್ಮಿಕ ಮತ್ತು ತತ್ವಜ್ಞಾನದ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿವು
     ಉತ್ತರದ ಖೈಬರ್ ಮತ್ತು ಬೋಲಾನ ಕಣಿವೆಗಳು ಭಾರತಿಯರಿಗೆ ಪಾಶ್ಚಿಮಾತ್ಯರೊಂದಿಗೆ ವಾಣಿಜ್ಯ ಮತ್ತು ಸಾಂಸ್ಕೃತಿಕ ಸಂಬಂಧ ಬೆಳೆಸಲು ಸಹಾಯ ಮಾಡಿದವು.
      ಪಶ್ಚಮದ ಮರುಭೂಮಿ ಮತ್ತು ದಟ್ಟ ಕಾಡುಗಳು ಜನರನ್ನು ಕಠಿಣ ಪರಿಶ್ರಮಿ ಹಾಗೂ ಯುದ್ದ ಪ್ರಿಯರನ್ನಾಗಿ ಮಾಡಿದವು
  ದಕ್ಷಿಣಕ್ಕಿರುವ ಸಮುದ್ರಗಳು ಒಂದು ಕಾಲದ ತಡೆ ಬೇಲೆಗಳಾಗಿದ್ದವು ಆದರೆ ನಂತರದಲ್ಲಿ ಜಗತ್ತಿನ ಇತರ ಭಾಗಗಳೊಂದಿಗೆ ಸಂಪರ್ಕ ಬೆಳಿಸಲು ಸಾಧನಗಳಾದವು.
    ಉಪಖಂಡದಲ್ಲಿರುವ ಭೌಗೋಳಿಕ ಭಿನ್ನತೆ  ಹಾಗೂ ವೈವಿಧ್ಯಪೂರ್ಣ ವಲಯಗಳು ದ್ರಾವಿಡ ,ಮಂಗೋಲಾಯಿಡ  ಮುಂತಾದ ಜನಾಂಗಗಳು ಅಸ್ತಿತ್ವದಲ್ಲಿರುವದರಿಂದ ವಿವಿದ ಭಾಷೆ  ಸಂಸ್ಕೃತಿ ಬೆಳವಣಿಗೆಗೆ ದಾರಿಯಾಯಿತು
  ನದಿ ಬಯಲುಗಳು ಭಾರತವನ್ನು ಕೃಷಿ ಪ್ರಧಾನ ದೇಶವನ್ನಾಗಿ ಮಾಡಿವೆ ಮತ್ತು ಇಲ್ಲಿನ ಅನೆಕ ವಿವಿಧ ಖನಿಜ ಹಾಗೂ ಬಂಡೆಗಳು ಲಬ್ಯವಿರುವದರಿಂದ ವಾಸ್ತು ಶಿಲ್ಪದ ಬೆಳವಣಿಗೆಗೆ ಸಹಕಾರಿಯಾಗಿದೆ
    ವಿಫುಲ ಮಳೆ ಅನುಕೂಲಕರ ಹವಾಮಾನವು ಸಂಪದ್ಬರಿತ ಮತ್ತು ವೈವಿಧ್ಯಪೂರ್ಣ ಸಸ್ಯ ಹಾಗೂ ಪ್ರಾಣಿವರ್ಗದ ಬೆಳವಣಿಗೆಗೆ ಕಾರಣವಾಯಿತು

Wednesday, May 1, 2019

ಬಸವ , ಬಸವ ಬಾರೋ ನೀ ಬಸವೇಶ

ಬಸವ , ಬಸವ ಬಾರೋ ನೀ ಬಸವೇಶ
ಕೆಸರಾದ ಕೈ ಮೊಸರಾಗಲೆಂದು
ಕಾಯಕ ಕೈಲಾಸವೆಂದೆ ಕಾಯಕಕ್ಕೆ
ಗೌರವ ತಂದೆ ಕರುನಾಡಿಗೆ ಬೆಳಕು ತಂದೆ
ಬಸವ, ಬಸವ ಬಾರೋ ನೀ ಬಸವೇಶ //

ಕಲ್ಯಾಣ ರಾಜ್ಯದ ಕಣ್ಮನಿಯಾದೆ
ಕಾರ್ಯ ತತ್ಪರತೆಗೆ ಹೆಸರಾದೆ
ವಚನ ಸಾಹಿತ್ಯದ ತಾಯಿ ಬೇರಾದೆ
ಕನ್ನಡ ಕವಿ ಮನ ಅರಳಿಸಿದ ಬಸವ,
ಬಸವ ಬಾರೋ ನೀ ಬಸವೇಶ //

ಕಾರ್ಲಮಾರ್ಕ್ಸನ ಕಾರ್ಮಿಕ ವಾದದ ಪ್ರೇರಕ
ಲೂಥರನ ಧರ್ಮ ಸುಧಾರಣೆ ಚಾಲಕ
ಪಶ್ಚಿಮದ ಪ್ರಭುತ್ವ ಅರಿತೊಡೆ ಥೇಮ್ಸ್ ದಡದ ಸಂದೇಶಕ ಬಸವ, ಬಸವ ಬಾರೋ ನೀ ಬಸವೇಶ //

ಮೊಢನಂಬಿಕೆ ಗೋಡೆ ಕೆಡುವಲು
ಘಾಡ ಹೊಡೆತ ನೀಡಿದೆ
ಭವಕೆ ಸಂಸ್ಕಾರ ನೀಡಲು ಭಕ್ತಿ ಭಂಡಾರ ನೀನಾದೆ ಮೊಢರರಿಯದೆ ಕೇಡು ಬಗೆದರು
ಹಾಡಿ ಹೊಗಳಿದರು ಕಡೆಗೆ
ತತ್ವವರಿತ ಮೇಲೆ ಜಗತ್ತೇ ನಿನ್ನ ಕಡೆಗೆ
ಬಸವ, ಬಸವ ಬಾರೋ ನೀ ಬಸವೇಶ //

 ಜಾತಿ ವಿಷವರ್ತುಲ ಸೀಳಿ
ಸೋತೆನೆನಬೇಡ ಬರಿ ಗಾಳಿ
ಸೋತವರು ನೀವಲ್ಲ ಜೋತು ಬಿದ್ದವರು ನಾವೆಲ್ಲ
ಜಾತಿ ಜಾತಿಗಳ ನಡುವೆ ಕಂದಕ ತೋಡಿ
ಸೋತು ಬಿದ್ದಿವರು ನಾವೇಲ್ಲ
ಬಸವ, ಬಸವ ಬಾರೋ ನೀ ಬಸವೇಶ //

ಜಾತಿಯೇ ಸರ್ವಸ್ವವೆಂದು ನೀತಿಗೆ ಕೊನೆಯ ಸ್ಥಾನ ನೀಡಿ ಮಾತು ಮಾತಿಗೆ ಬಸವ
ಜಾತಿ ಕಿತ್ತೆಸೆಯಲು ನಮಗಾಗಲಿಲ್ಲ
ಮತ್ತೆ ಹುಟ್ಟಿ ಬಾ ಬಸವೇಶ //
ಧರ್ಮದ ವ್ಯಾಖ್ಯಾನ ಬದಲಿಸಿದೆ
ದಯವೇ ಅದಕ್ಕೆ ತಳಪಾಯವೆಂದೆ
ನಾಮ, ಚಿಹ್ನೆ, ಮಂದಿರ,ಮಸೀದಿ,
ಚರ್ಚಗಳೇ ಧರ್ಮಗಳೆಂದವರು
ಧರ್ಮದ ವ್ಯಾಖ್ಯಾನ ಬದಲಿಸು ಬಸವ ,
ಬಸವ ಬಾರೋ ಬಸವೇಶ //

ಮಾನವತೆ ಮೆರೆದ ಮಾನವತಾವಾದಿ
ಉಳ್ಳವರು ಮೆರೆದ ನಾಡಿಲ್ಲಿ
ಶಿವಶರಣರಿಗಿಂತ ಹಿರಿಯರಿಲ್ಲ
ನನಗಿಂತ ಕಿರಿಯರಿಲ್ಲವೆಂದ ಬಸವ,
ಬಸವ ಬಾರೋ ನೀ ಬಸವೇಶ //

ಮುಳ್ಳಿನ ಹಾದಿಯ ಸೀಳಿ
 ಹೂವಿನ ಹಾದಿಯ ಮಾಡಿ
ಮಹಿಳೆಯ ಬಾಳಿನ ಮುನ್ನುಡಿ ಬರದೆ
ಸಮತಾವಾದಿ ಬಸವ, ಬಸವ
ಬಾರೋ ನೀ ಬಸವೇಶ //

          ಬಸನಗೌಡ ಗೌಡರ

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...