ಮರೆಯದಿರು ಮಹಾಂತರ ಮಾತಿದು
ಮನ ಒಪ್ಪವ ತನು ಒಪ್ಪವ ಮಾತಿದು/
ಶರಣ ಸಂತರ ಸರಳ ಸಂದೇಶವಿದು
ಮಹಾಂತ ಸಂತರ ಜೋಳಿಗೆ ಮಾತಿದು //
ಕಾವಿ ಜೋಳಿಗೆ ಬೇಡಿಕೆ ಮಾತಿದು
ಸತತ ದುಡಿಯದೆ ಸಂಸಾರ ಹಿಂಡಿದ/
ಸಕಲವು ಇದ್ದು ಸನ್ಮಾರ್ಗ ಹಿಡಿಯದ
ವ್ಯಸನಿಗಳಿಗೆ ಶ್ರೀಗಳ ಕಿವಿಮಾತಿದು//
ಸರ್ವಸಂಗ ತ್ಯಾಗಿ, ಸೇವೆಯ ಯೋಗಿ
ಜಾತಿ, ಮತ, ಪಂಥ,ಧರ್ಮ ಮೀರಿದ/
ಶ್ರೇಷ್ಠ ಸಂತರ ಸನ್ಮಾರ್ಗದ ಮಾತಿದು
ಬಸವ ಪಥದ ನಡೆಯ ಮಾರ್ಗವಿದು/
ಮದ ಮತ್ಸರ ಲೋಭ ವರ್ಜಿಸುವ
ದುಷ್ಚಟ ದಾನ ನೀಡುವ ಮಾತಿದು/
ಸಕಲರಿಗೂ ಲೇಸನು ಬಯಸವ
ಬಸವಾನುಯಾಯಿ ಹಿತನುಡಿಯಿದು/
ಬಸನಗೌಡ ಗೌಡರ
No comments:
Post a Comment