ಮುಖದ ಮೇಲಿನ ನೂರು ಗೆರೆಗಳು
ಹದ ಮಾಡಿದ ಹೊಲದ ಸಾಲುಗಳು
ಪ್ರಶ್ನೆ ಎಂಬ ಬೀಜ ಬಿತ್ತಬೇಕು ಅಲ್ಲಿ
ಜ್ಞಾನವೆಂಬ ಅನುಭವದ ಫಲಗಳು //
ಮಾಗಿದ ದೇಹ ಮಹಾದೇವನ ವರ
ಮಾನವ ಹಾಗೆ ಬರುವದಿಲ್ಲ ಬರಪುರ
ಹಗಲು ರಾತ್ರಿ ಹದವಾಗಿ ದುಡಿದ ಫಲ
ಇಲ್ಲಾ ಕಾಯಿದ್ದಾಗ ಉದರುತ್ತೆ ಎಲ್ಲಾ//
ಹಸುಳೆಯಿಂದ ಹಿಡಿದು ಹಲವು ಪಾತ್ರ
ನಟನೆಯು ನಿಲ್ಲದೆ ತಲುಪಿದರೆ ಮಾತ್ರ
ನೀನು ಪಡೆಯಬಹುದು ಪ್ರಶಂಸೆ ಪತ್ರ
ನಟನೆ ತಪ್ಪಿದೆ ಬರುವುದು ಬಿಕ್ಷಾಪಾತ್ರ//
ಸಾವಿರ ಸಾವಿರ ಸಾಗರಲೆಗಳ ಮೀರಿ
ಸವೆಸಿದೆ ಬದುಕಿನ ಸಂಘರ್ಷದ ದಾರಿ
ಸಂದೇಶ ಒಂದೆ ನಮಗೆ ನೀಡಿದ ಗುರಿ
ಸಾಗು ನೀನು ಕೊಂದು ಅರಿಷಡ್ವೈರಿ//
ಬಸನಗೌಡ ಗೌಡರ
No comments:
Post a Comment