ಹತ್ತಿಯ ದಾರದ ಬತ್ತಿಯ ತೀಡಿ
ಹೊತ್ತಿ ಉರಿಯಿತು ದೀಪ ನಾಡು
ತಮದ ನೆತ್ತಿಯ ಮೇಲಹತ್ತಿ ಸೀಳಿ
ಜಗದಲರಳಿತು ದೀಪ ಪ್ರಭಾವಳಿ//
ಹೊತ್ತಿ ಉರಿಯಿತು ದೀಪ ನಾಡು
ತಮದ ನೆತ್ತಿಯ ಮೇಲಹತ್ತಿ ಸೀಳಿ
ಜಗದಲರಳಿತು ದೀಪ ಪ್ರಭಾವಳಿ//
ಪಡುವಣ ಮೂಲಿಯ ಮುಂಗಾರು
ವರುಣನ ಬೆಡಗು ಮುಗಿಯುವ ಕಾಲ
ಮೂಡಣ ಮೂಲೆಯ ಆವರ್ತಕಾಲ
ಮಂಜಿಗೆ ಮಯೂರ ನರ್ತನದಾ ಅಲೆ
ಮನ ಮೈಲಿಗೆ ತೊಳೆದ ಹಬ್ಬದಾ ಕಲೆ//
ಸಗ್ಗದ ಸಿರಿಯಲಿ ಹಿಗ್ಗಿದ ರೈತನ ವನ
ಹಸು ಕರುಗಳು ಬೆಸೆಯಿತು ಈ ದಿನ
ಕಬ್ಬಿಗರುಬ್ಬುವ ಹಿಗ್ಗಿನ ಸುಗ್ಗಿಯ ದಿನ
ಬಗ್ಗರು ನಾಡ ಸ್ವಾಭಿಮಾನಿಗಳನುದಿನ
ಫಸಲು ನುಸುಳಲು ಮನೆ ತನುಮನ//
ಮನೆ ಮನೆ, ಮನ ಮನಗಳಲಿಳಿದು
ಆಗಸಕೇರಿದ ದೀಪದ ಬೆಳಕಿನ ಕಿರಣ
ಮಾವು ಪತ್ರಿಯ ಹೊಳಪಿನ ತೋರಣ
ಮನೆಯದು ಮಂತ್ರಾಲಯ ಹೂಬಣ
ಪಟಾಕಿ ಸುಡುವುದು ಜಗದ ದುರ್ಗಣ//
ಬಸನಗೌಡ ಗೌಡರ
No comments:
Post a Comment