ಹಿಂದು ಜಲವ ಮಿಂದ ದೊರೆಯ
ಗಂಗೆ ಯಮುನೆ ಹಿಮದ ಝರಿಯ
ಗಿರಿಯ ತೊರೆಯ ನಾದ ಲೀಲೆ
ಗಗನ ದಾಟಿ ಹೃದಯ ಮೀಟಿ
ಬೆಳಗಲೆಮ್ಮ ಭಾವ ಕೋಟಿ ಕೋಟಿ //
ಸೀತೆಯೆಂಬ ಭರತ ಮಾತೆ
ಪಿತೃ ಪಾಲನೆ ಪತಿಯ ಪಡೆದ ಸುತೆ
ವನವಾಸ ನಡೆದಳು ಪತಿಯ ಜೊತೆ
ಅಯೋಧ್ಯೆಗವನೆ ಕೈಕೆಯ ಸುತ
ಪಾದರಾಕ್ಷೆ ಹಿಡಿದ ತನುಜ ಭರತ //
ಬೆಳಗಲಿ ಭಾವ ಧರ್ಮದ ಜ್ಯೋತಿ
ಅಳಿಯಲಿ ಅರಿ ಅಧರ್ಮದ ಭೀತಿ
ಅರಳಲಿ ಪಿತೃಪರಿಪಾಲನಾ ನೀತಿ
ಆದರ್ಶ ಪುರುಷನಿಗೆ ಎತ್ತು ಆರತಿ
ಜಗವೆಲ್ಲ ಬಾಗಿದೆ ನೀನೆಮ್ಮ ಭಾರತಿ//
ಐಕ್ಯ ಸರಸ್ವತಿ ಪುಣ್ಯಧಾಮ
ಜಪಿಸು ಅನುದಿನ ರಾಮನಾಮ
ಜನರ ಹೃದಯ ಬೆಸೆದ ಮಂದಿರ
ಅರಳಿತಲ್ಲಿ ಅಯೋಧ್ಯೆನೆಲದ ಹಂದರ
ಇರುಳು ಕಸಿದ, ಹಿಂದು ಜನರ ಚಂದಿರ//
ಭವ್ಯ ಭಾರತ ಪುತ್ರರು,ಭವದಿ
ಬೆರೆತು ವಾಸಿಸುವ ಜನರೆ ಮಿತ್ರರು,
ಕಾಶಿಯಿಂದ ರಾಮೇಶ್ವರ, ಪುರಿಯಿಂದ
ದ್ವಾರಿಕೆ. ಕಣ ಕಣಗಳಲ್ಲಿ ಅರಳಲಿ
ಹರ ರಾಮ ನಾಮ ದ್ವನಿಗಳು.//
ಬಸನಗೌಡ ಗೌಡರ
No comments:
Post a Comment