ಪೌರರ ರಕ್ಷಣೆಗೆ ಬಂತು ಪ್ರಭುತ್ವ
ಅದರಲ್ಲಿ ಆರಕ್ಷಕರಿಗಿದೆ ಮಹತ್ವ
ಕೊಲ್ಲುವವರು ನೂರಿರಲು ಕಾಯುವ
ಕಾಯಕವೆ ಇಂದಿನ ಮಹತ್ವ //
ಹಾಕಿದ್ದು ಖಾಕಿ ಹಾರೈಕೆಯೊಂದೆ ಬಾಕಿ
ಕಟುವಾದ ಮಾತು ಒರಟು ಸ್ವಭಾವ
ಕೆಟ್ಟವರೆಂದವರೇನು ಕಡಿಮೆ ?
ಅವರು ಬದುಕಲೂ ಇವರೆ ಬೇಕು !//
ಅದರಲ್ಲಿ ಆರಕ್ಷಕರಿಗಿದೆ ಮಹತ್ವ
ಕೊಲ್ಲುವವರು ನೂರಿರಲು ಕಾಯುವ
ಕಾಯಕವೆ ಇಂದಿನ ಮಹತ್ವ //
ಹಾಕಿದ್ದು ಖಾಕಿ ಹಾರೈಕೆಯೊಂದೆ ಬಾಕಿ
ಕಟುವಾದ ಮಾತು ಒರಟು ಸ್ವಭಾವ
ಕೆಟ್ಟವರೆಂದವರೇನು ಕಡಿಮೆ ?
ಅವರು ಬದುಕಲೂ ಇವರೆ ಬೇಕು !//
ಬಿಗಿ ನಿಯಮದ ಬಹದ್ದೂರರು
ಬಾಗಿ ನಡೆದಾಡುವರೇನು ?
ಹೆಡೆ ಎತ್ತಿ ತಿರುಗಿದರೆ ಕಡುಕಷ್ಟ
ಪುಡಿ ಜನರು ದಾರಿಸಾಗದೆ
ಆಡಿಕೊಳ್ಳುವರು ಕಡು ಬ್ರಷ್ಟ//
ಬಿಸಿಲು ಮಳೆ ಗಾಳಿಗಿ ಬತ್ತದ
ಉತ್ಸಾಹ , ಸತ್ಯವರಿತವರೆಷ್ಟು ?
ಬೆತ್ತದಿಂದ ಬಾರಿಸುವದೊಂದೆ
ಇವರಿಗೆ ಕಾಣುವ ಸತ್ಯ ! //
ಬಾರಿಸುವ ಮುನ್ನ ಮನಸ್ಸಿನ
ತುಮಲ ತಿಳಿದವರೆಷ್ಟು ನಿತ್ಯ.
ಉತ್ಸಾಹದ ಚಿಲುಮೆ ನಮ್ಮೊಲುಮೆ
ಸಿಕ್ಕರೆ ಬಾಳೆಲ್ಲ ಆಗುವುದು ಸಕ್ಕರೆ //
ಬರಿ ನಿಂದನೆ ಸಾಲದು ಬೇಕು ವಂದನೆ
ಹಿಡಿದು ಪಡೆದವರೇನು ಕಡಿಮೆ
ನಮ್ಮವರ ಮಕ್ಕಳು ನಮಗೆ ಇಕ್ಕಳವೆ ?
ಪಡೆ ಪುಷ್ಕಳ ಶಾಂತಿಯ ಮಲ್ಲಿಗೆ .//
ಬಸನಗೌಡ ಗೌಡರ
No comments:
Post a Comment