Saturday, January 9, 2021

* ಮಾಯಾಂಗನೆ *

ನಿನ್ನ ತುಟಿಯಂಚಿನ ಮಿಂಚು 
ಹೊಂಚು ಹಾಕಿ ಸಂಚು ಮಾಡಿತು 
ಎನ್ನ ಮನದ ಮೂಲೆಯಲ್ಲಿ //

ಹುಚ್ಚೆದ್ದು ಕಾಡುವ ಭಾವಗಳ 
ಬಲೆಯಲ್ಲಿಮಿಂದೆದ್ದು ವಿಲವಿಲನೆ 
ತಿರುಗಿದೆ ಬಿರುಗಾಳಿ ಸುಳಿಯಲ್ಲಿ //

ಬಂದು ಬಾಂಧವರನ್ನೆ ಬದಿಗಿರಿಸಿ
ಒಂದುಗೂಡಲು ಹಪಹಪಿಸಿ
ಕೊಂದು ಅರಳಿ ಸೆಳೆದ ಚೌಕಾಸಿ//

ಸಾವಿರ ಅಲೆ ಅಬ್ಬರಿಸಿ ಬೊಬ್ಬಿರಿದು
ಬೋರ್ಗರೆದ ಬೊಂಬೆಗಳೆ ಸೋತು 
ಶಾಂತಿಯ ಪಠಿಸಿ ಹಾರೈಸಿತು ಮಾಸಿ//

ಹಗಲು ರಾತ್ರಿ ಹೆಗಲಲ್ಲಿ ಮಲಗಿ
ಹಲಗಿಯ ಹೊಡೆದು ಸಲುಗೆ ಮೆರೆದು
ತೊಲಗದ ಹಸಿ ಹಸಿ ಆಸೆಗಳು ಬಿಸಿ//

ಬದುಕು ಬವಣೆ ಬಯಲು ಕಾತರ 
ಕವಲುಗಳರಿಯದೆ ತೆವಳುತ್ತಿವೆ ಮನ
ಕಂದಕ ಕಮರಿಗಿಳಿದಾಗ ರೋಧನ //

                  ಬಸನಗೌಡ ಗೌಡರ 

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...