ಕತ್ತರಿಸಿದ ತುಂಡ ಒತ್ತಿ ಹಿಡಿಯಲು
ದಾರ ಸುತ್ತಿ ಸುತ್ತಿ ತಾನು ಬರಬೇಕು
ದಾರ ಸುತ್ತಿ ಸುತ್ತಿ ತಾನು ಬರಬೇಕು
ಗತ್ತಿನಲ್ಲಿ ನಡಯದೆ ಬಾಗಿ ಬಳಕಿ
ಸೂಜಿಯಲಿ ಮುಳಿಗೇಳಬೇಕು
ಗೆಳೆಯ //
ಸೂಜಿಯಲಿ ಮುಳಿಗೇಳಬೇಕು
ಗೆಳೆಯ //
ನೊಂದವರ ನೆಲದ ನೆರಳಾಗಿ
ಬೆಂದವರ ಬಾಳಿನ ಬೆಳಕಾಗಿ
ಕೊಂದವರ ನೆಲದ ಕಂಬಳಿಯಾಗಿ
ಬಂಧುವಿನ ಹಂದರಾಗಬೇಕು
ಗೆಳೆಯ //
ಹಸಿದ ಹೆಬ್ಬುಲಿಯೆದುರು ಹಸುವಾಗಿ
ಹುಸಿಯನಾಡದೆ ಗೋವು ತಾ ಮರಳಿ
ಹೊಸ ಬದುಕು ಪಡೆದ ಮಾತೆಯಾಗಿ
ಬೆರಗುಗೊಳ್ಳವಂತೆ ಬದುಕಬೇಕು
ಗೆಳಯ //
ಚಿತ್ತಾರದ ಚಿತ್ತಚಂಚಲೆಯರ ದಂಡು
ಸುತ್ತಿ ಸುತ್ತಿ ತಿರುಗುತಿದೆ ಇವತ್ತು
ಗೊತ್ತಿಲ್ಲದೆ ಮತ್ತೇರುತಿದೆ ಬೇಸತ್ತು
ಸತ್ಯದ ದಾರ ಜೋಡಿಸುಬೇಕು
ಗೆಳೆಯ //
ಬಸನಗೌಡ ಗೌಡರ
No comments:
Post a Comment