ಕಾರು ಕನಸು ಕಂಡವರು ನೂರು
ಕಾರ್ಯವೆ ನಮ್ಮ ಮನೆಯ ದೇವರು.
ಕರ್ತವ್ಯ ಕರೆಗಾಗಿ ಕಾಯ್ದವರೇನಿವರು
ಕಾಲಿಗೂ ಮೊದಲೆ ಶತ್ರುಗಳಿವರು.
ಕಾರ್ಯವೆ ನಮ್ಮ ಮನೆಯ ದೇವರು.
ಕರ್ತವ್ಯ ಕರೆಗಾಗಿ ಕಾಯ್ದವರೇನಿವರು
ಕಾಲಿಗೂ ಮೊದಲೆ ಶತ್ರುಗಳಿವರು.
ಹಿತವಾಗಿ ಬಳಸಿ ನಿಸರ್ಗದ ಗೆಳೆತನ
ಬಯಸಿದರೆ ನನ್ನದೂ ಒಂದು ಸಲಾಮು,
ಹಚ್ಚಬೇಕು ಯಾರು ಮಲಾಮು ?
ಕಾರು ಇದ್ದವರಿಗೆ ಬಾಗುವುದು
ಎಲ್ಲರ ಜಾಯಮಾನ,
ಕಾಲು ಬಳಸಿದವನಿಗೇಕಿಲ್ಲ ಸನ್ಮಾನ !!
ಎಲ್ಲರ ಜಾಯಮಾನ,
ಕಾಲು ಬಳಸಿದವನಿಗೇಕಿಲ್ಲ ಸನ್ಮಾನ !!
ಇಂದು ನಾನೋದಿದೆ ಸೈಕಲ್ ಏರಿ
ಕಛೇರಿಗೆ ನಡೆದ ಡಿಸಿಪಿ..
ಕಂಡವರು ಏನೆಂದರೊ ತಿಳಿದಿಲ್ಲ
ಪ್ರಚಾರಕ್ಕಾಗಿ ಎಂದರೆ ಏನು ಮಡುವುದು ?
ಅನ್ನಲಿ ಬಿಡಿ ಅವರವರ ಭಾವಕ್ಕೆ
ಅವರ ತೆರನಾಗಿರುವನ ಶಿವಯೋಗಿ.
ಕಾರು ಕಾಣದ ಕಮಂಗಿಯೆಂದು
ದೂರಬಹುದೇನೂ ಹಲವರು .
ದೂರಲಿ ಬಿಡಿ ನಮಗೇನು ಕಿವಿಗಳೇ
ಕಿವುಡಾಗಿವೆ ಕರ್ಮದ ಪೆಟ್ಟು ತಿಂದು.
ಕಿತ್ತು ತಿನ್ನುವ ಕಿರುಬಗಳಿಗಿಂತ ಕರ್ತವ್ಯ
ಕನಸು ಕಂಡವರೆ ನನ್ನ ದೇವರು.
ಕಕ್ಕ ಹೋಗಲು ಕಾರು ಬಳಸಿದರೆ
ಕಾಲಾದರೂ ಏಕೆ ಉಳಿದಾವು ?
ಕತ್ತಲೆ ಕಳೆದಾಗ ಇವರೆಲ್ಲ
ಆಗುವರು ಬೆತ್ತಲು.
🖋️ಬಸನಗೌಡ ಗೌಡರ
No comments:
Post a Comment