ವ್ಯವಸ್ಥೆಯ ಸಮಸ್ಯೆಯ
ಬೇರನರಿಯದೆ ಬರಿ
ದೂರಿ ಆಗದು ಪ್ರಯೋಜನ/
ಕಾರ್ಯಗತವಾಗದ
ಯೋಜನೆಯೊ ಒಂದೆ
ಅದು ಕತ್ತೆಯ ಮಾರ್ಜನ/
ಬರಿ ಹುತ್ತದ ನೆತ್ತಿಯ
ಬಡಿದರೆ ಮೈ ನೋವು
ಅನುದಿನ /
ಪತ್ಯೆಯಾಗಲಿ ನಿಜ ಕಾರಣ/
ಇದ್ದಾಗ ಬರದ ಜನ
ಸತ್ತ ಮೇಲೆ ಹೇಳುವರು
ಅವರ ಪುಣ್ಯದ ಪುರಾಣ/
ಕೈತುಂಬಾ ಇದ್ದಾಗ ಹಣ
ಮೆರೆಸುವರು ಬೀದಿ
ಬೀದಿಗಳಲ್ಲಿ ಸನ್ಮಾನ
ಬೀಗಿದರೆ ಮರಣ/
ಮರೆತರೆ ಆಗಲಾರೆ ಶರಣ/
ಉಚ್ಚ ನೀಚರೆಂಬುದು
ಸಚ್ಚಾರಿತ್ರ್ಯ ಹೊಂದಿರುವೆವು
ಎನ್ನುವವರು ಪುರಾಣ /
ಬಚ್ಚಲ ನೀರಿಗೆ ಬಳದಿದೆ
ಪಚ್ಚೆಯ ತೋರಣ/
ಹುಚ್ಚರಂತೆ ಹಣೆಬರಹ//
No comments:
Post a Comment