ಕಾಯಕವೇ ಕೈಲಾಸ ವೆಂದು ಕಾಯಕಕ್ಕೆ ನಾಕ ಪಟ್ಟ ನೀಡಿದ ಮಹಾನ್ ಮಾನವತಾವಾದಿ ಬಸವೇಶ್ವರರ ಜಯಂತಿ ಇಂದು, ಮೇ ಒಂದು . ಕಾರ್ಮಿಕ ದಿನಾಚರಣೆ ಮಾಡಿದೆವು, ಕರ್ಮಕ್ಕೆ ಜಯಕಾರ, ಕಾರ್ಮಿಕರಿಗೆ ಜಯಕಾರ. ಎರಡು ದಿನದ ನಂತರ "ಕಾಯಕವೇ ಕೈಲಾಸವೆಂದ ಮಹಾನ್ ಮಾನವತಾವಾದಿಯ ದಿನಾಚರಣೆ" ನಿಜವಾಗಿಯೂ ಬಸವನ ನಾಡಿನಲ್ಲಿ ಜನಿಸಿದ ನಾವು ಧನ್ಯರು ,ಏಕೆ ಹೇಳಿ ? ಮಾತು ಮಾತಿಗೆ ನಾವು ಯೂರೋಪಿಯನ್ನರು ನಾವು ಹೆಚ್ಚು ನಾಗರಿಕ ಸಮಾಜದವರು ಎಂದರಲ್ಲವೆ ! ಸುಸಂಸ್ಕೃತ ಎನ್ನುವ ಜನರ ಧಾರ್ಮಿಕ ಸುಧಾರಣೆ ಪ್ರಾರಂಭ ವಾಗಿದ್ದು ಯಾವಾಗ ಹೇಳಿ ? " 16 ನೇ ಶತಮಾನದಲ್ಲಿ" ನಮ್ಮ ಕರ್ನಾಟಕದಲ್ಲಿ ಆದದ್ದು ಯಾವಾಗ 12 ನೇ ಶತಮಾನದಲ್ಲಿ ಅಂದರೆ ಸರಿ ಸುಮಾರು ನಾಲ್ಕು ಶತಮಾನಗಳಷ್ಟು ಕಾಲ ಬಸವೇಶ್ವರರು ಯೂರೋಪಿಯನ್ನರಿಗಿಂತ ಮೊದಲು ಸಾಮಾಜಿಕ ಮತ್ತು ಧಾರ್ಮಿಕ ಚಳುವಳಿಯನ್ನು ಮಾಡಿದರು ಎಂದಾಯಿತು ಆದಗ್ಯೂ ಕೂಡಾ ನಾವು ಹೇಳುತ್ತಿರುವುದೇನು ? ಬಸವೇಶ್ವರರನ್ನು ಕರ್ನಾಟಕದ ಮಾರ್ಟಿನ್ ಲೂಥರ್ ಎಂದು, ನಾನೆಲ್ಲೋ ಓದಿದ ನೆನಪು ! ಕಾರಣವೇನು ? ಮಾರ್ಟಿನ್ ಲೂಥರ್ ಗೆ ಸಿಕ್ಕ ಪ್ರಚಾರ ನಮ್ಮ ಬಸವೇಶ್ವರರಿಗೆ ಸಿಗಲಿಲ್ಲವೆಂದರ್ಥವಲ್ಲವೆ.? ಮೇಲ್ವರ್ಗದಲ್ಲಿ ಜನಿಸಿದ ಬಸವೇಶ್ವರರು ಸಾಂಪ್ರದಾಯಿಕವಾಗಿ ಬಂದ ಸಾಮಾಜಿಕ ಅಂತಸ್ತುಗಳನ್ನು ಅಂದ ರೀತಿಯಲ್ಲಿ ಅನುಭವಿಸಿ ಹತ್ತರಲ್ಲಿ ಹನ್ನೊಂದು ಆಗಬಹುದಿತ್ತೇನೋ ಆದರೆ ಬಸವೇಶ್ವರರು ಸಮಾಜದ ಓರೆಕೋರೆಗಳನ್ನು ತಿದ್ದಲು ತಮ್ಮ ಜೀವನವನ್ನೆ ಮುಡುಪಾಗಿಟ್ಟರು ಬಿಜ್ಜಳನ ಆಸ್ಥಾನದಲ್ಲಿ ಕರಣಿಕರಾಗಿ ಸೇವೆಗೆ ಸೇರಿ ತಮ್ಮ ಸ್ವಸಾಮರ್ಥ್ಯದಿಂದ ಸಿದ್ಧರಸರ ನಂತರ ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನಿ ಹುದ್ದೆಗೆ ಏರಿದರು, ಆದರೆ ಅವರಲ್ಲಿರುವ ಮಾನವತ್ವವು ಅಧಿಕಾರಿದ ಪ್ರಕರತೆಯಲ್ಲಿ ಮೂಲೆಗೆ ಸೇರದೆ ಕೆಸರಿನಲ್ಲೆ ಅರಳುವ ಹೂವಿನಂತೆ ಅರಳಿ ಸಮಾಜಕ್ಕೆ ಪ್ರಭಾವಳಿ ಬೀರಿದ್ದು ಇತಿಹಾಸ. ಅಂದಿನ ಸಮಾಜದಲ್ಲಿ ರೂಢಿಯಲ್ಲಿದ್ದ ಮೂಢನಂಬಿಕೆ, ಮೂರ್ತಿಪೂಜೆ, ಪ್ರಾಣಿಬಲಿಗೆ ಆಧಾರವಿಲ್ಲಿವೆಂದು ಅದರ ವಿರುದ್ಧ ಜಾಗ್ರತಿಯನ್ನು ಮೂಡಿಸಿದರು ಅಲ್ಲದೆ ಜಾತಿ ಪದ್ಧತಿಗೆ ಧರ್ಮಶಾಸ್ತ್ರಗಳ ಆಧಾರವಿಲ್ಲವೆಂಬದನ್ನು ಸ್ಪಷ್ಟಪಡಿಸದರು.ಬಸವೇಶ್ವರರು ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಿಸಿದರು.ಲಿಂಗಪೂಜೆಗೆ ಆದ್ಯತೆ ನೀಡಿದರು ಮತ್ತು ಜಾತಿ,ಲಿಂಗ ಭೇಧವಿಲ್ಲದೆ ಎಲ್ಲರೂ ಲಿಂಗಧಾರಣೆ ಮಾಡಲು ಅವಕಾಶ ನೀಡಿ ಸಕಲರಿಗೂ ಸನ್ಮಾರ್ಗ ದ ದಾರಿ ತೋರಿದರು . ಲಿಂಗಾಯಿತ ಧರ್ಮದಲ್ಲಿ ಶಿವಪೂಜೆಗೆ ಆದ್ಯತೆ , ಇಲ್ಲಿ ಲಿಂಗ ಮತ್ತು ಅಂಗ ಎಂಬ ಎರಡು ಭಾಗಗಳಿವೆ ಅಂಗವು ಲಿಂಗೈಕ್ಯವಾಗುವದೆ ಮೋಕ್ಷ, ಶಿವ ಮತ್ತು ಶಕ್ತಿ ವಿಲೀನ ಬಸವ ತತ್ವಕ್ಕೆ ಆಧಾರ, ಇದನ್ನೆ ಶಕ್ತಿ ವಿಶಿಷ್ಟಾದ್ವೈತ ಎಂದು ಕರೆಯಲಾಗಿದೆ. ಲಿಂಗಾಯತರು ಅಷ್ಟಾವರಣ ಪಾಲಿಸಬೇಕು. ಗುರು ಲಿಂಗ ಜಂಗಮಕ್ಕೆ ಗೌರವತೋರುವುದು,ಹಣೆಗೆ ವಿಭೂತಿ ಧರಿಸುದು ಪಂಚಾಕ್ಷರಿ ಮಂತ್ರ ಪಠಣ ಇತ್ಯಾದಿ . ಬಸವೇಶ್ವರರು ಮೋಕ್ಷಕ್ಕೆ ಭಕ್ತಿ ಮಾರ್ಗ ಪ್ರತಿಪಾದಿಸಿರು. ಇಂದು ನಾವೆಲ್ಲಾ ಬಯಸುವ ಸಮ ಸಮಾಜ ರಚನೆಗೆ ಅವರು ಮಾಡಿದ ಸಮಾಜ ಸುಧಾರಣೆಗಳು ದಾರಿ ದೀಪ, ಬಸವೇಶ್ವರು ಜಾತಿ ಪದ್ಧತಿಯನ್ನು ಅಂದೆ ಕಟುವಾಗಿ ಟೀಕಿಸಿದರು ಮಾನವನ ಅಂತಸ್ತು ಅವನ ಯೋಗ್ಯತೆಯಿಂದ ನಿರ್ದಾರವಾಗುವದೆ ಹೊರತು ಜಾತಿಯಿಂದಲ್ಲ ಎಂದು ಸಾರಿದರು, ಅದನ್ನು ಹೋಗಲಾಡಿಸಲು ಸಹಬೋಜನ, ಅಂತರ್ಜಾತಿ ವಿವಾಹದಂತ ಕಾರ್ಯ ಕ್ರಮಕ್ಕೆ ಪ್ರೋತ್ಸಾಹಿಸಿದರು.ಬ್ರಾಹ್ಮಣ ಮಧುವಯ್ಯನ ಮಗಳಿಗೂ ಹರಿಜನ ಹರಳಯ್ಯ ನ ಮಗನಿಗೂ ವಿವಾಹ ಮಾಡಿಸದರು. ಅವರಿಬ್ಬರೂ ಶಿವಭಕ್ತರಾದರು ಅಲ್ಲವೆ ? ಪ್ರಾಣಿ ಬಲಿ ತಡೆದು ದಯವೇ ಧರ್ಮದ ಮೂಲವಯ್ಯ ಎಂದರು. " ಕಲ್ಲು ನಾಗರ ಕಂಡರೆ ಹಾಲನೆರೆ ಎಂಬುವರು ದಿಟ ನಾಗರ ಕಂಡರೆ ಕೊಲ್ಲೆಂಬರಯ್ಯ" ಎನ್ನುವ ಮೂಲಕ ಕಲ್ಲು ಮರಗಳ ಪೂಜೆ ಯನ್ನು ಖಂಡಿಸಿದರು.ಉಳ್ಳವರು ಶಿವಾಲಯ ಮಾಡುವರಯ್ಯ ನಾನೇನು ಮಾಡವೆ ಬಡವನಯ್ಯ…..ಎಂಬ ವಚನಗಳ ಮೂಲಕ ಡಂಬಾಚಾರ ಬಯಲಿಗೆಳೆದರು. ಕಾಯಕ ಮುಕ್ತಿಗೆ ದಾರಿ ತೋರಬಲ್ಲದು ಮತ್ತು ಕಾಯಕವು ಭಕ್ತಿಯ ಇನ್ನೊಂದು ರೂಪವಾದ್ದರಿಂದ ಕಾಯಕವೆ ಕೈಲಾಸ ವೆಂದರು. ಸರಳತೆ ಸಚ್ಚಾರಿತ್ರ್ಯ ಅನುಕಂಪ ರೂಡಿಸಿಕೊಳ್ಳಲು ಆಚಾರವೆ ಸ್ವರ್ಗ ಅನಾಚರವೆ ನರಕವೆಂದರು. ಕಳಬೇಡ,ಕೊಲಬೇಡ,ಹುಸಿಯ ನುಡಿಯಲುಬೇಡ, ಇದೆ ಅಂತರಂಗ ಶುದ್ಧಿ, ಇದೆ ಬಹಿರಂಗ ಶುದ್ಧಿ ಎಂದು ಅಂತರಂಗದ ಶುದ್ಧಿಗೆ ಆದ್ಯತೆ ನೀಡಿದರು ,ಅಲ್ಲದೆ ವ್ಯಕ್ತಿಯು ಸಂಗ್ರಹಣೆಯಲ್ಲಿ ತೋಡಗದೆ ದಾಸೋಹದಲ್ಲಿ ತೊಡಗಬೇಕೆಂದರು.ತಮ್ಮ ಈ ತತ್ವಗಳ ಪ್ರಚಾರಕ್ಕೆ ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಸಿದರು .ಜನರಲ್ಲಿ ಜಾಗೃತಿ ಮತ್ತು ಸಮಾಜ ಸುಧಾರಣೆ ಮಾಡಲು 5000 ಕ್ಕೂ ಹೆಚ್ಚು ವಚನಗಳನ್ನು ರಚಿಸಿದರು ಅವರ ಸಾಮಾಜಿಕ ಮತ್ತು ಧಾರ್ಮಿಕ ವಿಚಾರಧಾರೆಗಳು ವಿಶ್ವ ಮಾನ್ಯ, ಹೀಗಾಗಿ ಅವರು ಜಗದ ಜ್ಯೋತಿ .ಅವರ ವಿಚಾರಧಾರೆಗಳನ್ನು ಒಂದು ದಿನದ ಆಚರಣೆಗೆ ಸೀಮಿತ ಮಾಡದೆ ಅನುದಿನವೂ ಪಾಲಿಸಬೇಕಾಗಿದೆ ಅದಕ್ಕಾಗಿ ಇಂಗ್ಲೆಂಡಿನ ಥೇಮ್ಸ್ ನದಿಯ ದಂಡೆಯ ಮೇಲೆ ಮಾನವತಾವಾದಿಯ ಮೂರ್ತಿ ವಿರಾಜಮಾನವಗಿ ಜಗತ್ತಿಗೆ ಬೆಳಕು ನೀಡುತ್ತಿದೆ .
Tuesday, May 3, 2022
Subscribe to:
Post Comments (Atom)
"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"
ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...
-
🌺 ಪ್ರಿಯ ಮಿತ್ರರೇ 💐🙏 ಭಾರತದ ಇತಿಹಾಸದಲ್ಲಿ ಗುಪ್ತರ ಕಾಲವನ್ನು "ಸುವರ್ಣಯುಗ" ಎಂದು ಕರೆಯಲಾಗುತ್ತದೆ, ಆದ್ದರಿಂದ ಕೆಎಎಸ್, ಪಿಎಸ್ಐ, ಇಎಸ್ಐ, ಎಸ್ಡಿಎ, ...
-
ಬಸವೇಶ್ವರರ ಸಾಮಾಜಿಕ –ಧಾರ್ಮಿಕ ಸುಧಾರಣೆಗಳು ಬಸವೇಶ್ವರರು ಬಾಗೆವಾಡಿಯಲ್ಲಿ ಮಾದರಸ ಮಾದಲಾಂಬಿಕೆಯ ಮಗನಾಗಿ ಜನಿಸಿ ಜಾತವೇದ ಮುನಿಗಳಲ್ಲಿ ವಿದ್ಯಾಭ್ಯಾಸ ಮಾಡಿ ಬಿಜ್ಜಳನ ಆಸ...
-
ಅಕ್ಬರನ ಸಾಧನೆಗಳು ಮೊಗಲರ ಅರಸರಲ್ಲಿಯೇ ಅಕ್ಬರ ಅತ್ಯಂತ ಶ್ರೇಷ್ಟ ಅರಸ.ಶೂರ ಸೇನಾನಿಯಾಗಿ ,ದಕ್ಷ ಆಡಳಿತಗಾನಾಗಿ, ಧರ್ಮ ಸಹಿಷ್ಣುವಾಗಿ,ಕಲೆ & ಸಾಹಿತ್ಯ ಫೋಷಕನಾಗ...
No comments:
Post a Comment