Saturday, January 21, 2023

ಗುಳೇದಗುಡ್ಡ ತಾಲೂಕು 3 ನೇ ಕನ್ನಡ ಸಾಹಿತ್ಯಸಮ್ಮೇಳನದ

           ಸಾಹಿತಿಗಳನ್ನು ಸೃಷ್ಟಿಸಿದ ಸಂತ, ಆಧ್ಯಾತ್ಮಿಕ ಚಿಂತಕ,ನಿವೃತ್ತ ಕನ್ನಡ ಪ್ರಾಧ್ಯಾಪಕರು, ನನ್ನ ಗುರುಗಳು ಆದ ಶ್ರೀ ಎಸ್ ಐ ರಾಜನಾಳರು ಇಂದು ಗುಳೇದಗುಡ್ಡ ತಾಲೂಕು 3 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಬೆಳಗಿದ್ದು ಶಿಷ್ಯರಾದ ನಮಗೆಲ್ಲರಿಗೂ ಸಂತೋಷ ಮತ್ತು ಸಂಭ್ರಮದ ಕ್ಷಣ. ಇದೆ ಅವಧಿಯಲ್ಲಿ ಶಿಷ್ಯೊತ್ತಮ ಕವಿ, ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ। ವಾಯ್ ಎಮ್ ಯಾಕೊಳ್ಳಿ ಗುಳೇದಗುಡ್ಡ ಭಂಡಾರಿ ವ ರಾಠಿ ಕಾಲೇಜು ಕಂಡ ಅಪ್ಪಟ ಹಳ್ಳಿಯ ಪ್ರತಿಭೆ ,ಉತರ ಕರ್ನಾಟಕ ಭಾಗದಲ್ಲಿ ಕಾಣುವ ಭರವಸೆಯ ಕವಿ, ಸಾಹಿತ್ಯದ ಸರ್ವ ಮಜಲುಗಳಲ್ಲಿ ಕೈಯಾಡಿಸಿ ಸೈ ಎನ್ನಿಸಿಕೊಂಡ ಕನ್ನಡದ ಸಾಹಸಿ, ಸರ್ವಾಧ್ಯಕ್ಷರ ಶಿಷ್ಯರಾಗಿ ಅವರ ಬದಕು ಬರಹ ಕುರಿತು ಮಾತಾಡಿ, ಸಾಹಿತ್ಯದ ಆಸಕ್ತರ ಮನಸೆಳೆದರು, ಅವರ ಮಾತಿನ ರೀತಿ, ವಿಶ್ಲೇಷಣೆ, ನೂರು ಪುಸ್ತಕಗಳಿಗೆ ಮೀರದಂತಿತ್ತು. ಗುಳೇದಗುಡ್ಡ ನೆಲದ ಮಹಿಮೆಯೇ ಅಂತಹದು ಕನ್ನಡ ಸಂಸ್ಕೃತಿಯ ನೆಲೆವೀಡಿದು. ಅದು ಬರಿ ಕನ್ನಡ ಭಾಷೆಯ ಬೆಳೆಸುವ ತೋಟವಲ್ಲ. ಸಂಸ್ಕೃತಿಯ ತವರೂರು,ಡಾ। ಬಸುಪಟ್ಟದ, ಮಹದೇವ ಕಣವಿ, ಜಿ ಜಿ ಹೂಗಾರ, ಪ್ರೊಫೆಸರ್ ರಾಜನಾಳರು ಕಟ್ಟಿದ ಕನ್ನಡದ ಕಟ್ಟಾಳುಗಳ ಪಡೆ ಇಲ್ಲಿದೆ. ಪ್ರೀತಿಯ ಗುರುಗಳಿಗೆ ಸರ್ವಾಧ್ಯಕ್ಷರ ಪಟ್ಟ ಕಟ್ಟಿ ಆ ಪ್ರಭೆಯಿಂದ  ಪವಿತ್ರ ಗುಳೇದಗುಡ್ಡ  ನೆಲವನ್ನು ಪಾವನ ಮಾಡಿತು. ಅದರಲ್ಲಿ ನಾನೊಂದು ಬೆಸಿಕ್ ಕನ್ನಡ  ಓದಿ ಮಿಸುಕಾಡುವ ಸಣ್ಣ ಮಿಡಿ. ಇನ್ನು ಹೀಚಾಗಿ, ಕಾಯಾಗಿ, ಹಣ್ಣಾಗಿ ತನ್ನವರಿಗಾಗಿ ರಸಭರಿತ ಫಲವಾಗಲು ನಿಂತ ಮಾವಿನ ಸಸಿ. ಆದರೂ ಕನ್ನಡ  ಸಾಹಿತ್ಯ ಪರಿಷತ್ ಗುಳೇದಗುಡ್ಡ ಘಟಕ  ಸಮ್ಮೇಳನದ ಸರ್ವಾಧ್ಯಕ್ಷರ ಬದುಕು ಬರಹ ಸಂವಾದದಲ್ಲಿ ಭಾಗವಹಿಸಲು ಅವಕಾಶ ನೀಡಿ ಮಹದುಪಕಾರ ಮಾಡಿತು. ಸಂವಾದದಲ್ಲಿ ಭಾಗವಹಿಸಿ   ಅವರ ಪಾದ ಸ್ಪರ್ಶಿಸಿ ಗುರುವಿನ ಆಶೀರ್ವಾದ ಪಡೆದನಲ್ಲವೆ  ಇದಕ್ಕಿಂತ ಸಂತೃಪ್ತಿ ಇನ್ನೆಲ್ಲಿದೆ ಹೇಳಿ ?  ಅವರಿಗೆ ನಾನು ಚಿರ ಋಣಿ
g

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...