Monday, September 23, 2024
Thursday, September 19, 2024
ಗಂಡು ಪ್ರಾಣಿಗಳು
ಯಾರಿಗೆ ಹೇಳೊದು ಗಂಡುಗಳ ಗೋಳು?
ಜಾರಲು ಬಾರದ, ದೂರಲೂ ಬಾರದ
ದೂರದ ನಡಿಗೆಗೆ ಹಂಬಲಿಸುವ ಪ್ರಾಣಿಗಳು,
ದಾರದ ಮೇಲೆ ನಡಿಯವ ಪಯಣಿಗರಿವರೆಲ್ಲಾ॥
ಬರಿ ಇದು ಇಂದಿನದೂ ಅಲ್ಲ
ಮುಂದೆ ಇರದೆ ಇರುವುದೇನೂ ಅಲ್ಲ
ತಂದು, ಪ್ರಕೃತಿ ನೀಡಿದ ಕೊಡುಗೆ ಇದೆಲ್ಲ
ಉಂಡು ಹೋಗಬೇಕು ಬಂದವರೆಲ್ಲಾ॥
ಗಂಡು ಪ್ರಾಣಿಗಳು ಕೆಂಡದಂತಿದ್ದರೇನು
ಕಂಡು ಕಾಣದಂತಿರವ ದಂಡ ಪಿಂಡಗಳಿವರೆಲ್ಲ
ಉಂಡು ಹೋಗಲು ಬಂಡೆಯಾಗಿರಬೇಕು
ಹೆಂಡತಿ ಮಾತು ಕೇಳಿದರೆ ಬೆಳಕಾಗುವರಿವರೆಲ್ಲಾ ॥
ದಂಡ ಕಟ್ಟಿ ಮಂಡಿಯೂರಬೇಕು
ಗುಂಡು ಕಲ್ಲಿನಂತಿದ್ದುರು ಪುಂಡತನವಿಲ್ಲ
ಪುಂಡಿಪಲ್ಲೆದಂತೆ ಹಿಚುಕಿದರೂ ,ಗಂಡುಗಳು
ರೊಟ್ಟಿ ಜೊತೆ ರುಚಿ ನೀಡಬೇಕು ಇವರೆಲ್ಲಾ !॥
ಹುಲಿ, ಬದುಕಲು ಇಲಿಯಂತಾಗಬೇಕು
ಬಿಲ ತೋಡಿ ಅಡಗಬೇಕು,ಒಲೆ ಹತ್ತಿಸಿ
ಒಲವಿನ ಹಸಿವು ನೀಗಲು ಬೇಯಿಸುವ
ಅಡುಗೆಯ ಗಡಗಿಯಾಗಬೇಕು ಇವರೆಲ್ಲಾ॥
ಬಿಗಡಾಯಿಸಿ ಬಾಳು ತಗಡಾಗುವ ಮುನ್ನ
ಬೇಯಿಸುವ ರೊಟ್ಟಿಯ ತೆವವಾಗುವುರು
ಸೀಗೆ ಕಾಯಂತೆ ಕೊಳೆ ತೊಳೆದರು
ಹುಲಿಗಳು, ಎಳೆಯಂತೆ ಬಾಗಬೇಕಿವರೆಲ್ಲಾ॥
Thursday, September 5, 2024
ಗುರು
ಅರಿವಿನ ದಾರಿ ತೋರಿ,ಕರೆಯುವ
ಗುರುವೆ ನಿಮಗೆ ನನ್ನ ಶರಣು।
ಅರಿಷಡ್ವರ್ಗ ತೊರೆಯುವಂತೆ ತೀಡಿ
ಗುರಿಯೆಡೆಗೆ ನಡೆಸುವ ನಿಮಗೆ ಶರಣು॥
ಪುಸ್ತಕದ ಜ್ಞಾನ ಮೀರಿ ಹೊತ್ತಿಸಿದೆ
ಮಸ್ತಕವನ್ನರಳಿಸುವ ಸತ್ಯದ ಬೋಧನೆ ।
ಗಸ್ತು ತಿರುಗಿದೆ ನೀ.. ನಾ ದಾರಿ ಬಿಡದಂತೆ
ಶಿಸ್ತಿನ ಜೀವನ ಕಲಿಸಿದ ಗುರುವೆ ಶರಣು॥
ಭೌತಿಕ ಸುಖದ ಬಲೆಯ ಹರಿದು
ನೀತಿಯ ಮಾರ್ಗ ಹಿಡಿದ ನೀ ಶರಣ।
ಜಾತಿ ಮೀರಿ ಮಾನವತ್ವದಲ್ಲಿ ಕುಳಿತು
ಮತಿ ನೀಡಿದ ಗುರುವೆ ನಿಮಗೆ ಶರಣು॥
ಮನಸ್ಸು ಅರಳಿಸಿ ಕನಸು ಕಟ್ಟಿಸಿ
ಧನುಸ್ಸು ಹಿಡಿಸಿ ತಮಸ್ಸಿನೊಡನೆ ಕದನ।
ಬಾಣ ಬಿರುಸು ಬೆಳಕಿನೊಡನೆ ಪಯಣ
ಅನುದಿನ ಅನುರಣನ ನೀಡಿದಿರಿ ಜ್ಞಾನ ॥
Subscribe to:
Posts (Atom)
"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"
ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...
-
🌺 ಪ್ರಿಯ ಮಿತ್ರರೇ 💐🙏 ಭಾರತದ ಇತಿಹಾಸದಲ್ಲಿ ಗುಪ್ತರ ಕಾಲವನ್ನು "ಸುವರ್ಣಯುಗ" ಎಂದು ಕರೆಯಲಾಗುತ್ತದೆ, ಆದ್ದರಿಂದ ಕೆಎಎಸ್, ಪಿಎಸ್ಐ, ಇಎಸ್ಐ, ಎಸ್ಡಿಎ, ...
-
ಬಸವೇಶ್ವರರ ಸಾಮಾಜಿಕ –ಧಾರ್ಮಿಕ ಸುಧಾರಣೆಗಳು ಬಸವೇಶ್ವರರು ಬಾಗೆವಾಡಿಯಲ್ಲಿ ಮಾದರಸ ಮಾದಲಾಂಬಿಕೆಯ ಮಗನಾಗಿ ಜನಿಸಿ ಜಾತವೇದ ಮುನಿಗಳಲ್ಲಿ ವಿದ್ಯಾಭ್ಯಾಸ ಮಾಡಿ ಬಿಜ್ಜಳನ ಆಸ...
-
ಅಕ್ಬರನ ಸಾಧನೆಗಳು ಮೊಗಲರ ಅರಸರಲ್ಲಿಯೇ ಅಕ್ಬರ ಅತ್ಯಂತ ಶ್ರೇಷ್ಟ ಅರಸ.ಶೂರ ಸೇನಾನಿಯಾಗಿ ,ದಕ್ಷ ಆಡಳಿತಗಾನಾಗಿ, ಧರ್ಮ ಸಹಿಷ್ಣುವಾಗಿ,ಕಲೆ & ಸಾಹಿತ್ಯ ಫೋಷಕನಾಗ...