ಇತಿಹಾಸ
ಸ್ವಾತಂತ್ರ್ಯಾನಂತರ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಬೆಳೆಸುವ ಮತ್ತು ಅವರನ್ನು ರಾಷ್ಟ್ರದ ಏಕೀಕರಣದಲ್ಲಿ ತೊಡಗಿಸಲು ಸೇವಾ ಸಂಘಟನೆಯ ಅಗತ್ಯತೆಯನ್ನು ಅರಿತು ರಾಷ್ಟ್ರೀಯ ನಾಯಕರು ಚಿಂತನ ಮಂಥನ ನಡೆಸಿದರು. ಅವರುಗಳಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣ ರಿಂದ ಹಿಡಿದು ನೆಹರೂರವರೆಗೆ ಮತ್ತು ಕೋಠಾರಿ ಆಯೋಗದ ಶಿಫಾರಸಿನವರೆಗೆ ಪ್ರಯತ್ನಗಳಾದವು.ಆ ಪ್ರಯತ್ನದ ಫಲಶೃತಿ ಮೇ 1969 ರಂದು ಶಿಕ್ಷಣ ಸಚಿವಾಲಯ ಹಾಗೂ ವಿಶ್ವ ವಿದ್ಯಾಲಯ ದನಸಹಾಯ ಆಯೋಗ ವಿದ್ಯಾರ್ಥಿಗಳ ಪ್ರತಿನಿಧಿಗಳ ಸಮ್ಮೇಳನ ಕರೆಯಿತು. ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವನೆ ಮತ್ತು ರಾಷ್ಟ್ರ ದ ಏಕೀಕರಣಕ್ಕೆ ರಾಷ್ಟ್ರೀಯ ಸೇವಾ ಯೋಜನೆಯ ಇರಬೇಕೆಂದು ಸರ್ವಾನುಮತದ ತೀರ್ಮಾನ ಕೈಗೊಂಡರು.ನಾಲ್ಕನೆಯ ಪಂಚವಾರ್ಷಿಕ ಯೋಜನೆಯಲ್ಲಿ ರಾಷ್ಟ್ರೀಯ ಯೋಜನಾ ಆಯೋಗ 5 ಕೋಟಿ ರೂಪಾಯಿ ಬಿಡುಗಡೆ ಮಾಡಿತು ಮತ್ತು ಇದೊಂದು ರಾಷ್ಟ್ರೀಯ ಯೋಜನೆಯಾಗಿ ವಿಶ್ವ ವಿದ್ಯಾಲಯ ಹಾಗೂ ಆಯ್ದ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಗೆ ಬರುವಂತೆ ತೀರ್ಮಾನವಾಯಿತು. ಆದರೆ ಅದು ನಿಜವಾಗಿ ಜಾರಿಗೆ ಬಂದದ್ದು ಗಾಂಧೀಜಿಯವರ ಶತಮಾನೋತ್ಸವದ ವರ್ಷ ವಾದ 1969 ರ ಸೆಪ್ಟೆಂಬರ 24 ರಂದು, ಅಂದಿನ ಕೇಂದ್ರ ಶಿಕ್ಷಣ ಮಂತ್ರಿಯಾಗಿದ್ದ ವಿ.ಕೆ.ಆರ್ ವ್ಹಿ ರಾವ್ ದೇಶದ 37 ವಿಶ್ವ ವಿದ್ಯಾಲಯಗಳಲ್ಲಿ ಇದನ್ನು ಬಿಡುಗಡೆ ಮಾಡಿದರು ನಂತರ ರಾಜ್ಯದ ಸ್ನಾತಕೋತ್ತರ ಕೇಂದ್ರ, ಪದವಿ, ಪದವಿ ಪೂರ್ವ ಕಾಲೇಜುಗಳಲ್ಲಿ ವಿಸ್ತಾರ ಹೊಂದಿತು.
ಉದ್ದೇಶ
ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ " NOT ME BUT YOU " ನನಗಲ್ಲ ನಿನಗೆ.ಅಂದರೆ ಸೇವೆಯೇ ಇದರ ಧರ್ಮ, ಗಾಂಧೀಜಿಯವರ ಗ್ರಾಮೋದ್ದಾರ ಇದರ ತಳಪಾಯ, ಸಮಾನತೆಯೇ ಇದರ ಜೀವಾಳ,ರಾಷ್ಟ್ರದ ಏಕತೆ ಇದರ ಕಿರಿಟ .ಇದರ ಬ್ಯಾಡ್ಜನ್ನು ಕೊನಾರ್ಕ್ ಸೂರ್ಯ ದೇವಾಲಯದಿಂದ ತೆಗೆದುಕೊಳ್ಳಲಾಗಿದೆ. ಇದು 8 ಅಲಗುಗಳನ್ನ ಹೊಂದಿದ್ದು ಪ್ರತಿ ಅಲಗು ಮೂರು ತಾಸುಗಳನ್ನು ,ಒಟ್ಟಾರೆ ದಿನದ 24 ಗಂಟೆ ಸೂಚಿಸುತ್ತದೆ ಮತ್ತು ಇದು ಚಲನಶೀಲತೆ ಸಂಕೇತ ಹಾಗೂ ಸ್ವಯಂಸೇವಕರು 24 ಗಂಟೆ ಸೇವೆಗೆ ಸಿದ್ಧ ಎನ್ನುವುದನ್ನು ಬಿಂಬಿಸುತ್ತದೆ.ಈ ಬ್ಯಾಡ್ಜ ಹೆಮ್ಮೆಯ ಸಂಕೇತ ವಾಗಿದೆ.ಅದರಲ್ಲಿರುವ ಕೆಂಪು ತ್ಯಾಗದ,ಬಿಳಿ ಶಾಂತಿಯ,ಮತ್ತು ನೀಲಿ ಸಮೃದ್ಧಿಯ ಸಂಕೇತವಾಗಿದೆ.
ಲಾಭ
ವ್ಯವಹಾರದ ಬದುಕಿಗೆ ಅಂಟಿಕೊಂಡವರಿಗೆ ರಾಷ್ಟ್ರೀಯ ಯೋಜನೆಯ ಲಾಭ ಅರ್ಥವಾಗಲಾರದು ಅದರಾಚೆ ಬಂದು ನೋಡಿದಾಗ ನಿಜವಾದ ಲಾಭದ ಮಹತ್ವ ಅರಿವಾಗದೆ ಇರದು, ಶಿಸ್ತು, ಸಮಯದ ಪ್ರಜ್ಞೆ, ಸಹಬಾಳ್ವೆ,ಸಹಜೀವನ, ವ್ಯಕ್ತಿತ್ವ ವಿಕಸನ, ನಾಯಕತ್ವದಗುಣ,ತಾನಾಗಿ ಇದರಿಂದ ಬೆಳದು ಬರುತ್ತವೆ.
ವೇದಿಕೆಯ ಕಂಪನ ಮರೆಯಾಗುವುದಲ್ಲದೆ ನಮ್ಮ ಪ್ರತಿಭೆಯ ಅನಾವರಣಗೊಳಿಸಲು ಇದೊಂದು ಅಮೂಲ್ಯವಾದ ವೇದಿಕೆಯಾಗಿದೆ.
ಕಾರ್ಯ ಗಳು
N.S.S ಮೂಲಕ ಪರಿಸರ ಕಾಳಜಿ,ಪ್ರಕೃತಿ ವಿಕೋಪಗಳ ಪರಿಹಾರ, ಪ್ರಾಚ್ಯವಸ್ತು ಸಂರಕ್ಷಣೆಯ ಕಾರ್ಯ ಮುಂತಾದ ವು ಇಲ್ಲಿ ನಡೆಯುತ್ತವೆ.ಹಳ್ಳಿಗಳ ಉದ್ದಾರ ದೇಶದ ಉದ್ಧಾರ ಸುಮಾರು ಏಳು ಲಕ್ಷ ಕ್ಕಿಂತ ಹೆಚ್ಚಿನ ಹಳ್ಳಿಗಳು ಭಾರತ ದೇಶದಲ್ಲಿವೆ ಅವಗಳ ಉದ್ದಾರವೆ ದೇಶದ ಉದ್ಧಾರ ಗಾಂಧೀಜಿಯವರ ಸರ್ವೋದಯ ಕನಸು ನನಸಾಗಲು ಇಂದು ಯುವಕರು ಹಳ್ಳಿಯ ಕಡೆ ನಡೆಯಬೇಕಿದೆ ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸುವಾಗ ಕೇವಲ ಹಳ್ಳಿಯವರು ಮಾತ್ರ ಇರದೆ ನಗರ ಪಟ್ಟಣದ ಯುವಕರು ಇದರಲ್ಲಿ ಸೇರಿರರುತ್ತಾರೆ ಇವರೆಲ್ಲರ ಮಿಶ್ರಣ ಭವ್ಯ ಭಾರತದ ಭಾವೈಕ್ಯದ ಹೂರಣ,ಇದು ಭವಿಷ್ಯ ತ್ತಿನ ಹೋಳಿಗೆಯಾಗಬೇಕಾಗಿದೆ .ಪ್ರತಿಯೊಬ್ಬರು ಬಿಳಿಕಾಲರಿನ ಕೆಲಸ ಕೇಳಿದರೆ ತರುವುದಾದರೂ ಎಲ್ಲಿಂದ ? ಹಳ್ಳಿಯನ್ನು ದಿಲ್ಲಿಯನ್ನಾಗಿ ಮಾಡುವ ತಾಕತ್ತು ಯುವಕರಿಗೆ ಮಾತ್ರ ಸಾಧ್ಯ ಅದು ಹಳ್ಳಿಯ ಚರಂಡಿಯ ಮಲಿನತೆಯನ್ನು ಮಾತ್ರ ಹೋಗಲಾಡಿಸದೆ ಅಲ್ಲಿರುವ ಕೆಲವು ಜನರ ಮಲಿನತೆಯನ್ನೂ ಹೋಗಲಾಡಿಸುತ್ತದೆ.ಅಂದರೆ ಜಾಗೃತಿ ಅಂತಹ ಜಾಗೃತಿಗೊಳಿಸುವ ಏಕೈಕ ಮಹತ್ವದ ವೇದಿಕೆ. ರಾಷ್ಟ್ರೀಯ ಸೇವಾಯೋಜನೆಯಾಗಿದೆ ನೀವು ಸೇರಿದ್ದೀರಿ ಇನ್ನೂಬ್ಬರನ್ನು ಸೇರಲು ಪ್ರೆರೇಪಿಸಿ.
No comments:
Post a Comment