Thursday, December 5, 2024

ಭಾರತದಲ್ಲಿ ಬ್ರಿಟಿಷರ ಅಧಿಪತ್ಯ ಸ್ಥಾಪನೆ.

ಪಾರಂಪರಿಕ ವೈರಿಗಳಾದ ಇಂಗ್ಲಿಷರು ಮತ್ತು ಪ್ರೆಂಚರ ನಡುವೆ ಇಪ್ಪತ್ತು ವರ್ಷಗಳವರೆಗೆ ಭಾರತದಲ್ಲಿ ಅಧಿಪತ್ಯ ಸ್ಥಾಪಿಸಲು ಯುದ್ಧಗಳಾದವು ಅವುಗಳೆ ಕಾರ್ನಾಟಿಕ್ ಯುದ್ಧಗಳು
ಮೊದಲನೆಯ ಕಾರ್ನಾಟಿಕ ಯುದ್ಧ. 1746_48.
ಕಾರಣಗಳು
1) 1740 ರಲ್ಲಿ ಇಂಗ್ಲೆಂಡ ಮತ್ತು ಪ್ರಾನ್ಸ್ ಗಳ ನಡುವೆ ಆಸ್ಟೀಯಾದ ಉತ್ತರಾಧಿಕಾರದ ಯುದ್ಧ 
2) ಬರ್ನೆಟ್ ಫ್ರೆಂಚರ ಕೆಲವು ಹಡಗುಗಳನ್ನು ವಶಪಡಿಸಿಕೊಂಡ 
3) ಫ್ರೆಂಚ ಗೌರ್ನರ ಡೂಪ್ಲೆ ಮದ್ರಾಸ ಆಕ್ರಮಿಸ ಬಯಸಿ ಮಾರೀಸಸ್ ಗವರ್ನರ್ ಲಾಬೋರ್ಡನಾಯಿಸನನ್ನು ಕರೆಯಿಸಿ ಕೊಂಡದ್ದು
4) ಲಾಬೋರ್ಡಿನಾಯಿಸ್ ಮದ್ರಾಸ ವಶಪಡಿಸಿಕೊಂಡು ನಂತರ 40 ಸಾವಿರ ರೂಪಾಯಿಗೆ ಮಾರಿ ಹೊದದ್ದು.
ಗತಿ:
ಸ್ವತ: ಡೂಪ್ಲೆ ಮದ್ರಾಸ ವಶಪಡಿಸಿಕೊಂಡಾಗ ಬ್ರಿಟಿಷರು ಅನ್ವರುದ್ದೀನನ ಸಹಾಯ ಕೇಳಿದರು ಆತ ಮದ್ರಾಸ ಬಿಡಲು ಆದೇಶ ಮಾಡಿದ, ಬಿಡದಿದ್ದಾಗ ಅನ್ವರುದ್ದೀನನ 10 ಸಾವಿರ ಸೈನಿಕರ ಮತ್ತು ಡೊಪ್ಲೆ 1100 ಸೈನಿಕರ ನಡುವೆ ಅಡಿಯಾರಲ್ಲಿ ಕಾಳಗವಾಯಿತು ಅನ್ವರುದ್ದೀನನ ಸೈನ್ಯ ಸೋತು ಹೋಯಿತು.
ಪರಿಣಾಮಗಳು.
1) ಯೂರೋಪಿನ ಸೈನಿಕರು ಭಾರತದ ಪಾರಂಪರಿಕ ಸೈನ್ಯಕ್ಕಿಂತ ಪ್ರಭಲರು ಎಂದು ಸಾಬಿತಾಯಿತು 
2) ಎಕ್ಸ್ ಲಾ ಛಾಫೆಲ್ ಒಪ್ಪಂದಿಂದ ಯುದ್ದ ಮುಕ್ತಾಯ ವಾಯಿತು
3) ಮದ್ರಾಸ ಅನ್ನು ಬ್ರಿಟಿಷರಿಗೆ ಹಿಂದುರಿಗಿಸಲಾಯಿತು 
4) ಯುದ್ಧ ಖೈದಿಗಳನ್ನು ಬಿಡುಗಡೆ ಮಾಡಲಾಯಿತು.

ಎರಡನೆಯ ಕರ್ನಾಟಕ್ ಯುದ್ಧ 1748-54
ಕಾರಣಗಳು
1)  ಆರ್ಕಾಟನಲ್ಲಿ ಚಂದಾಸಾಹೇಬ್ ಮತ್ತು ಅನ್ವರುದ್ದೀನನ ನಡುವೆ ಉತ್ತರಾಧಿಕಾರಿ ಪೈಪೋಟಿ.
2) ಹೈದರಾಬಾದಿನಲ್ಲಿ ಮುಜಾಫರಜಂಗ ಮತ್ತು ನಾರಂಗ್ ನಡುವೆ ಉತ್ತರಾಧಿಕಾರಕ್ಕೆ ಪೈಪೋಟಿ.
3) ಫ್ರೆಂಚರು ಚಂದಾಸಾಹೇಬ ಮತ್ತು ಮುಜಾಫರಜಂಗನನ್ನು ಬೆಂಬಲಿಸದರು.
4) ಬ್ರಿಟಿಷರು ಅನ್ವರುದ್ದೀನನ ಮತ್ತು ನಾಜರಜಂಗನನ್ನು ಬೆಂಬಲಿಸಿದರು.
ಗತಿ:
ಫ್ರೆಂಚ ಬಣ ಅಂಬರ ಕಾಳಗದಲ್ಲಿ ಅನ್ವರುದ್ದೀನನ್ನು ಸೋಲಿಸಿ ಕೊಂದಿತು ಮತ್ತು ಚಂದಾಸಾಹೇಬ ಆರ್ಕಾಟ ನವಾಬನಾದ.
ಚಂದಾಸಾಹೇಬ ತಿರುಚನಾಪಳ್ಳಿಗೆ ಮುತ್ತಿಗೆ ಹಾಕಿದಾಗ ನಾಜರಜಂಗ ಬ್ರಿಟಿಷರ ಸಹಾಯದೊಂದಿಗೆ ಮುಜಾಫರಜಂಗನ ಮೇಲೆ ಯುದ್ಧ ಸಾರಿದ ನಂತರ ಕೊಲೆಯಾದ ಆಗ ಮಜಾಫರಜಂಗ ಹೈದರಾಬಾದಿನ ನವಾಬನಾದ ಅವನೂ ಅಂತಃಕಲಹದಲ್ಲಿ ಕೊಲೆಯಾದ ಡೂಪ್ಲೆ ಸಲಾಬತ್ ಜಂಗನನ್ನು ನವಾಬನನ್ನಾಗಿ ಮಾಡಿದ.
     ಚಂದಾಸಾಹೇಬ ತಿರುಚನಾಪಳ್ಳಿಗೆ ಮುತ್ತಿಗೆ ಹಾಕಿದಾಗ ರಾಬರ್ಟ್  ಕ್ಲೈವ ಆರ್ಕಾಟಿಗೆ ಮುತ್ತಿಗೆ ಹಾಕಿದ ಇದೆ ಅವಧಿಯಲ್ಲಿ ಮಾರ್ಗ ಮಧ್ಯ ದಲ್ಲಿ ಚಂದಾಸಾಹೇಬನ ಕೊಲೆಯಾಯಿತು ಮಹಮದ  ಅಲಿಯನ್ನು ಆರ್ಕಾಟನ ನವಾಬನನ್ನಾಗಿ ಮಾಡಲಾಯಿತು ಯುದ್ಧ ದಲ್ಲಿ ಡೊಪ್ಲೆ ಸೋತು ಹೋದ.
ಪರಿಣಾಮಗಳು
1) ಫ್ರೆಂಚ  ಸರ್ಕಾರ ಡೂಪ್ಲೆಯನ್ನು ಹಿಂದೆ ಕರೆಯಿಸಿಕೊಂಡಿತು.
2) 1754 ರ ಪಾಂಡಿಚೇರಿ ಒಪ್ಪಂದೊಂದಿಗೆ ಯುದ್ಧ ಮುಕ್ತಾಯವಾಯಿತು.
3) ಭಾರತೀಯರ ರಾಜಕೀಯ ಆಂತರಿಕ ವ್ಯವಹಾರದಲ್ಲಿ ಎರಡು ಪಕ್ಷಗಳು ಹಸ್ತಕ್ಷೇಪ ಮಾಡದಿರಲು ಒಪ್ಪಿದವು. 

ಮೂರನೆಯ ಕರ್ನಾಟಕ್ ಯುದ್ಧ 1756-63
ಕಾರಣಗಳು
1) ಇಂಗ್ಲೆಂಡ ಮತ್ತು ಫ್ರಾನ್ಸ್‌ನ ನಡುವೆ ಯೂರೋಪಿನಲ್ಲಿ ಸಪ್ತವಾರ್ಷಿಕ ಯುದ್ಧ ಇದು ಭಾರತದಲ್ಲಿಯೂ ಯುದ್ಧಕ್ಕೆ ಕಾರಣವಾಯಿತು.
2) ಫ್ರೆಂಚರ ವಸಾಹತುವಾಗಿದ್ದ ಚಂದ್ರನಾಗೂರನ್ನು ಇಂಗ್ಲಿಷ ಗೌರ್ನರ ರಾಬರ್ಟ್ ಕ್ಲೈವ ವಶಪಡಿಸಿಕೊಂಡದ್ದು.
3) ಭಾರತದಿಂದ ಬ್ರಿಟಿಷರನ್ನು ಹೊರಹಾಕಲು ಫ್ರೆಂಚ ಸರ್ಕಾರ ಕೌಂಟ ಡಿ ಲಾಲಿಯನ್ನು ಗೌರ್ನರ ನಾಗಿ ಕಳುಹಿಸಿದ್ದು.
4) ಕೌಂಟ ಡಿ ಲಾಲಿ ಸೇಂಟ್ ಡೇವಿಡ್  ಕೋಟೆಯನ್ನು ಮುತ್ತಿಗೆ ಹಾಕಿ ಮದ್ರಾಸ ವಸಪಡಿಸಿಕೊಳ್ಳಲು ಹೈದರಾಬಾದಿನಿಂದ ಬುಸ್ಸಿಯನ್ನು ಹಿಂದೆ ಕರೆಯಿಸಿಕೊಂಡದ್ದು
ಗತಿ:
ಹೈದರಾಬಾದಿನಿಂದ ಬುಸ್ಸಿ ಹೊರಬರುತ್ತಲೆ ಇಂಗ್ಲಿಷರು ಹೈದರಾಬಾದ ವಶಪಡಿಸಿಕೊಂಡರು.ಆಗ ಸಲಾಬತ್ 
ಇಂಗ್ಲಿಷರ ಮಿತ್ರ ನಾದ .1760 ರ ವಾಂಡಿವಾಸ ಕಾಳಗದಲ್ಲಿ ಫ್ರೆಂಚರು ಸಂಪೂರ್ಣ ವಾಗಿ ಸೋತು ಹೋದರು
ಪರಿಣಾಮ ಗಳು
1) 1763 ರ ಪ್ಯಾರಿಸ್ ಒಪ್ಪಂದದೊಂದಿಗೆ ಭಾರತದಲ್ಲಿನ ಯುದ್ಧ ಮುಕ್ತಾಯ ವಾಯಿತು.
2) ಫ್ರೆಂಚರು ಕೇವಲ ವ್ಯಾಪರಕ್ಕೆ ಸೀಮೀತವಾಗುವ ಕರಾರಿನೊಂದಿಗೆ ಅವರ ವಸಾಹತಾಗಳನ್ನು ಅವರಿಗೆ ನೀಡಲಾಯಿತು.

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...