Monday, December 16, 2024

ರೈತನ ಕಥೆ ವ್ಯಥೆ

ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ (ರಿ) ಮೈಸೂರು ಇದರ ಸಾಹಿತಿ ಶಿಕ್ಷಕರ ಸಮಿತಿಯವರು ಪ್ರಾಯೋಚಿಸಿದ "ರೈತ ದಿನ"ದ ಪ್ರಯುಕ್ತ ರಾಜ್ಯಮಟ್ಟದ ಸ್ವರಚಿತ ಕಥಾ ಕವನ ಸ್ಪರ್ಧೆ 
ದಿನಾಂಕ ೧೬/೧೨/೨೦೨೪

ಶೀರ್ಷಿಕೆ- ರೈತನ ಕಥೆ ವ್ಯಥೆ 

ಮಣ್ಣನ್ನು ನಂಬಿ ನಡೆಯುವ ಯೋಗಿಯ 
ಕಥನವ ಹೇಳುವೆ ಕೇಳಿರೊ ಅಣ್ಣ 
ಅನ್ನವ ಹಾಕುವ ಚಿನ್ನದ ಮನುಷ್ಯರ 
ವ್ಯಥೆಯನು ಕೇಳಲು ಯಾರಿಲ್ಲ ॥

ಬೀಜದ ಹೆಸರಿನ ಸೂಜಿಗ ಒಂದೆ
ಮತ್ತೆ ಬಿತ್ತಲು ಕಾಯಬೇಕು ಪಂದ್ಯ 
ಭೂತಾಯಿಯ ಒಡಲು ತುಂಬಲು
ನೈಜ ಕಾಳುಗಳ ಗುರುತಿಸಲಾರಿಲ್ಲ॥

ರಾಗಿಯ ಬೆಳೆಯನು ಬಾಗಿ ಒಕ್ಕಲು
ಸಿಕ್ಕುವುದಿಲ್ಲ ಜನ, ಇವರು ಹೇಳುವ 
ಮಂತ್ರ ಒಂದೇ ಗಣಕ ಯಂತ್ರದಿಂದ
ಬಾಳು ಚಂದ, ರೈತನ ಕೇಳಲಾರಿಲ್ಲ॥
 
ಮೋಡ ನಂಬಿ ಹೊಡೆದ ಗಳೆ
ಮಾನಸೂನ ಬರಲಿಲ್ಲ ಈ ಕಡೆ
ಸಾಕಿದ ಹಸುಗಳು ನಡೆ ಸಾವಿನ ಕಡೆ
ಜೀಕಬೇಕು ದೇಶದ ಬೆನ್ನೆಲುಬು ಯಾವ ಕಡೆ॥

ಹೆಂಡತಿ ಮಕ್ಕಳು ಉಂಡರೇನಿವನ ಸುಖ
ಕೆಂಡದಂಥ ಬದುಕಿನ ರಥ ಎಳೆದರೆ ಸಖ
ಇಲ್ಲದಿದ್ದರೆ ಉಳಿಯುವುದೆ ಕೊನೆಯತನಕ
ಆದರೂ ಬೆನ್ನೆಲುಬು ದೇಶದ ಈ ರೈತ॥

ಉನ್ನಲು ಇವನೆ ಬೇಕು, ಉಡಲು ಇವನೆ ಬೇಕು
ತನ್ನವರಿಂದಲೂ ಬಂತು ಬಹುಪಾರಕ 
ಆದರೆ ಏನು ? ದುಡಿದು ಧನಿದವನಿವನು 
ಹರಿದು ತಿನ್ನುವ ಹದ್ದುಗಳಿಗೆ ಜಾಕಪಾಟ॥


ಶ್ರೀ ಬಸನಗೌಡ ಗೌಡರ 
         ಉಪನ್ಯಾಸಕರು
ಬಾಲಕರ ಸರ್ಕಾರಿ ಪದವಿ ಪೂರ್ವ 
ಕಾಲೇಜು ಗುಳೇಗುಡ್ಡ 
ತಾಲ್ಲೂಕು ಗುಳೇಗುಡ್ಡ 
ಜಿಲ್ಲಾ:ಬಾಗಲಕೋಟೆ
ಡೈಸ್ ಕೋಡ್

DIESE CODE GPUC
29020117107

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...