ಮನುಷ್ಯ ಹಲವಾರು ಅನ್ವೇಷಣೆಗಳನ್ನು ಮಾಡಿದ ಅವು ಮಾನವನನ್ನು ನಾಗರಿಕನನ್ನಾಗಿ ಮಾಡಿದವು ಅಂದರೆ ಈ ಸಂಶೋಧನೆಯ ಉದ್ದೇಶ ನಿಸರ್ಗದಿಂದ ಹೊರಹೋಗಲಲ್ಲ, ಅದರ ಜೊತೆಗೆ ಬದುಕಬೇಕು ಅದು ಉಳಿದರೆ ಮಾತ್ರ ನಾವೆಲ್ಲ .ಮೊಬೈಲ್ ಮತ್ತು ಗಣಕಯಂತ್ರವು ನಮ್ಮನ್ನು ಎಷ್ಟರ ಮಟ್ಟಿಗೆ ಆಕ್ರಮಿಸಿಕೊಂಡವೆ ಎಂದರೆ ಅದಿಲ್ಲದೆ ನಾವು ಒಂದು ಕ್ಷಣ ಬದುಕಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ನಮ್ಮನ್ನು ನಾವು ಶರಣಾಗಿಸಿಕೊಂಡಿದ್ದೇವೆ.ಮೊಬೈಲ್ ಬಿಡಿಸಲು ಹೋದ ಗಂಡ ಹೆಂಡತಿಯಿಂದ ದೂರಾಗಿದ್ದನ್ನು ಕಂಡಿದ್ದೇನೆ.ಮಗ ತಂದೆ ತಾಯಿಯಿಂದ ದೂರಾಗಿದ್ದನ್ನು ನೋಡಿದ್ದೇನೆ.ಇದಕ್ಕೆಲ್ಲ ತದ್ವಿರದ್ದವಾಗಿ ಹಿಂದಿನ ದಿನಗಳಲ್ಲಿ ನಾಯಿಗಾಗಿ, ಕುರಿಗಾಗಿ,ಮೇಕೆ,ಗಿಡಗಳಿಗೆ, ತಂದೆ ತಾಯಿ ಅಣ್ಣ ತಮ್ಮಂದಿರನ್ನು ತೊರೆದದ್ದನ್ನು ನೋಡಿದ್ದೇನೆ.ಆದರೆ ಕಾಲದ ಗರಡಿಯಲ್ಲಿ ಜೀವಿಗಳಿಗಿಂತ ಜೀವನ ಮುಖ್ಯ ಎಂಬ ಸಿದ್ದಾಂತ ಅಂಟಿಸಿಕೊಂಡಿದ್ದೇವೆ.ತಪ್ಪೇನಲ್ಲ ಬಿಡಿ ಜೀವನ ಸುಗಮವಾಗಿದೆ, ಕ್ಷಣ ಮಾತ್ರದಲ್ಲಿ ಸೌಖ್ಯದ ಆಗರವಾಗುವಂತೆ ಮಾಡಿಕೊಂಡಿದ್ದಂತು ಸತ್ಯ, ದೇಹ ಕೃಷ ಮಾಡಿಕೊಂಡ ಮೇಲೆ ಯಾವ ಸೌಖ್ಯ ಏನು ಮಾಡೀತು ! ಮಹಾತ್ಮ ಗಾಂಧೀಜಿಯವರು ಹೀಗೆ ಹೇಳುತ್ತಾರೆ " ನೀವು ಪ್ರತಿಯೊಂದಕ್ಕೂ .....(ಬಹಿರ್ದೆಶೆಗೂ) ಹೋಗಲು ಕಾರು ಬಯಸಿದರೆ ನಿಮ್ಮ ಕಾಲೂ ನಿಮಗೆ ಬೇಡವಾದಾವು." ಎಂತಹ ಮಾತು.. ಸೌಖ್ಯ ಮತ್ತು ಸುಗಮ ದಾರಿ ಹಿಡಿದ ಹೊಸ ಪೀಳಿಗೆಯ ಜೀವನ ನನ್ನನ್ನು ದಂಗು ಬಡಿಸಿದೆ ವಿಶೇಷವಾಗಿ ಪ್ರತಿಯೊಬ್ಬರು ಇವತ್ತು ಏನು ನೋಡುತ್ತಿದ್ದಾರೆ ಎನ್ನುವುದನ್ನು ಗಮನಿಸಿದಾಗ ಬರಿ ರೀಲ್ಸ್ , ಕ್ರಿಕೆಟ್ (ಗ್ರೌಂಡನಲ್ಲಾದರೆ ಓಕೆ ) ...
ಮಾಡಿದವರಿಗೆ, ಆಡಿದ ಕರ್ತೃಗಳಿಗೆ ಹಣ, ನೋಡುವವರಿಗೆ...... ಸಂತೋಷ ಸಿಗಬಹುದೇನೋ ಹೊಸ ಪೀಳಿಗೆ ಕ್ರಮೇಣ ಹೆಣವಾಗುವತ್ತ ಸಾಗುತ್ತಿದೆ, ಬರ್ನಾರ್ಡ ಷಾ ಹೇಳುತ್ತಾರೆ " ಹನ್ನೊಂದು ಜನ ಮೂರ್ಖರು ಆಡುವ ಆಟವನ್ನು ಹನ್ನೂಂದು ಲಕ್ಷ ಜನ ನೋಡುವ ಆಟವೆ ಕ್ರಿಕೆಟ್ " ಇದರ ಅರ್ಥ ನಾನು ಕ್ರಿಕೆಟ್ ವಿರೋಧಿಸದಂತೆ ಅಲ್ಲ , ಮೈದಾನಕ್ಕಿಳಿಯಬೇಕಲ್ಲವೆ ಕೇವಲ ಅದರ ಬಗ್ಗೆ ಕಂತೆಗಟ್ಟಲೆ ಮಾತನಡುವವರು ಮಾತ್ರ ಹೆಚ್ಚಿನ ಸಂಸ್ಕೃತರು ಎನ್ನುವದಕ್ಕೆ ನನ್ನ ಹತ್ತಿರ ಉತ್ತರವಿಲ್ಲ, ಹೊಸ ಪೀಳಿಗೆಯ ದಾರಿ ಭ್ರಮನಿರಸನವಾದಂತೆ ಬಾಸವಾಗುತ್ತಿದೆ. ಭಾವನೆಗಳು ಸತ್ತು ಅದನ್ನು ಕೆರಳಸುವ ಪ್ರಕ್ರಿಯೆಯು ನಡೆಯುತ್ತಿದೆ ಅದನ್ನು ಅರಳಿಸುವ ಪ್ರಕ್ರಿಯೆಯ ಜವಾಬ್ದಾರಿಯನ್ನು ಯಾರು ಹೊರಬೇಕು. ವೈಯಿಕ್ತಿಕವಾಗಿ ಮಾಡಲು ಹೊರಟರೆ ಆತ ಹುಚ್ಚನಂತೆ ಕಂಡರೆ ಅಚ್ಚರಿಯಿಲ್ಲ ಪ್ರಾಜ್ಞರು, ಸಂಘ ಸಂಸ್ಥೆಗಳಿಂದ ಇದರ ಜಾಗೃತಿ ಮಾಡುವುದು ಅವಶ್ಯ ವೆನ್ನುವುದು ನನ್ನ ಅಭಿಪ್ರಾಯ ಗೌರವಿಸುದು ಬಿಡುವುದು ಅವರವರಿಗೆ ಬಿಟ್ಟ ವಿಚಾರ . ನಾ ಖಂಡಂತೆ ನನ್ನ ಆಭಿಪ್ರಾಯ.
ಧನ್ಯವಾದಗಳು.
No comments:
Post a Comment