Thursday, April 10, 2025

ನಾ ಕಂಡಂತೆ ನನ್ನ ಅಭಿಪ್ರಾಯ

      ಬದುಕುವ ರೀತಿಗಳು ಭಿನ್ನ ಭಿನ್ನ  ಚಿನ್ನದಂತಹ ಬದುಕು ಕಟ್ಟಿಕೊಳ್ಳುಲು ಹೀಗೆಯೇ ಬದುಕಬೇಕು ಎಂದು ಹೇಳಲು ನಾನ್ಯಾರು ? ಪ್ರಾಣಿಗಳನ್ನು ನಂಬಿ ಬದುಕಿದವರಿದ್ದಾರೆ, ಸಸ್ಯಗಳನ್ನು ನಂಬಿ ಬದುಕಿದವರಿದ್ದಾರೆ, ಮಣ್ಣು ನಂಬಿ ಬದುಕಿದವರಿದ್ದಾರೆ, ವಸ್ತುಗಳನ್ನು ನಂಬಿ ಬದುಕಿದರಿದ್ದಾರೆ, ಮನುಷ್ಯರನ್ನು ನಂಬಿ  ಬದುಕಿದವರಿದ್ದಾರೆ , ದೇವರನ್ನು ನಂಬಿ ಬದುಕಿದವರಿದ್ದಾರೆ. ಇದರಲ್ಲಿ ಯಾವುದು ಶ್ರೇಷ್ಠ  ?ಎಂದು ಹೇಳುವ ಅಧಿಕಾರ ನನಗಿಲ್ಲ ಒಂದು ವೇಳೆ ನಾನು ಹಾಗೆ ಹೇಳಿದರೆ ಯಾರಿವನು ಎಂತಹ ಪ್ರಶ್ನೆ ಬರೆದವನಿಗೆ , ಪ್ರಶ್ನೆ ಕೇಳಿದವರಿಗೆ ಬುದ್ಧಿ ಇದೆ ಏನ್ರಿ, ಎನ್ನಬಹುದಲ್ಲವೆ ? ಬಹುಶಃ ಇದರಲ್ಲಿಯೇ ಇರುವುದು ಸಮಾಜದ ನೆಮ್ಮದಿಯ ಗುಟ್ಟು ಇಂದು ಸಮಾಜ ಸಾಗುತ್ತಿರುವ  ದಿಕ್ಕನ್ನೊಮ್ಮೆ ಸೂಕ್ಷ್ಮ ವಾಗಿ ಗಮನಿಸಿ ನೋಡಿ, ಇದಕ್ಕೆಲ್ಲ  ಉತ್ತರ ಸಿಗುತ್ತದೆ.ಒಮ್ಮೆ ನಾನು ಸಣ್ಣ ವನಿದ್ದಾಗ ಒಬ್ಬರು ಹಿರಿಯರು ಹೇಳಿದ ಮಾತು ನೆನಪಿಗೆ ಬರುತ್ತಿದೆ " ಉತ್ತಮ  ಖೇತಿ, ಮಧ್ಯಮ ಬೇಪಾರಿ, ಕನಿಷ್ಠ  ಚಾಕರಿ ಎಂದಿದ್ದರು , ಅದು ಅಂದಿನ ದಿನಮಾನದಲ್ಲಿ ಕಂಡುಕೊಂಡ ಸತ್ಯ. ಅದು ಈಗ ಮಿತ್ಯವಾಗಿದೆ, ಅಂದರೆ ಕೊನೆಯದು ಮೊದಲಾಗಿದೆ ಮೊದಲನೆಯದು ಕೊನೆಯದಾಗಿ ನಿಂತಿದೆ. ಇದೂ ಶಾಶ್ವತ ಸತ್ಯವೇನಲ್ಲ ಕಾಲಚಕ್ರ ದಲ್ಲಿ ಯಾವುದು ಯಾವಾಗ ಬುಡಮೇಲಾಗುತ್ತೊ ಯಾರುಬಲ್ಲರು. ಈಗ ವಿಷಯ ಅದಲ್ಲ ಮನುಷ್ಯರು ಇಂದು ಜೀವಿ ಮತ್ತು ಭಾವಗಳಿಗಿಂತ ವಸ್ತುವಿನ ಬೆನ್ನು ಹತ್ತಿದ್ದಂತು ಸತ್ಯ. ಭೌತಿಕ ಸುಖವೆ ಪರಮ ಸುಖ ಎಂಬ ಸಿದ್ಧಾಂತದಲ್ಲಿ ನಂಬಿಕೆಯಿಟ್ಟಿದ್ದಾರೆ ಎಂದು ಅನಿಸುತ್ತಿದೆ. ಯಾಕೆ ಈ ಮಾತು ಹೇಳಬೇಕಾಯಿತು ಎಂದರೆ.ಮೊಬೈಲ್ ಮತ್ತು ಗಣಕಯಂತ್ರ ಗಳು ಭೌತಿಕ ವಸ್ತುಗಳು  ಅವುಗಳನ್ನು ನಾವು ನಂಬಿದಷ್ಟು ಇನ್ನೊಂದನ್ನು ನಂಬಿಲ್ಲ.ಇದರ ಉಪಯೋಗವು ಕೂಡಾ ಅಷ್ಟೆ ದೊಡ್ಡ ಪ್ರಮಾಣದಲ್ಲಿದೆ ಈ ಮಾತನ್ನು ನಾನೂ ಅಲ್ಲಗಳಿಯಲಾರೆ. ಆದರೆ ಅದುವೆ ಎಲ್ಲಾ ಆಗಲಾರದು ಅದನ್ನು ನಾವು ನೆನಪಿಡಬೇಕಾಗಿದೆ. ನಾವು ಅದನ್ನು ನಂಬಿ ಮಿಷನ್ ಗಳಾಗುತ್ತಿದ್ದೇವೆ  ಅಂದರೆ  ಆ ಒಂದು ಮಿಷನ್ ಮುನ್ನೆಡೆಸಲು ಇನ್ನೊಂದು ಮಿಷನ್ ಬೇಕಾಗಬಹುದೇನೋ, ಅದಕ್ಕೂ ಕಾಲಾನಂತರದಲ್ಲಿ ತುಕ್ಕು ಹಿಡಿಯುತ್ತದೆ ಎನ್ನುವುದನ್ನು ಮರೆಯುತ್ತಿದ್ದೆವೆ.ನಾವೆಲ್ಲ ನಿಸರ್ಗದ ಶಿಸುಗಳು ಅದನ್ನು ಮೀರಿ, ನಿಸರ್ಗದಲ್ಲಿ ಉಳಿಯಲು ಸಾಧ್ಯವಿಲ್ಲ ಅದಕ್ಕೆ ಪ್ರಖ್ಯಾತ ತತ್ವಜ್ಞಾನಿ, ಶಿಕ್ಷಣ ತಜ್ಞ ಒಂದು ಮಾತು ಹೇಳುತ್ತಾನೆ ಏನೆಂದರೆ "ನಿಸರ್ಗಕ್ಕೆ ಮರಳಿರಿ" 'Go.back to nature 'ಈ ಮಾತು 18 ನೇ ಶತಮಾನದಲ್ಲಿಯದಾದರೂ ಅದು ಇಂದಿಗೂ ಸತ್ಯ,  ಪ್ರಸ್ತುತವೂ ಕೂಡಾ. ಬದುಕನ್ನು ಸರಳಗೊಳಿಸಲು
ಮನುಷ್ಯ  ಹಲವಾರು ಅನ್ವೇಷಣೆಗಳನ್ನು ಮಾಡಿದ ಅವು ಮಾನವನನ್ನು ನಾಗರಿಕನನ್ನಾಗಿ ಮಾಡಿದವು ಅಂದರೆ ಈ ಸಂಶೋಧನೆಯ  ಉದ್ದೇಶ ನಿಸರ್ಗದಿಂದ ಹೊರಹೋಗಲಲ್ಲ, ಅದರ ಜೊತೆಗೆ ಬದುಕಬೇಕು ಅದು ಉಳಿದರೆ ಮಾತ್ರ  ನಾವೆಲ್ಲ .ಮೊಬೈಲ್ ಮತ್ತು ಗಣಕಯಂತ್ರವು ನಮ್ಮನ್ನು ಎಷ್ಟರ ಮಟ್ಟಿಗೆ ಆಕ್ರಮಿಸಿಕೊಂಡವೆ ಎಂದರೆ ಅದಿಲ್ಲದೆ ನಾವು ಒಂದು ಕ್ಷಣ ಬದುಕಲು ಸಾಧ್ಯವಿಲ್ಲ  ಎನ್ನುವಷ್ಟರ ಮಟ್ಟಿಗೆ ನಮ್ಮನ್ನು ನಾವು ಶರಣಾಗಿಸಿಕೊಂಡಿದ್ದೇವೆ.ಮೊಬೈಲ್ ಬಿಡಿಸಲು ಹೋದ ಗಂಡ ಹೆಂಡತಿಯಿಂದ ದೂರಾಗಿದ್ದನ್ನು ಕಂಡಿದ್ದೇನೆ.ಮಗ ತಂದೆ ತಾಯಿಯಿಂದ ದೂರಾಗಿದ್ದನ್ನು ನೋಡಿದ್ದೇನೆ.ಇದಕ್ಕೆಲ್ಲ  ತದ್ವಿರದ್ದವಾಗಿ ಹಿಂದಿನ ದಿನಗಳಲ್ಲಿ ನಾಯಿಗಾಗಿ, ಕುರಿಗಾಗಿ,ಮೇಕೆ,ಗಿಡಗಳಿಗೆ, ತಂದೆ ತಾಯಿ ಅಣ್ಣ ತಮ್ಮಂದಿರನ್ನು ತೊರೆದದ್ದನ್ನು ನೋಡಿದ್ದೇನೆ.ಆದರೆ ಕಾಲದ ಗರಡಿಯಲ್ಲಿ ಜೀವಿಗಳಿಗಿಂತ ಜೀವನ ಮುಖ್ಯ ಎಂಬ ಸಿದ್ದಾಂತ ಅಂಟಿಸಿಕೊಂಡಿದ್ದೇವೆ.ತಪ್ಪೇನಲ್ಲ ಬಿಡಿ ಜೀವನ ಸುಗಮವಾಗಿದೆ, ಕ್ಷಣ ಮಾತ್ರದಲ್ಲಿ ಸೌಖ್ಯದ ಆಗರವಾಗುವಂತೆ ಮಾಡಿಕೊಂಡಿದ್ದಂತು ಸತ್ಯ, ದೇಹ ಕೃಷ ಮಾಡಿಕೊಂಡ ಮೇಲೆ ಯಾವ ಸೌಖ್ಯ ಏನು ಮಾಡೀತು ! ಮಹಾತ್ಮ ಗಾಂಧೀಜಿಯವರು ಹೀಗೆ ಹೇಳುತ್ತಾರೆ  " ನೀವು ಪ್ರತಿಯೊಂದಕ್ಕೂ .....(ಬಹಿರ್ದೆಶೆಗೂ) ಹೋಗಲು ಕಾರು ಬಯಸಿದರೆ ನಿಮ್ಮ ಕಾಲೂ ನಿಮಗೆ ಬೇಡವಾದಾವು." ಎಂತಹ ಮಾತು.. ಸೌಖ್ಯ ಮತ್ತು ಸುಗಮ ದಾರಿ ಹಿಡಿದ ಹೊಸ ಪೀಳಿಗೆಯ ಜೀವನ ನನ್ನನ್ನು ದಂಗು ಬಡಿಸಿದೆ ವಿಶೇಷವಾಗಿ ಪ್ರತಿಯೊಬ್ಬರು ಇವತ್ತು ಏನು ನೋಡುತ್ತಿದ್ದಾರೆ ಎನ್ನುವುದನ್ನು ಗಮನಿಸಿದಾಗ ಬರಿ ರೀಲ್ಸ್ , ಕ್ರಿಕೆಟ್ (ಗ್ರೌಂಡನಲ್ಲಾದರೆ ಓಕೆ ) ...
ಮಾಡಿದವರಿಗೆ, ಆಡಿದ ಕರ್ತೃಗಳಿಗೆ ಹಣ, ನೋಡುವವರಿಗೆ...... ಸಂತೋಷ ಸಿಗಬಹುದೇನೋ ಹೊಸ ಪೀಳಿಗೆ ಕ್ರಮೇಣ ಹೆಣವಾಗುವತ್ತ ಸಾಗುತ್ತಿದೆ, ಬರ್ನಾರ್ಡ ಷಾ ಹೇಳುತ್ತಾರೆ " ಹನ್ನೊಂದು ಜನ ಮೂರ್ಖರು ಆಡುವ ಆಟವನ್ನು ಹನ್ನೂಂದು ಲಕ್ಷ ಜನ ನೋಡುವ ಆಟವೆ ಕ್ರಿಕೆಟ್ " ಇದರ ಅರ್ಥ ನಾನು ಕ್ರಿಕೆಟ್ ವಿರೋಧಿಸದಂತೆ ಅಲ್ಲ , ಮೈದಾನಕ್ಕಿಳಿಯಬೇಕಲ್ಲವೆ ಕೇವಲ ಅದರ ಬಗ್ಗೆ ಕಂತೆಗಟ್ಟಲೆ ಮಾತನಡುವವರು ಮಾತ್ರ  ಹೆಚ್ಚಿನ ಸಂಸ್ಕೃತರು ಎನ್ನುವದಕ್ಕೆ ನನ್ನ  ಹತ್ತಿರ ಉತ್ತರವಿಲ್ಲ, ಹೊಸ ಪೀಳಿಗೆಯ ದಾರಿ  ಭ್ರಮನಿರಸನವಾದಂತೆ ಬಾಸವಾಗುತ್ತಿದೆ. ಭಾವನೆಗಳು ಸತ್ತು ಅದನ್ನು ಕೆರಳಸುವ ಪ್ರಕ್ರಿಯೆಯು ನಡೆಯುತ್ತಿದೆ ಅದನ್ನು  ಅರಳಿಸುವ ಪ್ರಕ್ರಿಯೆಯ ಜವಾಬ್ದಾರಿಯನ್ನು ಯಾರು ಹೊರಬೇಕು. ವೈಯಿಕ್ತಿಕವಾಗಿ ಮಾಡಲು ಹೊರಟರೆ ಆತ ಹುಚ್ಚನಂತೆ ಕಂಡರೆ ಅಚ್ಚರಿಯಿಲ್ಲ  ಪ್ರಾಜ್ಞರು, ಸಂಘ ಸಂಸ್ಥೆಗಳಿಂದ ಇದರ ಜಾಗೃತಿ ಮಾಡುವುದು ಅವಶ್ಯ ವೆನ್ನುವುದು ನನ್ನ ಅಭಿಪ್ರಾಯ ಗೌರವಿಸುದು ಬಿಡುವುದು ಅವರವರಿಗೆ ಬಿಟ್ಟ ವಿಚಾರ . ನಾ ಖಂಡಂತೆ ನನ್ನ ಆಭಿಪ್ರಾಯ. 
ಧನ್ಯವಾದಗಳು.
  

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...