ಗಂಜಿ ಕೆರೆಯ ದಂಡೆ
ನನ್ನ ಹೊಲದ ಜಲ
ಇಲ್ಲಿ ಬಂದು ಸೇರುವದೆಂದರೆ ಏನು ?
ಕೇಳುವುದೇ ವಿಸ್ಮಯ
ಯಾವ ಮೂಲೆಯ ಜಾಗದಲ್ಲಿ
ಹೇಗೆ ಅವಿತಿದೆ ಯಾರು ಬಲ್ಲರು?
ಕಾಣದಿದ್ದರೂ ಒಂದೇ ಕಂಡರೂ ಒಂದೆ
ಉಂಡು ಸಂತಸಪಡಬೇಕು ಕ್ಷಣ
ನಾಗರಿಕತೆಯ ನೊಗ ಹೊತ್ತವರು
ನಗದೆ ಇರುವರೆ ನಿನ್ನ ?
ನಿನ್ನ ದೆನ್ನುವುದೇನಿದೆ ಜಗದಲ್ಲಿ?
ಕುನ್ನಿ, ಮಹಾದೇವ ಕರುಣಿಸದ ಜಲ
ಭೂದೇವೆ ತರಿಸಿಕೊಂಡಳು ವರ
ಹಸಿರು ಸೀರೆಯನುಟ್ಟು ಹಣೆಗೆ ಹೂ ಬೆಟ್ಟು
ಮೇ ನಲ್ಲೆ ಸುರಿದ ಮುಂಗಾರಿನ ಮಳೆ
ಹೆಂಗಾರ ವರ್ಣಿಸುವುದು
ಸಿಂಗರಿಸಿದ ಧರಣಿ,ವಧು ವರರಿಗೆ
ಶಾಸಕ್ಕಿ ಹೊಯ್ದಾಂಗ
ಹೊಸಮಾಲಗಿತ್ತಿ ನಸುನಾಚಿ
ಕನಸುಗಳ ಬೆನ್ನೇರಿದಾಂಗ
ಬಿರಿದ ಕರಿ ಹೊಲಗದ್ದೆ
ಕಾಯ್ದು ಕಮ್ಮಾರನ ತಿದಿ ಗಾಳಿ
ಕಾಡ ಬಂದಿದೆ ಏನೋ ಕಾರ್ಮೋಡ
ಬಿಳಿಯ ಕಲ್ಲುಗಳೊಳಗೂಡಿ
ಮೇಲೆ ಬೆಂಕಿಯ ಕಿಡಿ
ಕೆಳಗೆ ಬಂಗಾರದಂತಹ
ಭಾಸ್ಕರನ ಕಿರಣ
ನಳ ನಳಿಸುವ ಗಿಡ ಮರ
ನೋಡಲು ತೆರಿಗೆಯ ಹಾಕಿದರೆ
ಏನು ಮಾಡುವುದು ?
ನನ್ನ ದೆನ್ನುವುದು ಏನಿಲ್ಲಾ
ಕಣ್ಣು ಹಾಯೀಸಿದ ಕಡೆ ಸ್ವರ್ಗದ ಬಿಡು
ಅಸ್ವಾದಿಸು ಮತ್ತೆ ಕಾಣಲು
ಮಹಾದೇವನ ಆಶೀರ್ವಾದ ಬೇಕು