7.1. ಆಧುನಿಕ ಭಾರತ : ಭಾರತಕ್ಕೆ ಯುರೋಪಿಯನ್ನರ ಆಗಮನ.
ಪೋರ್ಚಗೀಸರು; 1498 ರಲ್ಲಿ ವಾಸ್ಕೋ-ಡ-ಗಾಮ ಭಾರತಕ್ಕೆ ಜಲಮಾರ್ಗ ಕಂಡು ಹಿಡಿಯುವದರ ಮೂಲಕ ಯೂರೋಪಿನ್ನರ ವ್ಯಾಪಾರ ಪುನರ್ಸ್ಥಾಪಿಸಲ್ಪಟ್ಟತು. ಭಾರತದಲ್ಲಿ ಮೊದಲ ಪೋರ್ಚಗೀಸರ ಗೌವರ್ನರ್ ಫ್ರಾನ್ಸಿಸ್-ಡಿ-ಅಲ್ಮಿಡಾ. ಆಲ್ಫೆನ್ಸೊ-ಡಿ-ಅಲ್ಬುಕರ್ಕ ಬಿಜಾಪೂರದ ಆದಿಲ್ ಷಾಹಿಗಳಿಂದ ಗೋವಾವನ್ನು ಗೆದ್ದುಕೊಂಡನು.
ಯುರೋಪಿಯನ್ನರು ರಾಜಧಾನಿ ಈಸ್ಟ ಇಂಡಿಯಾ ಕಂಪನಿ ಸ್ಥಾಪನೆ ವ್ಯಾಪಾರಿ ಕೇಂದ್ರಗಳು ಭಾರತದಲ್ಲಿ ನೆಲೆ ನಿಲ್ಲಲಾರದ್ದಕ್ಕೆ ಕಾರಣಗಳು
1) ಪೋರ್ಚಗೀಸರು ಗೋವಾ 1498 ಆಗಮನ ದೀವ, ದಮನ, ಸಾಲ್ಸಟ್, ಬೇಸಿನ್
1) ಧಾರ್ಮಿಕ ಮತಾಂಧ ನೀತಿ 2) ವಿಜಯ ನಗರದ ಅವನತಿ
2) ಡಚ್ಚರು ಪುಲಿಕಾಟ 1602 ಮಚಲಿಪಟ್ಟಣ, ಬಲಿಪಟ್ಟಣ, ನಾಗಪಟ್ಟಣ, ಕೊಚ್ಚಿನ್, 1) ಆಗ್ನೇಯ ಏಷಿಯಾ ದ್ವೀಪಗಳ ಕಡೆ ಗಮನ ನೀಡಿದ್ದು
3) ಫ್ರೆಂಚರು ಪಾಂಡಿಚೇರ 1664 ಸೂರತ್, ಚಂದ್ರನಾಗೂರು, ಮಾಹೆ, ಕಾರೈಕಲ್
1) ಡೂಪ್ಲೆ ನಂತರದ ಅಧಿಕಾರಿಗಳ ಅಸಮರ್ಥತೆ
4) ಇಂಗ್ಲೀಷರು ಕಲ್ಕತ್ತಾ 1600 ಸೂರತ್, ಅಹ್ಮದಾಬಾದ್, ಆಗ್ರಾ, ಮದ್ರಾಸ ,ಬ್ರೋಚ್, ಭಾರತದಲ್ಲಿ ಅಧಿಪತ್ಯೆ ಸ್ಥಾಪನೆ ಮಾಡಿದರು
7.2 ಭಾರತದಲ್ಲಿ ಬ್ರಿಟಿಷ ಸಾಮ್ರಾಜ್ಯ ಸ್ಥಾಪನೆ:
ಇಂಗ್ಲಿóಷ ಮತ್ತು ಫ್ರೆಂಚರ ನಡುವೆ ಮೂರು ಕರ್ನಾಟಿಕ್ ಯುದ್ದಗಳು ನಡೆದವು 1ನೇ ಕರ್ನಾಟಿಕ ಯದ್ದ ಎಕ್ಸ-ಲಾ-ಛಾಪೆಲ್ 2ನೇ & 3ನೇ ಕರ್ನಾಟಿಕ್ ಯುದ್ದಗಳು ಕ್ರಮವಾಗಿ ಪಾಂಡಿಚೇರಿ ಮತ್ತು ಪ್ಯಾರೀಸ್ ಒಪ್ಪಂದಗಳೊಂದಿಗೆ ಮುಕ್ತಾಯಗೊಂಡವು. ಬಂಗಾಲದಲ್ಲಿ 1757 ರಲ್ಲಿ ಪ್ಲಾಸಿ ಕಾಳಗ ಸಿರಾಜ-ಉದ್-ದೌಲ ಮತ್ತು ರಾಬರ್ಟ ಕ್ಲೈವರ ನಡುವೆ ನಡೆಯಿತು ಈ ಕದನವು ಬಂಗಾಳದಲ್ಲಿ ಬ್ರಿಟಿಷರ ಸಾಮ್ರಾಜ್ಯ ಸ್ಥಾಪನೆಗೆ ಬುನಾದಿ ಹಾಕಿತು, 1764 ರಲ್ಲಿ ನಡೆದ ಬಕ್ಸಾರ ಕಾಳಗ ಬಂಗಾಳದ ಮೇಲೆ ಇಂಗ್ಲಿಷರ ಪ್ರಾಬಲ್ಯವನ್ನು ಸ್ಥಿರಗೊಳಿತು.
ಹೈದರಾಲಿ ಮತ್ತು ಬ್ರಿಟಿಷರ ನಡುವೆ 1ನೇ ಆಂಗ್ಲೋ-ಮ್ಯಸೂರ ಯುದ್ದ ನಡೆದು ಮದ್ರಾಸ ಒಪ್ಪಂದದೊಂದಿಗೆ 2ನೇ ಆಂಗ್ಲೋ-ಮೈಸೂರು ಯುದ್ಧ ಮಂಗಳೂರು ಒಪ್ಪಂದದೊಂದಿಗೆ 3ನೇ ಆಂಗ್ಲೋ-ಮೈಸೂರು ಯುದ್ಧ ಮ್ಯಸೂರು ಹುಲಿ ಎಂದು ಕರೆಯಿಸಿಕೊಂಡಿರುವ ಟಿಪ್ಪು ಮತ್ತು ಬ್ರಿಟಿಷರ ನಡುವೆ ನಡೆದು ಇದರಲ್ಲಿ ಟಿಪ್ಪು ಸೋತಾಗ ಶ್ರೀರಂಗಪಟ್ಟಣ ಒಪ್ಪಂದದೊಂದಿಗೆ ಯುದ್ದ ಮುಕ್ತಾಯವಾಯಿತು. ಈ ಒಪ್ಪಂದದ ಕರಾರುಗಳೆಂದರೆ ಟಿಪ್ಪು ತನ್ನ ಅರ್ಧ ರಾಜ್ಯ ಬಿಟ್ಟು ಕೊಡಬೇಕಾಯಿತಲ್ಲದೆ ಯುದ್ಧ ಪರಿಹಾರಕ್ಕಾಗಿ 330 ಲಕ್ಷ ರೂಪಾಯಿಗಳನ್ನು ಕೊಡಬೇಕಾಯಿತು. ಯುದ್ಧ ಪರಿಹಾರವನ್ನು ಪಾವತಿಸುವವರೆಗೆ ತನ್ನ ಇಬ್ಬರು ಮಕ್ಕಳನ್ನು ಒತ್ತೆಯಾಳಾಗಿ ಇಡಬೇಕಾಯಿತು.
ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವನು ಲಾರ್ಡ ವೆಲ್ಲೆಸಿ.್ಲ ಈ ಪದ್ಧತಿಗೆ ಒಳಗಾದ ಮೊದಲ ರಾಜನೆಂದರೆ ಹೈದರಾಬಾದಿನ ನಿಜಾಮ.. ಈ ಪದ್ದತಿಗೆ ಒಳಗಾದ ಇನ್ನುಳಿದ ಭಾರತೀಯ ರಾಜ್ಯಗಳೆಂದರೆ ತಿರುವಾಂಕೂರು, ಔದ್, ಬರೋಡಾ, ಜೈಪುರ. ಟಿಪ್ಪವಿನ ಮೇಲೆ ಇದನ್ನು ಹೇರಲು ಪ್ರಯತ್ನಿಸಿದಾಗ 4ನೇ ಆಂಗ್ಲೋ-ಮೈಸೂರು ಯುದ್ಧ ನಡೆಯಿತು. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ಜಾರಿಗೆ ತಂದವನು ಲಾರ್ಡ ಡಾಲ ಹೌಸಿ. ಈ ನೀತಿ ಅನುಸರಿಸಿ ವಸಪಡಿಸಿಕೊಂಡ ರಾಜ್ಯಗಳೆಂದರೆ ಸತಾರ, ನಾಗಪುರ, ಉದಯಪುರ, ಝಾನ್ಸಿ,
1857 ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ರಾಜಕೀಯ, ಆಡಳಿತಾತಾತ್ಮಕ, ಆರ್ಥಿಕ ಕಾರಣಗಳಲ್ಲದೆ ಸೈನ್ಯದಲ್ಲಿಯ ಅತೃಪ್ತಿಯ ಫಲವಾಗಿ ಬ್ರಿಟಿಷರು ಹೊಸದಾಗಿ ಜಾರಿಗೆ ತಂದ ಎನ್ ಫೀಲ್ಡ ಬಂದೂಕುಗಳನ್ನು ಸೈನಿಕರು ಬಳಸಲು ನಿರಾಕರಿದಾಗ ದಂಗೆ ಸ್ಫೋಟಗೊಂಡಿತು. 34ನೇ ಪದಾತಿ ದಳದ ಮಂಗಳಪಾಂಡೆ ಬ್ರಿಟಿಷ ಸಾರ್ಜಂಟನನ್ನು ಕೊಂದು ಹಾಕಿದ. ಬ್ರಿಟಷರು ಪದಾತಿ ದಳವನ್ನು ವಜಾ ಮಾಡಿದರು. ಹೀಗೆ ಲಕ್ನೋದಲ್ಲಿ ಹಜರತ್ ಬೇಗಂ, ಕಾನ್ಪುರದಲ್ಲಿ ನಾನಾಸಾಹೇಬ, ಝಾನ್ಸಿಯಲ್ಲಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ಧ ದಂಗೆ ಎದ್ದರು. ಬ್ರಿಟಿಷರು ಅವರನ್ನೆಲ್ಲ ಸದೆಬಡಿದರು. ಈ ದಂಗೆಯು ವಿಫಲತೆ ಹೊಂದಲು ಕಾರಣಗಳೆಂದರೆ 1) ದಂಗೆಯು ರಾಷ್ಟ್ರೀಯ ಲಕ್ಷಣ ಹೊಂದಿರದೆ ಮಧ್ಯಭಾರತಕ್ಕೆ ಮಾತ್ರ ಸೀಮಿತವಾಗಿತ್ತು. 2) ದಂಗೆಕೋರರಲ್ಲಿ ಸಮಾನ ಉದ್ದೇಶÀಗಳಿರಲಿಲ.್ಲ
7.3 ಆರ್ಥಿಕತೆ ಮತ್ತು ಶಿಕ್ಷಣದ ಮೇಲೆ ಬ್ರಿಟಿಷ ಆಡಳಿತದ ಪ್ರಭಾವ.
ಬ್ರಿಟಿಷರಿಗೆ ಭೂಕಂದಾಯ ಸರ್ಕಾರದ ಮೂಲ ಆದಾಯವಾಗಿತ್ತು. ಹೀಗಾಗಿ ಹಳೆಯ ಕಂದಾಯ ಪದ್ಧತಿಗಳ ಜೊತೆಗೆ ಹೊಸ ರೀತಿಯ ಕಂದಾಯ ಪದ್ಧತಿಗಳನ್ನು ಜಾರಿಗೆ ತಂದರು. 1793 ರಲ್ಲಿ ಲಾರ್ಡ್ ಕಾರ್ನವಾಲಿಸ್ ಬಂಗಾಲದಲ್ಲಿ ಶಾಶ್ವತ ಕಂದಾಯ ಪದ್ದತಿಯನ್ನು ಜಾರಿಗೆ ತಂದನು. ಬಾಂಬೆ & ಮದ್ರಾಸ ಪ್ರಾಂತ್ಯಗಳಲ್ಲಿ ಈಸ್ಟ ಇಂಡಿಯಾ ಕಂಪನಿಯು ಕೃಷಿಕರೊಂದಿಗೆ ನೇರವಾಗಿ ಕಂದಾಯ ಕೊಡುವ ಒಪ್ಪಂದ ಮಾಡಿಕೊಂಡಿತು. ಇದುವೆ ರೈತವಾರಿ ದ್ಧತಿ. ಭಾರತದ ವಾಯವ್ಯ ಭಾಗದಲ್ಲಿ ಈಸ್ಟ ಇಂಡಿಯಾ ಕಂಪನಿಯು ಮಹಲ್ನೊಂದಿಗೆ ಕಂದಾಯ ನೀಡುವ ಒಪ್ಪಂದ ಮಾಡಿಕೊಂಡಿತು. ಮಹಲ್ ಎಂದರೆ ಒಂದು ಕಂದಾಯ ಘಟಕವಾಗಿದು, ಇದು ಒಂದು ಹಳ್ಳಿ ಅಥವಾ ಅನೇಕ ಹಳ್ಳಿಗಳಿಂದ ಕೂಡಿತ್ತು.
ಭಾರತದ ಸಂಪತ್ತು ಮತ್ತು ಸಂಪನ್ಮೂಲಗಳು ಯಾವುದೆ ಆರ್ಥಿಕ & ವಸ್ತು ರೂಪದ ಸಮಾನ ಆದಾಯ ಅಥವಾ ಲಾಭವಿಲ್ಲದೆ ಇಂಗ್ಲೆಂಡಿಗೆ ಹರಿದು ಹೋದದ್ದನ್ನು ಸಂಪತ್ತಿನ ಸೋರಿಕೆ ಎಂದು ಕರೆಯಲಾಗಿದೆ. ಈ ಸಿದ್ದಾಂತ ಪ್ರತಿಪಾದನೆ ಮಾಡಿದವರು ದಾದಾಬಾಯಿ ನವರೋಜಿ.
1835 ರಲ್ಲಿ ಲಾರ್ಡ್ ಮೆಕಾಲೆ ಇಂಗ್ಲಿಷ ಶಿಕ್ಷಣದ ಬೆಂಬಲಿಗರ ಅಭಿಪ್ರಾಯ ಬೆಂಬಲಿಸಿ ಭಾರತದಲ್ಲಿ ಪಾಶ್ಚಿಮಾತ್ಯ ಮಾದರಿಯ ಶಿಕ್ಷಣ ವ್ಯವಸ್ಥೆಯ ಬೆಳವಣಿಗೆ ಹಾಗೂ ಇಂಗ್ಲಿಷ ಶಿಕ್ಷಣದ ಮಾದ್ಯಮವಾಗಿರಬೇಕೆಂದು ಪ್ರತಿಪಾದಿಸಿದ. “ರಕ್ತ ಮತ್ತು ಬಣ್ಣದಲ್ಲಿ ಭಾರತೀಯ ಆದರೆ ಅಭಿರುಚಿ, ಹವ್ಯಾಸ ಬುದ್ಧಿಮತ್ತೆಯಲ್ಲಿ ಇಂಗ್ಲಿಷರÀಂತಹ ವರ್ಗ ಸಷ್ಟಿಸಲು ಅವನು ಉದ್ದೇಶಿಸಿದ್ದ. 1854 ರಲಿ ಚಾರ್ಲ್ಸ ವುಡ್ ಶಿಕ್ಷಣದ ಅಭಿವೃದ್ಧಿಯನ್ನು ಕುರಿತು ತನ್ನ ವರಿದಿಯನ್ನು ಸಿದ್ದಪಡಿಸಿದ. ಇದನ್ನು “ಇಂಗ್ಲಿಷ ಶಿಕ್ಷಣದ ಮಹಾಸನ್ನದು” ಎಂದು ಕರೆಯಲಾಗಿದೆ.
7.4 ಸಾಮಾಜಿಕ-ಧಾರ್ಮಿಕ ಸುಧಾರಣಾ ಚಳುವಳಿ.
ಸುಧಾರಕರು ತಂದೆ&ತಾಯಿ ಸಮಾಜ ಸ್ಥಾಪನೆ ಕಾಲ &ಸ್ಥಳ ವಿಶೇಷತೆ
1) ರಾಜಾ ರಾಮ ಮೋಹನರಾಯ ರಮಾಕಾಂತರಾಯತಾರಿಣಿದೇವಿ
ಬ್ರಹ್ಮ ಸಮಾಜ
1828 1772 ರಾಧಾನಗರ “ಭಾರತೀಯ ಪುನರುಜ್ಜೀವನದ ಧ್ರುವತಾರೆ”
1829 ರ ಸತಿ ನಿóಷೇದ ಪ್ರಯತ್ನ
2) ಸ್ವಾಮಿ ದಯಾನಂದ ಸರಸ್ವತಿ ಕೃಷ್ಣಾಜಿ ಯಶೋಧಬಾಯಿ
ಆರ್ಯ ಸಮಾಜ
1875 1824 ತಂಕರಾ ಶುದ್ದಿ ಚಳುವಳಿ, ವೇದಗಳಿಗೆ ಹಿಂತಿರುಗಿ,
ಕೃತಿ “ಸತ್ಯಾರ್ಥ ಪ್ರಕಾಶ”
3) ಸ್ವಾಮಿ ವಿವೇಕಾನಂದ ವಿಶ್ವನಾತ ದತ್ತಭುವನೇಶ್ವರಿದೇವಿ
ರಾಮಕೃಷ್ಣ ಮಠ
1897 1863 ಕಲ್ಕತ್ತಾ 1893 ವಿಶ್ವಧರ್ಮ ಸಮ್ಮೇಳನ. ವೇದಾಂತ ಸಮಾಜ ಸ್ಥಾಪನೆ,ಪತ್ರಿಕೆÉ “ಪ್ರಭುದ್ದ ಭಾರತ” “ಉದ್ಭೋದನ”
4) ಬ್ಲಾವತ್ಸ್ಕಿ& ಕರ್ನಲ್ ಆಲ್ಕಾಟ್ -
1875 ಥಿಯೋಸಪಿಕಲ್ ಸೊಸ್ಯಟಿ -
ಆನಿಬೆಜಂಟ ಬನಾರಸನಲ್ಲಿ ಸೆಂಟ್ರಲ್ ಹಿಂದೂ ಕಾಲೇಜು ಸ್ಥಾಪಿಸಿದರು.
5) ಸರ್ ಸೈಯದ್ ಅಹಮದಖಾನ -
ಅಲಿಘಡ ಚಳುವಳಿ
1817 ದೆಹಲಿ ಮೊಹಮ್ಮಡನ್-ಆಂಗ್ಲೋ-ಓರಿಯಂಟಲ್ ಶಾಲೆ ಸ್ಥಾಪನೆ
7.5 ಮೈಸೂರ-ಒಂದು ಮಾದರಿ ರಾಜ್ಯ
1831 ರಿಂದ 1881 ರವರೆಗೆ ಕಮಿಷನರ್ ಆಡಳಿತ ಮೈಸೂರಿನಲ್ಲಿತ್ತು. ಪ್ರಸಿದ್ದ ಕಮಿಷನರಗಳೆಂದರೆ ಮಾರ್ಕ ಕಬ್ಬನ್ ಮತ್ತು ಲೆವಿಸ್ ಬೆಂಥಾಮ್ ಬೌರಿಂಗ್. ಮಾರ್ಕ್ ಕಬ್ಬನ್ರು ಮೈಸೂರಿನಿಂದ ಬೆಂಗಳೂರಿಗೆ ರಾಜಧಾನಿ ವರ್ಗಾಯಿಸಿದರು 1859 ರಲ್ಲಿ ಬೆಂಗಳೂರು ಹಾಗೂ ಜೋಲಾರಪೇಟ್ ನಡುವೆ ರೈಲು ಮಾರ್ಗ ಹಾಕಿಸಿzರುÀ. ಇದು ಮೈಸೂರು ರಾಜ್ಯದ ಪ್ರಥಮ ರೈಲು ಮಾರ್ಗವಾಗಿದೆ
ಲೆವಿಸ್ ಬೆಂಥಾಮ್ ಬೌರಿಂಗ್ರ ಅವಧಿಯಲ್ಲಿ ಮೈಸೂರು ಆಡಳಿತದ ಸಮಗ್ರ ಆಡಳಿತವನ್ನು ಪುನರ್ ಸಂಘಟಿಸಿದನು. ನ್ಯಾಯಾಂಗ &ಪೋಲೀಸ್ ಇಲಾಖೆಗಳನ್ನು ವ್ಯವಸ್ಥಿತಿವಾಗಿ ಸಂಘಟಿಸಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆಯೊಂದಿಗೆ ಶಿಕ್ಷಣದಲ್ಲಿ ಸುಧಾರಣೆಗಳನ್ನು ಜಾರಿಗೊಳಿಸಲಾಯಿತು.
ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ಮೈಸೂರಿನ ಪ್ರಮುಖ ದಿವಾನರುಗಳು. ಸರ್ ಎಂ ವಿಶ್ವೇಶ್ವರಯ್ಯ ‘ಆಧುನಿಕ ಮೈಸೂರಿನ ಶಿಲ್ಪಿ ಮತ್ತು ನಿರ್ಮಾತೃ’. ಇವರು 1861 ಸಪ್ಟಂಬರ್ 15 ರಂದು ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಶ್ರೀನಿವಾಸ ಶಾಸ್ತ್ರಿ, ವೆಂಕಟಲಕ್ಷ್ಮಮ್ಮರ ಮಗನಾಗಿ ಜನಿಸಿದರು. “ಕೈಗಾರೀಕರಣ ಇಲ್ಲವೆ ನಾಶ” ಎಂಬ ಘೋಷಣೆ ನೀಡಿ ಭದ್ರಾವತಿಯಲ್ಲಿ ಕಬ್ಬಿಣ ಕಾರ್ಖಾನೆ, ಮೈಸೂರಿನಲ್ಲಿ ಗಂಧದ ಎಣ್ಣಿ ಕೈಗಾರಿಕೆ, ಬೆಂಗಳೂರಿನಲ್ಲಿ ಸಾಬೂನು ಕಾರ್ಖಾನೆ ಸ್ಥಾಪಿಸಿದರು. ಅಲ್ಲದೆ ಕೃಷ್ಣರಾಜಸಾಗರ ಆಣೆಕಟ್ಟು ಇವರ ಮಹಾನ್ ಸಾಧನೆಯಾಗಿದೆ. ಇವರ ಸಾಧನೆ ಗುರುತಿಸಿ ಭಾರತ ಸರ್ಕಾರ 1955 ರಲ್ಲಿ ಭಾsÀರತರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ಈ ಪ್ರಶಸ್ತಿ ಪಡೆದ ಮೊದಲ ಕನ್ನಡಿರು ಇವರೆ. ಇವರಿಂದ ಎ ವ್ಹಿಜನ್ ಆಪ್ ಪ್ರಾಸ್ಪರಸ್ ಮೈಸೂರು, Raಪಿಡ್ ಡೆವಲೆಪ್ಮೆಂಟ್ ಆಫ್ ಇಂಡಸ್ಟ್ರೀಸ್ ಇನ್ ಇಂಡಿಯಾ ಕೃತಿಗಳು ರಚಿಸಲ್ಪಟ್ಟವು. ಮಿರ್ಜಾ ಇಸ್ಮಾಯಿಲ್ ಇನ್ನೊರ್ವ ಪ್ರಮುಖ ದಿವಾನರು. ಇವರ ಅವಧಿಯಲ್ಲಿ ಬೆಂಗಳೂರಿನಲ್ಲಿ ಗಾಜಿನ ಕಾರ್ಖಾನೆ, ಪಿಂಗಾಣಿ ಪಾತ್ರೆ ಕಾರ್ಖಾನೆ, ಭದ್ರಾವತಿಯಲ್ಲಿ ಉಕ್ಕು ಹಾಗೂ ಕಾಗದ ಕಾರ್ಖಾನೆಗಳನ್ನು ಸ್ಥಾಪನೆಯಾದವು.
7.6 ಭಾರತದ ರಾಷ್ಟ್ರೀಯ ಚಳುವಳಿ .
• ಭಾರತದ ರಾಷ್ಟ್ರೀಯ ಕಾಂಗ್ರೆಸ್ 1885 ರಲ್ಲಿ ಸ್ಥಾಪನೆಯಾಯಿತು. ಇದರ ಮೊದಲ ಅಧಿವೇಶನ ಬೊಂಬಾಯಿಯಲ್ಲಿ ನಡೆಯಿತು. ಪ್ರಖ್ಯಾತ ಕಲ್ಕತ್ತಾದ ಬ್ಯಾರಿಸ್ಟರ್ ಉಮೇಶಚಂದ್ರ ಬ್ಯಾನರ್ಜಿ ಇದರ ಅಧ್ಯಕ್ಷತೆ ವಹಿಸಿದ್ದರು. ಇದರ ಮುಖ್ಯ ಉದ್ದೇಶಗಳೆಂದರೆ ರಾಷ್ಟ್ರೀಯ ಏಕತೆಯನ್ನು ಪ್ರೋತ್ಸಾಹಿಸುವದು ಮತ್ತು ಬಲಪಡಿಸುವದು. ಭಾರತೀಯ ಜನಸಮೂಹಕ್ಕೆ ರಾಜಕೀಯ ಶಿಕ್ಷಣವನ್ನು ನೀಡುವದು ಮತ್ತು ಸಾರ್ವಜನಿಕ ಅಭಿಪ್ರಾಯ ಮೂಡಿಸುವದು.
• 1905 ರಲ್ಲಿ ಲಾಡ್ ಕರ್ಜನ್ ಹಿಂದೂ ಮುಸ್ಲಿಂರ ಐಕ್ಯತೆ ಒಡೆಯಲು ಬಂಗಾಳದ ವಿಭಜನೆ ಮಾಡಿದ.
• ಸಾತಂತ್ರ್ಯ ಹೋರಾಟದಲ್ಲಿ ಗೋಪಾಲ ಕೃಷ್ಣ ಗೋಖÀಲೆ, ದಾದಾಬಾಯಿ ನವರೋಜಿ, ಆನಂದಚಾರ್ಲು, ಸುರೇಂದ್ರನಾಥ ಬ್ಯಾನರ್ಜಿ ಇವರು ಮಂದಗಾಮಿ ನಾಯಕರಾದರೆ, ಲಾಲ, ಬಾಲ, ಪಾಲ ಪ್ರಮುಖ ತೀವೃಗಾಮಿಗಳಾಗಿದ್ದಾರೆ.
• ಗಾಂಧೀಜಿಯವರು ಸತ್ಯ ಅಹಿಂಸೆ ಆದರ್ಶಗಳನ್ನು ಅನುಸರಿಸಿದರು. ಬಹುಬೇಗ ಮೂರು ಹೋರಾಟಗಳಲ್ಲಿ ತೊಡಗಿದರು. ಅವುಗಳೆಂದರೆ ಚಂಪಾರನ್ ಸತ್ಯಾಗ್ರಹ. ಇದರ ಮೂಲಕ ತೀನಕಾತಿಯಾ ಪದ್ದತಿ ಕೈಬಿಡುವಂತೆ ಮಾಡಿದರು.ಅಹವiದಾಬಾದ ಗಿರಣಿ ಮುಷ್ಕರದ ಮೂಲಕ ಕಾರ್ಮಿಕರ ವೇತನ ಹೆಚ್ಚಿಸುವಂತೆ ಮಾಡಿದರು, ಖೇಡ ಸತ್ಯಾಗ್ರದ ಮೂಲಕ ಶಕ್ಯರಿದ್ದವರು ಮಾತ್ರ ಕಂದಾಯ ನೀಡುವಂತಾಯಿತು.
• ಜಲಿಯನ್ ವಾಲಾಬಾಗ ದುರಂತ 1919 ರಲ್ಲಿ ನಡೆಯಿತು. ಜನರಲ್ ಡಯರ ಪ್ರತಿಭಟನಾನಿರತರ ಮೇಲೆ ಗುಂಡಿನ ಮಳೆಗರೆದ.
• ಖಿಲಾಪತ್ ಚಳುವಳಿ ಮುಖಂಡರಾದ ಮೌಲಾನಾ ಅಜಾದ & ಹಕೀಂ ಅಜ್ಮಲ್ ಖಾನ ಬ್ರಿಟಿಷರ ವಿರುದ್ದ ಚಳುವಳಿಗೆ ಕರೆ ನೀಡಿದರು. ಐ ಎನ್ ಸಿ ಇದಕ್ಕೆ ಬೆಂಬಲ ನೀಡಿದ್ದರಿಂದ ಹಿಂದೂ ಮುಸ್ಲಿಂರ ನಡುವೆ ಗಾಢ ಸ್ನೇಹ ಬೆಳೆಯಿತು.
• 1920 ರಲ್ಲಿ ಗಾಂಧಿಜೀಯವರು ಅಸಹಕಾರ ಚಳುವಳಿಯನ್ನು ಪ್ರಾರಂಭಿಸಿದರು. 1922 ರ ಚೌರಿ-ಚೌರಾ ಘಟನೆಯ ಹಿಂಸೆಯಿಂದ ನೊಂದು ಚಳುವಳಿಯನ್ನು ಹಿಂಪಡೆದರು. ಇದರಿಂದ ಅಸಂತುಷ್ಟರಾದ ಸಿ ಆರ್ ದಾಸ, ಮೊತಿಲಾಲ ನೆಹರು ಸೇರಿ ಸ್ವರಾಜ್ಯ ಪಕ್ಷ ಕಟ್ಟಿದರು.
• 1927 ರಲ್ಲಿ ಭಾರತೀಯರನ್ನು ಸಂತೈಸಲು ಬ್ರಿಟಿಷರು ಸೈಮನ್ ಆಯೋಗ ರಚಿಸಿದರು. ಇದರಲ್ಲಿ ಭಾರತೀಯ ಸದಸ್ಯರಿಲ್ಲದ ಕಾರಣ ಭಾರತೀಯರು ಸೈಮನ್ ಹಿಂದಿರುಗು ಎಂಬ ಘೋಷಣೆ ಕೊಗಿದರು. ಇದಕ್ಕೆ ಬ್ರಿಟಿಷರು ಎಲ್ಲಾ ರಾಜಕೀಯ ಪಕ್ಷಗಳಿಗೆ ಒಪ್ಪಿಗೆಯಾಗುವಂತೆ ಪ್ರಸ್ತಾವನೆ ಸಲ್ಲಿಸುವಂತೆ ಸವಾಲು ಹಾಕಿದರು. 1928 ರಲ್ಲಿ ನೆಹರು ವರದಿ ಸÀಲ್ಲಿಕೆಯಾದಾಗ ಬ್ರಿಟಿಷರು ಇದನ್ನು ನಿರ್ಲಕ್ಷಿಸಿದರು. 1929 ರ ಲಾಹೋರ ಕಾಂಗ್ರೆಸ್ ಆಧಿವೇಶನದಲ್ಲಿ ಪೂರ್ಣ ಸ್ವರಾಜ್ಯ ಗುರಿ ಎಂದು ಘೋಷಿಸಿಸಲಾಯಿತು.
• ಗಾಂಧೀಜಿಯವರು 12 ಮಾರ್ಚ 1930 ರಂದು 78 ಜನರೊಂದಿಗೆ ಸಬರಮತಿ ಆಶ್ರಮದಿಂದ ದಂಡಿ ಯಾತ್ರೆ ಆರಂಬಿಸಿ ದಂಡಿಯನ್ನು 240 ಮೈಲು ಕ್ರಮಿಸಿ ಹಿಡಿ ಉಪ್ಪು ತಯಾರಿಸಿ ಉಪ್ಪಿನ ಕಾನೂನು ಮುರಿದರು. ನಂತರ ಮೂರು ದುಂಡು ಮೇಜಿನ ಸಮ್ಮೇಳನ ನಡೆದವು. 2ನೇ ಸಮ್ಮೇಳನದಲ್ಲಿ ಮಾತ್ರ ಕಾಂಗ್ರೆಸ್ ಪ್ರತಿನಿಧಿಯಾಗಿ ಗಾಂಧೀಜಿಯವರು ಭಾಗವಹಿಸಿದ್ದರು. 1932 ರಲ್ಲಿ ಮಹಾತ್ಮಾಗಾಂಧಿ & ಅಂಬೇಡ್ಕರ ಪೂನಾ ಒಪ್ಪಂದಕ್ಕೆ ಸಹಿ ಹಾಕಿದರು.
• ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಥಮ ಅಧಿವೇಶನ 1920 ರಲ್ಲಿ ಧಾರವಾಡದಲ್ಲಿ ನಡೆಯಿತು. ಗಂಗಾದರ ರಾವ್ ದೇಶಪಾಂಡೆ ಈ ಅಧಿವೇಶನದಲ್ಲಿ ಅಧ್ಯಕ್ಷತೆ ವಹಿಸಿದ್ದರು. ಇವರು ಕರ್ನಾಟಕದ ಕೇಸÀರಿ ಎಂದು ಪ್ರಸಿದ್ದರಾಗಿದ್ದರು.
• 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅÀಧಿವೇಶನದ ಅಧ್ಯಕ್ಷತೆಯನ್ನ ಗಾಂಧಿಜೀಯವರು ವಹಿಸಿದ್ದರು. ಇದು ಗಾಂಧಿಜೀಯವರು ಭಾಗವಹಿಸಿದ ಏಕೈಕ ಕಾಂಗ್ರೆಸ್ ಅದಿವೇಶನವಾಗಿದೆ.
• ನೇತಾಜಿ ಎಂದು ಪ್ರಸಿದ್ದರಾದ ಸುಭಾಷಚಂದ್ರ ಬೋಸ್ ಭಾರತೀಯ ರಾಷ್ಟ್ರೀಯ ಸೇನೆಯನ್ನು ಕಟ್ಟಿದರು.ಜಪಾನಿನ ಸಹಾಯದೊಂದಿಗೆ ಅಂಡಮಾನ & ನಿಕೋಬಾರ ದ್ವೀಪಗಳನ್ನು ವಶಪಡಿಸಿಕೊಂಡು 1943 ರಲ್ಲಿ ತ್ರಿವರ್ಣ ದ್ವಜ ಹಾರಿಸಿದರು. ನಂತರ ಬೋಸರು ವಿಮಾನ ಅಪಘಾತದಲ್ಲಿ ನಿಧನರಾದರು. ಬ್ರಿಟಷರು ಐ ಎನ್ ಎ ಸ್ಯನಿಕರನ್ನು ಸೆರೆ ಹಿಡಿದು ದೇಶ ದ್ರೋಹದ ಆರೋಪ ಹೊರೆಸಿ ವಿಚಾರಣೆಗೆ ಒಳಪಡಿಸಿದರು. ಐ.ಎನ್.ಎ ಟ್ರಯಲ್ ಎಂದು ಪ್ರಸಿದ್ದವಾದ ಪ್ರಥಮ ವಿಚಾರಣೆ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯಿತು.
No comments:
Post a Comment