Tuesday, December 25, 2018

ಪೀಠಿಕೆ

ಪ್ರೀಯ ವಿದ್ಯಾರ್ಥಿಗಳೆ ವಿಜಯ ಕರ್ನಾಟಕ ಪತ್ರಿಕೆ ಆರಂಭಿಸಿದ ವಿದ್ಯಾರ್ಥಿ ಮಾರ್ಗದರ್ಶಿ ಅಂಕಣಕ್ಕೆ ಸ್ವಾಗತ ಕಲಾ ಹಾಗೂ ವಾಣಿಜ್ಯ ವಿದ್ಯಾರ್ಥಿಗಳಿಗೆ ಪರೀಕ್ಷಾ ದೃಷ್ಟಿಕೋನದಲ್ಲಿ ಭಾರತದ ಇತಿಹಾಸವನ್ನು ಕರ್ನಾಟಕದ ವಿಶೇಷ ಉಲ್ಲೇಖದೊಂದಿಗೆ ಸಂಕ್ಷಿಪ್ತವಾಗಿ ಈ ಅಂಕಣದಲ್ಲಿ, ಭಾರತದ ಪೀಠಿಕೆ ಮತ್ತು ಭೌಗೋಳಿಕ ಪ್ರಭಾವ, ಶಿಲಾಯುಗ ಮತ್ತು ಲೋಹ ಯುಗ, ಸಿಂಧೂ ನಾಗರಿಕತೆ, ವೈದಿಕ ಸಂಸಂಸ್ಕೃತಿ, ಹೊಸ ಧರ್ಮಗಳು ಮತ್ತು ಮೌರ್ಯರ ಕುರಿತು ವಿವರಿಸಲಾಗಿದೆ.

1) ಭಾರತದ ಪೀಠಿಕೆ

ವಿಷ್ಣು ಪುರಾಣದ ಪ್ರಕಾರ ಸಮುದ್ರದಿಂದ ಉತ್ತರಕ್ಕೆ ಹಿಮಾಲಯದಿಂದ ದಕ್ಷಿಣಕ್ಕಿರುವ ನಾಡು ಭಾರತ.ಈ ದೇಶಕ್ಕೆ ಭರತವರ್ಷ, ಭರತಖಂಡ, ಭಾರತ, ಜಂಬೂದ್ವೀಪ ಮತ್ತು ಇಂಡೋಸ್ ಎಂಬ ಗ್ರೀಕ್‍ಪದದಿಂದ ಬಂದ ಇಂಡಿಯಾ ಎಂಬ ವಿವಿಧ ಹೆಸರುಗಳಿವೆ. ಭಾರತವು ಹಿಮಾಲಯ ಪರ್ವತ ಉತ್ತರದ ಬಯಲು ಮತ್ತು ಮರುಭೂಮಿಯಿಂದ ಕೂಡಿದೆ. ಖೈಬರ ಮತ್ತು ಬೋಲಾನ ಕಣಿವೆಗಳು ಭಾರತವನ್ನು ಪಶ್ಚಿಮದೊಂದಿಗೆ ಸಂಪರ್ಕಿಸುತ್ತವೆ.

ಭಾರತದಲ್ಲಿ ಹಿಂದೂ, ಜೈನ, ಬೌದ್ದ, ಸಿಖ್ಖ್, ಮುಸ್ಲಿಂ, ಧರ್ಮಗಳಿವೆ. ಸಾಂಚಿ ಅಜಂತ್ ಪಟ್ಟದಕಲ್, ಕೋನಾರ್ಕ, ಖಜರಾಹೊ ತಾಣಗಳು ವಿಶ್ವ ಪರಂಪರೆ ಪಟ್ಟಿಗೆ ಸೇರಿವೆ. ಅದರಂತೆ ನಳಂದಾ ತಕ್ಷಶಿಲಾ ಉಜೈನಿ ಪ್ರಯಾಗ, ವಿಕ್ರಮಶಿಲಾ ಕಾಶಿ ಪ್ರಮುಖ ವಿಶ್ವ ವಿದ್ಯಾಲಯಗಳಾಗಿವೆ

ಶ್ರೀ ವಿಜಯ ಬರೆದ ಕವಿರಾಜಮಾರ್ಗದಲ್ಲಿ ಪ್ರಾಚೀನ ಕರ್ನಾಟಕದ ಮೇರೆಯನ್ನು ಕಾವೇರಿಯಿಂದ ಗೋದಾವರಿವರೆಗೆ ಉಲ್ಲೇಖಿಸಿದೆ. ಕರ್ನಾಟಕವನ್ನು ಕದಂಬ, ಗಂಗ, ಚಾಲುಕ್ಯ, ರಾಷ್ಟ್ರಕೂಟ ಹೊಯ್ಸಳ ರಾಜಮನೆತನಗಳು ಆಳಿವೆ

ಕರ್ನಾಟಕವು ಕಡಲ ತೀರ, ಪಶ್ಚಿಮ ಘಟ್ಟ, ಮಲೆನಾಡು, ಉತ್ತರ ಹಾಗೂ ದಕ್ಷಿಣ ಬಯಲು ಎಂಬ ಭೌಗೋಳಿಕ ಲಕ್ಷಣಗಳನ್ನು ಹೊಂದಿದೆ.

ಇತಿಹಾಸಕಾರರು ಲಭ್ಯ ಮೂಲಾಧಾರಗಳ ಸಹಾಯದಿಂದ ಗತವನ್ನು ಪುನ
ರಚಿಸುವ ಪ್ರಯತ್ನ ಮಾಡುವದರಿಂದ ಮೂಲಾಧಾರಗಳಿಲ್ಲದೆ ಇತಿಹಾಸವಿಲ್ಲ. ಲಿಖಿತ ಮೂಲಾಧಾರಗಳು ಲಭ್ಯವಿಲ್ಲದ ಕಾಲವನ್ನು ಇತಿಹಾಸ ಪೂರ್ವ ಕಾಲವೆಂದು ಮತ್ತು ಮೂಲಾಧಾರಗಳು ಲಭ್ಯವಿರುವ ಕಾಲವನ್ನು ಇತಿಹಾಸ ಕಾಲವೆಂದು ಕರೆಯಲಾಗುತ್ತದೆ.

ಪ್ರಾಚೀನ ಮಾನವರ ಜೀವನ ಮತ್ತು ಚಟುವಟಿಕೆಗಳ ಅವಶೇಷಗಳೆ ಪ್ರಾಕ್ತನ ಮೂಲಾಧಾರಗಳು. ನಾಣ್ಯಗಳ ಅಧ್ಯಯನವು ನಾಣ್ಯಶಾಸ್ತ್ರವಾಗಿದೆ. ಇವು ಕಾಲ, ರಾಜ ವಂಶ ಧರ್ಮ, ಲಿಪಿ, ಭಾಷೆಗಳನ್ನು ತಿಳಿಸುತ್ತವೆ. ಶಾಸನಗಳು ಇತಿಹಾಸ ರಚನೆಯಲ್ಲಿ ನಂಬಲರ್ಹ ನೇರ ಆಧಾರಗಳಾಗಿವೆ ಅವು ಸಮಕಾಲೀನವಾಗಿದ್ದು ಘಟನೆಗಳಿಗೆ ನೇರ ಸಂಬಂಧ ಹೊಂದಿವೆ.

ದೇಶಿ ಮತ್ತು ವಿದೇಶಿ ಸಾಹಿತ್ಯಗಳು ಸಾಹಿತ್ಯಾಧಾರದ ಎರಡು ಪ್ರ್ರಕಾರಗಳಾಗಿದ್ದು ಅಶ್ವಘೋಷನ ಬುದ್ದ ಚರಿತೆ ಮತು ಪ್ಲೀನಿಯ ನ್ಯಾಚುರಲ್ ಹಿಸ್ಟ್ರಿಯಾ ಪ್ರಮುಖವಾಗಿವೆ.

ಭಾರತ ಇತಿಹಾಸದ ಮೇಲೆ ಭೂಗೋಳದ ಪ್ರಭಾವ.

ಭಾರತವು ಹಿಮಾಲಯ ಪರ್ವತ,ಉತ್ತರದ ಬಯಲು ಮತ್ತು ಮರುಭೂಮಿ,ಕರಾವಳಿ ತೀರಪ್ರದೆಶಗಳು, ಪರ್ವತ(ವಿಂದ್ಯ, ಅರಾವಳಿ, ಸಹ್ಯಾದ್ರಿ)ಗಳಿಂದ ಕೂಡಿದೆ.

ಹಿಮಾಲಯ ಪರ್ವತಗಳು ಭಾರತವನ್ನು ಇನ್ನುಳಿದ ಭಾಗಗಳಿಂದ ಪ್ರತ್ಯೇಕಿಸಿವೆ. ಮತ್ತು ನೈಸರ್ಗಿಕ ತಡೆಗೋಡೆ ನಿರ್ಮಿಸಿ ಆಕ್ರಮಣಕಾರರಿಂದ, ಶೀತ ಮಾರುತಗಳಿಂದ ರಕ್ಷಿಸಿವೆ. ಇವು ಸದಾ ಕಾಲ ಹರಿಯುವ ನದಿಗಳಿಗೆ ಜನ್ಮ ನೀಡಿವೆ. ಈ ನದಿಗಳು ಫಲವತ್ತಾದ ಬಯಲು ನಿರ್ಮಿಸಿವೆ. ಈ ಬಯಲುಗಳು ನಾಗರಿಕತೆ ಮತ್ತು ಸಾಮ್ರಾಜ್ಯದ ತೊಟ್ಟಿಲುಗಳಾಗಿವೆ.

ಖೈಬರ್ ಮತ್ತು ಬೋಲಾನ್ ಕಣಿವೆಗಳು ಭಾರತೀಯರಿಗೆ ಪಾಶ್ಚಿಮಾತ್ಯರೊಂದಿಗೆ ಸಂಬಂಧಬೆಳೆಸಲು ಮತ್ತು ಭಾರತವನ್ನು ಪಾಶ್ಚಿಮಾತ್ಯರ ನಿರಂತರ ದಾಳಿಗಳಿಗೊಡ್ಡಿದವು.

ಮರುಭೂಮಿಗಳು ದಕ್ಷಿಣದ ಪ್ರಸ್ಥಭೂಮಿಯ ದಟ್ಟ ಕಾಡುಗಳು ಜನರನ್ನು ಕಠಿಣ ಪರಿಶ್ರಮಿಗಳು, ಯುದ್ದ ಪ್ರೀಯರನ್ನಾಗಿ ಮಾಡಿದವು.

ಉಪಖಂಡದಲ್ಲಿರುವ ಭೌಗೋಳಿಕ ಭಿನ್ನತೆ ವಿವಿಧ ವಲಯಗಳ ದ್ರಾವಿಡ, ಅಲ್ಫಾಯಿನ್,ಮಂಗೋಲಾಯಿಡ್ ಮುಂತಾದ ಕುಲಗಳು,ವಿವಿಧÀ ಜನಾಂಗಗಳು ಅಸ್ತಿತ್ವದಲ್ಲಿರುವದರಿಂದ ವಿವಿಧ ಭಾಷೆ ಮತ್ತು ಸಂಸ್ಕøತಿಗಳ ಬೆಳವಣಿಗೆಗೆ ಕಾರಣವಾಯಿತು.

ಉತ್ತರ ಮತ್ತು ದಕ್ಷಿಣದ ನದಿ ಬಯಲುಗಳು ಅತೀ ಪುರಾತನ ಕಾಲದಿಂದ ಕೃಷಿ ಪ್ರಧಾನ ದೇಶವನ್ನಾಗಿ ಮಾಡಿವೆ. ಇಲ್ಲಿ ಅನೇಕ ವಿಧಧ ಖನಿಜಗಳು, ಬಂಡೆಗಳು ವಿಫಲವಾಗಿ ಲಭ್ಯವಿವೆ. ಅವುಗಳಿಂದ ಅರಮನೆ, ದುರ್ಗಗಳು, ಕೋಟೆ ಮುಂತಾದ ವಾಸ್ತುಶಿಲ್ಪಗಳ ಬೆಳವಣಿಗೆಗೆ ಕಾರಣವಾಗಿವೆ.

ದಕ್ಷಿಣಕ್ಕಿರುವ ಸಮುದ್ರಗಳು ಒಂದು ಕಾಲದಲ್ಲಿ ತಡೆಬೇಲಿಗಳಾಗಿದ್ದವು ನಂತರದಲ್ಲಿ ಅವು ಜಗತ್ತಿನ ಇತರ ಭಾಗಗಳೊಂದಿಗೆ ಸಂಪರ್ಕ ಬೆಳೆಸುವ ಸಾಧನಗಳಾದವು.

ವಿಫುಲ ಮಳೆ ಮತ್ತು ಅನುಕೂಲಕರ ಹವಾಮಾನವು ಸಂಪತ್ಭರಿತ ಮತ್ತು ವೈವಿಧ್ಯಪೂರ್ಣ ಸಸ್ಯ ಹಾಗೂ ಪ್ರಾಣಿ ವರ್ಗದ ಬೆಳವಣಿಗೆಗೆ ಕಾರಣವಾಗಿದೆ.


2) ಶಿಲಾಯುಗ ಮತ್ತು ಲೋಹಗಳ ಯುಗ :

ಹಳೆಯ ಶಿಲಾಯುಗವು ಪ್ಯಾಲಿಯೋ (ಹಳೆಯ) ಮತ್ತು ಲಿಥಿಕ್ (ಶಿಲೆ) ಎಂಬ ಗ್ರೀಕ ಪದದಿಂದ ಬಂದಿದ್ದು ಈ ಕಾಲದ ಮಾನವ ಕ್ವಾರ್ಟಝೈಟ್ ಕಲ್ಲನ್ನು ಬಳಸುತ್ತಿದ್ದನು ಈ ಕಾಲದ ಪ್ರಮಖ ತಾಣಗಳು ಸೋಹನ್, ನರ್ಮದಾ, ತುಂಗಭದ್ರ ಘಟಪ್ರಭ ಕಣಿವೆಗಳು, ಭೂಪಾಲ, ತಿರನೆಲ್‍ವೇಲಿ, ಲಿಂಗಸಗೂರ. ಹಾಗೂ ಮಧ್ಯ ಶಿಲಾಯುಗದ ಪ್ರಮುಖ ತಾಣಗಳೆಂದರೆ ಅಜ್ಮೀರ, ಸಬರಮತಿ ಅಹಮದನಗರ, ಸಂಗನಕಲ್ಲು ಮತ್ತು ಬ್ರಹ್ಮಗಿರಿ.

ಹೊಸ ಶಿಲಾಯುಗವು ನಿಯೋ ಮತ್ತು ಲಿಥಿಕ್ ಎಂಬ ಪದಗಳಿಂದ ಬಂದಿದೆ ಈ ಕಾಲದ ಪ್ರಮುಖ ತಾಣಗಳೆಂದರೆ ಮಸ್ಕಿ, ದೋ-ಅಬ್, ತಿರುನೆಲ್ವೇಲಿ, ಕರ್ನೂಲ, ಕಾಥೇವಾರ ಮತ್ತು ಸಿಂದ್ ಅದರಂತೆ ಉತ್ತರ ಭಾರತದಲ್ಲಿ ಮಾನವನು ತಾಮ್ರವನ್ನು ದಕ್ಷಿಣ ಭಾರತದಲ್ಲಿ ಕಬ್ಬಿಣ ಲೋಹವನ್ನು ಮೊಟ್ಟಮೊದಲು ಬಳಸಿದನು.

                         


 3)ಸಿಂಧೂ ನಾಗರಿಕತೆ

1861 ರಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಪ್ರಾರಂಭವಾಯಿತು. 1921 ರಲ್ಲಿ ಡಾ|| ಆರ್. ಬಿ ದಯಾರಾಮ್ ಸಹಾನಿಯವರು ಹರಪ್ಪಾ ನಿವೇಶನ ಕಂಡು ಹಿಡಿದರು. 1922 ರಲ್ಲಿ ಡಾ|| ಆರ್. ಬಿ. ಬ್ಯಾನರ್ಜಿ ಸಿಂಧ್ ಪ್ರಾಂತದ ಲಾಢಖಾನ್ ಜಿಲ್ಲೆಯಲ್ಲಿ ಉತ್ಖನನ ಮಾಡಿ ಮೆಹೆಂಜೋದಾರೋ ಕಂಡು ಹಿಡಿದರು. ಮೆಹೆಂಜೋದಾರೋ ಎಂದರೆ ಸಿಂಧಿ ಭಾಷೆಯಲ್ಲಿ ಮಡಿದವರ ದಿಬ್ಬವಾಗಿದೆ, ಸ್ನಾನದ ಕೊಳ ಮೆಹೆಂಜೋದಾರೋವಿನ ಅಧ್ಬುತ ಲಕ್ಷಣವಾಗಿದೆ. ಹಾಗೆಯೇ ಲೋಥಲ್‍ನಲ್ಲಿ ಹಡಗು ಕಟ್ಟೆ ಪತ್ತೆಯಾಗಿದೆ.



ಸಿಂಧೂ ನಗರ ಯೋಜನೆ – ಇದು ಸಿಂಧೂ ನಾಗರೀಕತೆಯ ವಿಶಿಷ್ಟ ಲಕ್ಷಣ. ಇಲ್ಲಿನ ಜನ ಉಚ್ಛ ಅಭಿವೃದ್ಧಿ ಹೊಂದಿದ ಜೀವನ ನಡೆಸುತ್ತಿದ್ದ ಯೋಜನಾ ಬದ್ಧ ನಗರ ನಿರ್ಮಾಣ, ಬೀದಿಗಳು ಒಳಚರಂಡಿ ವ್ಯವಸ್ಥೆ, ಸ್ನಾನದ ಕೊಳ ಉಗ್ರಾಣ ಕಟ್ಟಡಗಳ ವಿಶೇಷತೆಯನ್ನು ಹೊಂದಿದ್ದು ಕಾಣುತ್ತೇವೆ.

ಬೀದಿಗಳು ನೇರವಾಗಿದ್ದು ಒಂದನ್ನೊಂದು ಲಂಬವಾಗಿ ವಿಭಜಿಸಿವೆ. ಅವು 13-34 ಅಡಿ ಅಗಲವಾಗಿ ರಚನೆಗೊಂಡಿದ್ದು ನಿರ್ದಿಷ್ಟ ಅಂತರದಲ್ಲಿ ದೀಪದ ಕಂಬ, ರಸ್ತೆ ಬದಿಗೆ ಕಸದ ತೊಟ್ಟಿಗಳು ಇದ್ದವು.

ಒಳಚರಂಡಿ ವ್ಯವಸ್ಥೆಯು ಅಸಾಧಾರಣವಾಗಿದ್ದು, ಇಟ್ಟಿಗೆಯಿಂದ ರಚನೆಗೊಂಡು ತನ್ನದೇ ಆದ ಒಳಚರಂಡಿ, ಇಂಗುಗುಂಡಿ, ಮುಚ್ಚಿದ ಭಾಗಗಳಾಗಿ ಸಾರ್ವಜನಿಕ ಚರಂಡಿಗೆ ಸಂಪರ್ಕ ಹೊಂದಿತ್ತು. ಅಲ್ಲಲ್ಲಿ ಸ್ವಚ್ಛಗೊಳಿಸುವ ವ್ಯವಸ್ಥೆ ರೂಪಿಸಲಾಗಿತ್ತು.

ಸ್ನಾನದ ಕೊಳ - ಸ್ನಾನದ ಕೊಳ ಮೆಹೆಂಜೊದಾರೋವಿನ ಅದ್ಭುತ ಲಕ್ಷಣಗಳಲ್ಲಿ ಒಂದು ಚೌಕಾಕಾರದ ಪ್ರಾಂಗಣ ಮಧ್ಯಭಾಗದಲ್ಲಿ ಈಜುಕೊಳ. ನಾಲ್ಕು ಮೊಗಸಾಲೆ, ಬಿಸಿ ನೀರಿನ ವ್ಯವಸ್ಥೆಯ ಕೋಣೆಗಳು ಇದ್ದು ಅಲ್ಲಿಗೆ ಪಕ್ಕದ ಭಾವಿಯಿಂದ ನೀರಿನ ಪೂರೈಕೆಯಾಗುತ್ತಿತ್ತು.

ಉಗ್ರಾಣಗಳನ್ನು ಧಾನ್ಯಗಳನ್ನು ಸುರಕ್ಷಿತವಾಗಿಡಲು ಬಳಸುತ್ತಿದ್ದು ಇಟ್ಟಿಗೆಗಳಿಂದ ಇವುಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು. ಹರಪ್ಪ ಕಾಲಿಬಂಗನ್‍ಗಳಲ್ಲಿ ಉಗ್ರಾಣಗಳು ಕಂಡುಬಂದಿವೆ.

ಕಟ್ಟಡಗಳು – ಮನೆಗಳು ರಸ್ತೆ ಬದಿಗಳಲ್ಲಿ ಕಂಡುಬಂದಿವೆ. 2-3 ಕೋಣೆ ಮಹಡಿ ಒಳಾಂಗಣ, ಅಡಿಗೆ ಕೋಣೆ ನಿರ್ಮಾಣಗೊಂಡಿದ್ದು ನೀರು ಪೂರೈಕೆಗೆ ಪ್ರತಿ ಮನೆಯಲ್ಲೂ ಭಾವಿಗಳನ್ನು ನಿರ್ಮಾಣ ಮಾಡಲಾಗಿತ್ತು.



ಸಿಂಧೂ ಸಮಾಜದಲ್ಲಿ ವೃತ್ತಿ ಆಧಾರಿತ  4 ವರ್ಗಗಳಿದ್ದವು ಅವು ಪಂಡಿತ ವರ್ಗ ಯೋಧರು, ವ್ಯಾಪಾರಿಗಳು ಶ್ರಮಿಕ ವರ್ಗ.

ಸಿಂಧೂ ಜನರ ಪ್ರಮುಖ ಕಸುಬು ಕೃಷಿಯಾಗಿತ್ತು ಮತ್ತು ಅವರಿಗೆ ತೂಕ ಅಳತೆಗಳ ಮಾಹಿತಿ ಇತ್ತು.

ಸಿಂಧೂ ಜನರು ದಂತ, ಚಿನ್ನ, ಮುತ್ತು, ಮರದ ದಿಮ್ಮೆಗಳನ್ನು ರಫ್ತು ಮಾಡುತ್ತಿದ್ದರು. ಅಲ್ಲದೆ ಅಮೂಲ್ಯ ಹರಳುಗಳು ತಾಮ್ರ ತವರ ಆಮದು ಮಾಡಿಕೊಳ್ಳುತ್ತಿದ್ದರು.

ಮುದ್ರೆಗಳು ಜೇಡಿನ ಮಣ್ಣಿನ ಪ್ರತಿಮೆಗಳು ಸಿಂಧೂ ಜನರ ಧಾರ್ಮಿಕ ಸ್ಥಿತಿ ವಿವರಿಸುತ್ತವೆ. “ಮಾತೃ ದೇವತೆ”  ಪ್ರಧಾನ ದೇವತೆಯಾಗಿತ್ತು.

ಸಿಂಧೂ ನಾಗರೀಕತೆ ಅವನತಿಗೆ ಹಲವಾರು ಕಾರಣಗಳನ್ನು ಇತಿಹಾಸಕಾರರು ನೀಡಿದ್ದಾರೆ. ನದಿಗಳು ತಮ್ಮ ಹರಿವಿನ ಪಥವನ್ನು ಬದಲಾಯಿಸಿದ್ದರಿಂದ ನಗರಗಳು ಹಾಳಾಗಿದ್ದರಬಹುದು. ಅಥವಾ ಸಾಂಕ್ರಾಮಿಕ ರೋಗಗಳ ಹರಡುವಿಕೆಯು ಜನ ಸಂಖ್ಯೆಯನ್ನು ತೊಡೆದುಹಾಕಿರಬಹುದು. ಇಲ್ಲವೇ ಸತತ ಪ್ರವಾಹ ಮಣ್ಣಿನ ಸವೆತ ಜನಜೀವನ ವಿನಾಶಕ್ಕೆ ಕಾರಣವಾಗಿರಬಹುದೆಂದು ತರ್ಕಿಸಲಾಗಿದೆ.

4) ವೈದಿಕ ಸಂಸ್ಕøತಿ

ವಿಭಿನ್ನ ಸಂಸ್ಕøತಿಯನ್ನು ಹೊಂದಿದ ಆರ್ಯರು ಭಾರತದ ಉಪಖಂಡಕ್ಕೆ ಸಾ.ಶ.ಪೂ. 2000 ರಲ್ಲಿ ಆಗಮಿಸಿದರು. ಆರ್ಯ ಎಂದರೆ ಕುಲೀನ, ಒಡೆಯ ಅಥವಾ ಕೃಷಿ ಅವಲಂಬಿತ ಎಂದರ್ಥ. ವೈದಿಕ ಸಂಸ್ಕøತಿಯನ್ನು ಅರಿಯಲು ವೇದಗಳು ಮೂಲಾಧಾರಗಳಾಗಿದ್ದು, ವೇದ ಎಂಬ ಶಬ್ದವನ್ನು ಸಂಸ್ಕøತದ ‘ವಿದ್’ ನಿಂದ ಪಡೆಯಲಾಗಿದೆ. ವಿದ್ ಎಂದರೆ ಜ್ಞಾನ ಎಂದರ್ಥ. ಆರ್ಯರು ಋಗ್ವೇದ ಯಜುರ್ವೇದ, ಸಾಮವೇದ, ಅಥವರ್ಣವೇದ ಎಂಬ 4 ವೇದಗಳನ್ನು ರಚಿಸಿದ್ದು ಇದರಲ್ಲಿ ಋಗ್ವೇದವು ಪ್ರಥಮ ವೇದವಾಗಿದೆ.

ಆರ್ಯರು ಬುಡಕಟ್ಟುಗಳ ರಾಜಕೀಯ ವ್ಯವಸ್ಥೆ ಹೊಂದಿದ್ದು ಇದರಲ್ಲಿ ರಾಜನ್ ಮುಖ್ಯಸ್ಥನಾಗಿದ್ದ. ರಾಜನಿಗೆ ಸಭಾ ಮತ್ತು ಸಮಿತಿಗಳು ಸಹಾಯ ಮಾಡುತ್ತಿದ್ದವು. ಆರ್ಯ ಸಮಾಜದ ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಪಿತೃ ಪ್ರಧಾನ ವ್ಯವಸ್ಥೆ ಇತ್ತು. ಇದರ ಮುಖ್ಯಸ್ಥನನ್ನು ಕುಲಪತಿ/ಗೃಹಪತಿ ಎಂದು ಕರೆಯಲಾಗುತ್ತಿತ್ತು. ಮಹಿಳೆಯರಿಗೆ ಈ ಅವಧಿಯಲ್ಲಿ ಉನ್ನತ ಸ್ಥಾನವನ್ನು ನೀಡಲಾಗುತ್ತಿತ್ತು. ವಿಶ್ವವರ, ಘೋಷಾ, ಅಪಾಲ, ಗಾರ್ಗಿ, ಮೈತ್ರೇಯಿ ಮಹಿಳಾ ವಿದ್ವಾಂಸರಾಗಿದ್ದರು. ಸಮಾಜದಲ್ಲಿ ಬ್ರಾಹ್ಮಣ ಕ್ಷತ್ರೀಯ, ವೈಶ್ಯ, ಹಾಗೂ ಶೂಧ್ರರೆÉಂಬ ವರ್ಗಗಗಳು ಅಸ್ಥಿತ್ವದಲ್ಲಿದ್ದವು. ವ್ಯಕ್ತಿ ಜೀವನವನ್ನು ಬ್ರಹ್ಮಚರ್ಯ, ಗ್ರಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಎಂಬ 4 ಆಶ್ರಮಗಳಲ್ಲಿ ವಿಂಗಡಿಸಲಾಗಿತ್ತು. ಜೂಜಾಡುವುದು ರಥ ಓಡಿಸುವ ಸ್ಪರ್ದೆ, ಕುದುರೆ ಓಡಿಸುವ ಸ್ಫರ್ದೆ ಸಂಗೀತ ನೃತ್ಯ ಮನೆರಂಜನೆಗಳಾಗಿದ್ದವು.

ಆರ್ಯರು ಹಳ್ಳಿಗಳಲ್ಲಿ ವಾಸಿಸುತ್ತಿದ್ದು  ಪ್ರಮುಖ ಕಸುಬು ಕೃಷಿಯಾಗಿತ್ತು. ತಮ್ಮ ಉಳಿಮೆ ಭೂಮಿಯನ್ನು ಕ್ಷೇತ್ರ ಎಂದು ಕರೆಯುತ್ತಿದ್ದರು. ಜಾನುವಾರುಗಳನ್ನು ಸಂಪತ್ತು ಎಂದು ಪರಿಗಣಿಸಲಾಗಿತ್ತು. ಈ ಅವಧಿಯನ್ನು ಮಗುವನ್ನು ಶಾಲೆಗೆ ಕಳುಹಿಸಲು ಉಪನಯನ ಸಮಾರಂಭವನ್ನು ಏರ್ಪಡಿಸುತ್ತಿದ್ದರು.

5) ಹೊಸಧರ್ಮಗಳ ಉದಯ –

ಭಾರತೀಯ ಸಮಾಜದಲ್ಲಿನ ಸಾಮಾಜಿಕ ಹಾಗೂ ಧಾರ್ಮಿಕ ಶೋಷಣೆಯ ವಿರುದ್ಧವಾಗಿ ಸಾ.ಶ.ಪೂ. 6 ನೇ ಶತಮಾನದಲ್ಲಿ ಜೈನ ಮತ್ತು ಭೌದ್ಧ ಎಂಬ ಹೊಸ ಧರ್ಮಗಳು ಉದಯಿಸದವು.

ಜೈನ ಧರ್ಮ ವೃಷಭನಾಥ ಸ್ಥಾಪಿಸಿದ್ದು ಈ ಧರ್ಮದಲ್ಲಿ 24 ತೀರ್ಥಂಕರರಿದ್ದಾರೆ. 23 ನೇ ತೀರ್ಥಂಕರ ಪಾಶ್ರ್ವನಾಥ ಹಾಗೂ 24 ನೇ ತೀರ್ಥಂಕರ ಮಹಾವೀರರಾಗಿದ್ದಾರೆ. ಇವನ ಮೂಲ ಹೆಸರು ವರ್ಧಮಾನ ಈತನು ಕುಂದ ಗ್ರಾಮದಲ್ಲಿ ಸಾ.ಶ.ಪೂ. 599 ರಲ್ಲಿ ರಾಜ ಸಿದ್ಧಾರ್ಥ ಮತ್ತು ರಾಣಿ ತ್ರಿಷಲಾದೇವಿ ದಂಪತಿಗಳ ಪುತ್ರನಾಗಿ ಜನಿಸಿದನು. ಇವನು ಪ್ರಾಪಂಚಿಕ ಸುಖ ಭೋಗಗಳನ್ನು ತ್ಯಜಿಸಿ ಸನ್ಯಾಸಿಯಾಗಿ ಬಿಹಾರದ ಜೃಂಬಕಾ ಗ್ರಾಮದಲ್ಲಿ ಜ್ಞಾನೋದಯವನ್ನು ಪಡೆದನು. ಈತನು ಸಮ್ಯಕ್ ಜ್ಞಾನ ಸಮ್ಯಕ್ ನಂಬಿಕೆ ಸಮ್ಯಕ್ ನಡತೆ ಎಂಬ ತ್ರಿರತ್ನಗಳನ್ನು ಬೋಧಿಸಿದ. ಮಹಾವೀರನ ಮರಣದ ನಂತರ ಎರಡು ಜೈನ ಸಭೆಗಳನ್ನು ಪಾಟಲೀಪುತ್ರ ಮತ್ತು ವಲ್ಲಬಿಯಲ್ಲಿ ನಡೆಸಲಾಯಿತು. ಜೈನ ಧರ್ಮದ ಅನುಯಾಯಿಗಳಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಜೈನ ಧರ್ಮ ಶ್ವೇತಾಂಬರ ಮತ್ತು ದಿಗಂಬರ ಎಂದು ಇಬ್ಬಾಗವಾಯಿತು. ಮಹಾವೀರನು ತನ್ನ 72 ನೇ ವಯಸ್ಸಿನಲ್ಲಿ ಬಿಹಾರದ ರಾಜಗೃಹದ ಸಮೀಪ ಪಾವಾ ಎಂಬಲ್ಲಿ ಸಾ.ಶ.ಪೂ. 527 ರಲ್ಲಿ ನಿರ್ವಾಣ ಹೊಂದಿದನು.

ಬೌದ್ಧ ಧರ್ಮವನ್ನು ಗೌತಮ ಬುದ್ದನು ಸ್ಥಾಪಿಸಿದನು. ಈತನು ಸಾ.ಶ.ಪೂ. 563 ರಲ್ಲಿ ರಾಜ ಶುದ್ಧೋದನ ಮತ್ತು ತಾಯಿ ಮಾಯಾದೇವಿ ದಂಪತಿಗಳ ಪುತ್ರನಾಗಿ ಲುಂಬಿನಿಯಲ್ಲಿ ಜನಿಸಿದನು. ಈತನ ಮೊದಲ ಹೆಸರು ಸಿದ್ಧಾರ್ಥನಾಗಿದ್ದು, ನಂತರ ಬುದ್ದನಾದ. ಬುದ್ದನೆಂದರೆ ಜ್ಞಾನ ಪಡೆದವನು ಇವನು ತನ್ನ 35 ನೇ ವಯಸ್ಸಿನಲ್ಲಿ ಗಯಾದ ಆಲದ ಮರದ ಕೆಳಗೆ ಜ್ಞಾನೋದಯವನ್ನು ಪಡೆದನು ಮತ್ತು ತನ್ನ ಮೊದಲ ಪ್ರವಚಣವನ್ನು ಸಾರನಾಥದ ಜಿಂಕೆ ವನದಲ್ಲಿ ನೀಡಿದನು.

ಬುದ್ದನು 4 ಆರ್ಯಸತ್ಯಗಳನ್ನು ಬೋಧಿಸಿದ ಅವುಗಳೆಂದರೆ –

1. ಪ್ರಾಪಂಚಿಕ ಜೀವನ ದುಖಃಮಯವಾಗಿದೆ.  2.ಆಸೆಯೇ ದುಖ್ಖಕ್ಕೆ ಮೂಲ

3. ಆಸೆಯ ನಿಗ್ರಹದಿಂದ ಪುನರ್ ಜನ್ಮದಿಂದ ಮುಕ್ತಿ.   4.ಆಸೆಯ ಕೊಣೆಗಾನಿಸಲು ಆಷ್ಟಾಂಗ ಮಾರ್ಗದ ಅನುಸರಣೆ.

ಬುದ್ದನ ಬೋಧನೆಗಳನ್ನು ವಿನಯ ಪಿಟಕ, ಸುತ್ತ ಪಿಟಕ ಅಭಿದಮ್ಮ ಪಿಟಕ ಎಂಬ 3 ಪಿಟಕಗಳಲ್ಲಿ ಸಂಗ್ರಹಿಸಲಾಗಿದೆ. ಬುದ್ದನು ತನ್ನ 80 ನೇ ವಯಸ್ಸಿನಲ್ಲಿ ಉತ್ತರ ಪ್ರದೇಶದ ಕುಶಿನಗರದಲ್ಲಿ ಪರಿನಿರ್ವಾಣ ಹೊಂದಿದನು. ಈತನ ಮರಣದ ನಂತರ ಬೌಧ್ಧ ಭಿಕ್ಷುಗಳ ಭಿನ್ನಾಭಿಪ್ರಾಯದಿಂದಾಗಿ ಬೌಧ್ಧ ಧರ್ಮ ಹೀನಾಯಾನ ಮತ್ತು ಮಹಾಯಾನ ಎಂದು ಇಬ್ಭಾಗವಾಯಿತು. ಈ ಧರ್ಮವು ಭಾರತದಾದ್ಯಂತ ಪಸರಿಸಿತÀಲ್ಲದೇ ಭಾರತದ ಮಹಾನ್ ಸಾಮ್ರಾಟರಾದ ಅಶೋಕ, ಕಾನಿಷ್ಕ ಮತ್ತು ಹರ್ಷವರ್ಧನನಿಂದ ರಾಜಾಶ್ರಯವನ್ನು ಪಡೆಯಿತು.

6) ಮೌರ್ಯ ಸಾಮ್ರಾಜ್ಯ –

ಮೌರ್ಯ ಸಾಮ್ರಾಜ್ಯ ಚಂದ್ರಗುಪ್ತ ಮೌರ್ಯನಿಂದ ಸ್ಥಾಪಿತವಾಯಿತು. ಪಾಟಲೀಪುತ್ರ ಇವರ ರಾಜಧಾನಿ.  ಇವರ ಲಾಂಛನ ಧರ್ಮಚಕ್ರ. ಇವರ ಇತಿಹಾಸವನ್ನು ತಿಳಿಯಲು ಅರ್ಥಶಾಸ್ತ್ರ, ಇಂಡಿಕಾ ಮುದ್ರಾರಾಕ್ಷಸ, ಅಶೋಕನ ಶಾಸನಗಳು, ಸ್ಮಾರಕಗಳು, ದೀಪವಂಶಿ ಮತ್ತು ಮಹಾವಂಶಿ ಪ್ರಮುಖ ಆಧಾರಗಳು. ಕೌಟಿಲ್ಯ ಮೌರ್ಯ ಸಾಮ್ರಾಜ್ಯ ಸ್ಥಾಪಿಸುವಲ್ಲಿ ಚಂದ್ರಗುಪ್ತನಿಗೆ ನೆರವಾದನು. ಧನನಂದನು ಚಂದ್ರಗುಪ್ತನಿಂದ ಸೋಲಿಸಲ್ಪಟ್ಟ ದೊರೆ. ಸೆಲ್ಯುಕಸ್ ಮೇಗಾಸ್ತನೀಸನನ್ನು ಚಂದ್ರಗುಪ್ತನ ಆಸ್ಥಾನಕ್ಕೆ ರಾಯಭಾರಿಯಾಗಿ ಕಳುಹಿಸಿದನು. ಈತ ಚಂದ್ರಗುಪ್ತನಿಂದ ಸೋಲಿಸಲ್ಪಟ್ಟಿದ್ದ. ಚಂದ್ರಗುಪ್ತ ಜೈನ ಧರ್ಮ ಅನುಸರಿಸಿದ ಮೊದಲ ಮೌರ್ಯ ಅರಸು. ಈತ ತನ್ನ ಕೊನೆಯ ದಿನಗಳನ್ನು ಶ್ರವಣ ಬೆಳಗೊಳದಲ್ಲಿ ಕಳೆದ. ಮೌರ್ಯ ಸಂತತಿಯ ಶ್ರೇಷ್ಟ ದೊರೆ ಅಶೋಕ, ಈತನ ಶಾಸನಗಳು ಮಸ್ಕಿ, ಗವಿಮಠ, ಬ್ರಹ್ಮಗಿರಿ, ನಿಟ್ಟೂರು, ಸನ್ನತ ಗಳಲ್ಲಿ ಕಂಡು ಬರುತ್ತಿದ್ದು 13 ನೇ ಬಂಡೆಗಲ್ಲು ಶಾಸನ ಅಶೋಕನ ಕಳಿಂಗ ಯುದ್ದದ ವಿವರಣೆ ನೀಡಿದೆ. ಈತನ ಮಸ್ಕಿ ಶಾಸನ ಅಶೋಕನನ್ನು “ದೇವನಾಂಪ್ರೀಯ ಪ್ರೀಯದರ್ಶಿ ರಾಜ” ಎಂದು ಉಲ್ಲೇಖಿಸಿದೆ. 3 ನೇ ಭೌಧ್ಧ ಮಹಾಸಮ್ಮೇಳನ ಪಾಟಲೀಪುತ್ರದಲ್ಲಿ ನಡೆಯಿತು. ಅಶೋಕನಿಂದ ಸಾಂಚಿ ಸ್ತೂಪ ನಿರ್ಮಾಣವಾಯಿತು. ಸಾರನಾಥ ಸ್ಥಂಬದ ಶಿರೋಭಾಗದ ಧರ್ಮ ಚಕ್ರವು ಭಾರತದ ರಾಷ್ಟ್ರಲಾಂಛನವಾಗಿದೆ.

ಮೌರ್ಯರ ಅವಧಿಯಲ್ಲಿ ಧರ್ಮಸ್ಥೆಯ, ಕಂಟಕಶೋಧನ ಎಂಬ 2 ಬಗೆಯ ನ್ಯಾಯಾಲಯಗಳಿದ್ದವು. ಅಶೋಕನು ಧರ್ಮಮಹಮಾತ್ರರನ್ನು ನೇಮಿಸಿದನು. ಅವರ ಕರ್ತವ್ಯ ಧರ್ಮ ಪ್ರಚಾರ ಮಾಡುವುದಾಗಿತ್ತು.

ದಕ್ಷಿಣ ಭಾರತಕ್ಕೆ ಸಂಬಂಧಿಸಿದ ಹಾಗೆ ಸಿಮುಖ ಶಾತವಾಹನ ಸಂತತಿಯ ಸ್ಥಾಪಕ. ಪ್ರತಿಷ್ಠಾನ/ಫೈಠನ್ ಶಾತವಾಹನರ ರಾಜಧಾನಿಯಾಗಿತ್ತು. ಹಾಲ, ಗೌತಮೀಪುತ್ರ ಶಾತಕರ್ಣಿ ವಸಿಷ್ಠಪುತ್ರ ಪುಳಮಾಯಿ, ಯಜ್ಞಶ್ರೀ ಪ್ರಮುಖ ಅರಸರು. ಹಾಲನಿಂದ ಗಾಥಾಸಪ್ತಸತಿ ಗೃಂಥ ರಚನೆಯಾಯಿತು. ಹಾಗೆಯೇ ಗೌತಮೀ ಬಾಲಶ್ರೀಯಿಂದ ನಾಶಿಕ್ ಗುಹಾ ಶಾಸನ ರಚಿಸಲ್ಪಟ್ಟಿತು. ಅಮರವಾತಿ, ಕಾರ್ಲೆ, ನಾಸಿಕ್, ಕನ್ಹೇರಿಗಳು ಶಾತವಾಹನರ ಪ್ರಮುಖ ವಾಸ್ತುಶಿಲ್ಪದ ಕೇಂದ್ರಗಳು.

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...