Sunday, October 13, 2019

ಪ್ರವಾಹ

ಆಗಸದ ಚಪ್ಪರಕೆ ಚೂರಿ ಗೀರಿ
ಬೊಗಸೆ ನೀರು ಕಾಣದ ನೆಲವೆರಿ
ಬಂತಲ್ಲ ಈ  ಮಹಾ ಮಾರಿ
ಕನಸು ಕಾಣುವ ಕರ್ಮಯೋಗಿಯನೆರಿ
ಹಳ್ಳ ತೆಗ್ಗು ದಿಣ್ಣೆ ಮೀರಿ
ಊರು ಕೇರಿ ಆಕ್ರಮಣದ ಪೇರಿ


ಹಗಲು ರಾತ್ರಿ ಚಳಿ ಗಾಳಿ ಮೀರಿ
ಹೊಟ್ಟೆ ಬಟ್ಟೆ ಬಯಕೆಯ ಮೀರಿ
ದುಡಿದವನಿಗೆ ನೀ ತಗೆದೆ ಘೊರಿ
ಕಣ್ಣು ಬಿಟ್ಟಾಗ  ಬದುಕು ಬಿಕಾರಿ
ಭರವಸೆ ಭವಕೆ ಬೆಳಕಾದ ನದಿ
ಇಂದು ಮಸಣದಾ ಬೆಗುದಿಯ ಹಾದಿ

ಉಟ್ಟ ಬಟ್ಟೆಯಲಿ ದಟ್ಟಡವಿ ಸೇರಿ
ನಿಟ್ಟುಸಿರು ಬಿಟ್ಟು ನೊಡಿತಾ ಕೇರಿ
ಕುರಿ ಕತ್ತೆ ಗೊಗೆ ಕಾಗೆ ಗುಡಿಸಿ
ಕೊಂಪೆ ಮಾಡಿತಾ ಮರಾಠಿ  ಮಳೆ
ಮಹಾಮಳೆ  ಮೌನದುತ್ತರಕ್ಕೆ
ಮಾನವರೆಲ್ಲರು ತತ್ತರ

ನಾ ಮೇಲು ತಾ ಮೇಲು ಎಲ್ಲರೂಬುಡಮೇಲು
ಬಡವ ಶ್ರೀಮಂತ ನಿನಗೆಲ್ಲರು ಸರಿಸಮಾನಾರು
ಬದುವಿಗಾಗಿ ಬಡಿದಾಡಿ ಬೆಂದವರು ಕೊಂದವರು
ಇಂದು ಬರಿ ನೊಂದವರು ಬರಿ ನೊಂದವರು
ಬಸವಾದಿ ಶರಣರು,  ಸಂವಿಧಾನ ಹೇಳಿದರೂ
ಬೆಸೆಯದ ಸಮಾನತೆ , ಮರೆಯಿತೀಗ ಅಸಮಾನತೆ

ಬೆಂದಕಾಳೂರಿಗೆ ತಲುಪಿತು ಭವನೆ
ಹಾದಿ ಬೀದಿಗಳಲ್ಲಿ ದುಖ ಸಂತಾಪ
ದಾನ ಧರ್ಮಗಳ ಮೇಲಾಟ
ಹೃದಯ ತುಂಬೀ ನೀಡಿದವರೆಸ್ಟೋ
ಪೋಟೋಕೆ ಹಲ್ಲು ಗಿಂಜಿದವರೆಸ್ಟೋ
ನಿಸರ್ಗದುತ್ತರಕ್ಕೆ ಗರ್ವ ರೆಸ್ಟೋ ರೆಸ್ಟೋ




























No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...