Saturday, November 2, 2019

ಹನಿಗವನ

ಸಿರಿವಂತ ಹಣದ
ರಾಯಭಾರಿ,ಆದರೆ
ಯಾವಾಗಲೂ
ಬರಿ ವರಿ ವರಿ
ಬಡವ ಗುಣದ
ರಾಯಭಾರಿ ಆದರೆ
ಯಾವಾಗಲೂ
ದೊರೆ ದೊರೆ

ಬಸನಗೌಡ ಗೌಡರ

ಛಲ

ಕುಂಟ ಕುದುರೆ ನಾನು
ಬಂಟ ನಾಗಬೇಕೆಂದಿಲ್ಲ ,
ಸಾಲು ಕುದುರೆಯ
ನಡುವೆ ನಿಲ್ಲಬೆಕೆನ್ನುವುದು
ನನ್ನ ಹಟ
ಸೋಲು ಗೆಲುವಿನ ಚಿಂತೆ
ನನಗಿಲ್ಲ ಸೊಲಿನಲ್ಲು ಗೆಲವು ಉಂಟು....
       
      ಬಸನಗೌಡ ಗೌಡರ 

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...