Monday, March 30, 2020

ಕೊರೋನಾ ಸಮರ

ನಾವು ಸಮರ್ಥರು ನಾವು ಭಾರತೀಯರು
ರೋಗ ಪ್ರವಾಹ, ದಾಳಿ ಪ್ರಹಾರ
ಅರಿತೆ ಮುನ್ನೆಡೆದವರು, ಒಂದೆ ಎರಡೆ
ಸಾವಿರ ಸಂವಾಹರ ಮಾಡಿದವರು.//

ಕೊರೊನಾ ರೋಗಾಣು ಶರಣು ತರಲು
ಶಪತ ಮಾಡಿದವರು
ಪ್ರಧಾನಿ ಕರೆಗೆ ನಿಧಾನ ಮಾಡದೆ
ಗದೆ ಗುರಣಿ ಹಿಡಿದವರು
ವೈದ್ಯ ದಾದಿ, ಕರೊನಾ ವದೆಗೆ
ನಿತ್ಯ  ದುಡಿಯುವರು  //

ಗಾಂಧಿ ತಾತ ಸ್ವಾತಂತ್ರ್ಯಕ್ಕಾಗಿ ಉಪವಾಸ
ಇಪ್ಪತ್ತೊಂದು ದಿನ
ಪ್ರಧಾನಿ ನೇತಾ ಕೊರೊನಾಕ್ಕಾಗಿ
ಲಾಕಡೌನ ಇಪ್ಪತ್ತೊಂದು ದಿನ
ಘೋಷ ಒಂದೆ ,ಸಮೂಹ ದಂತರ
ಪಾಲಿಸುವವರು //

ಜೈಲು ಕರಿನೀರು ಹೊಸದೆನು
ಹಿರಿಯರು ಹಾಕಿದ ಮಾರ್ಗ
ಮನೆಯೇ ಜೈಲೆಂದರೆ ಹಿಂಜರಿತಾರೆನು
ಕರೊನ ಕ್ಕಿಂತ ಕಹಿ ಆಂಗ್ಲರ
ಆಡಳಿತ ಕಂಡವರು, ಕೊರೊನಾ
ಕಿತ್ತೊಗೆಯುವವರು //
                       ಬಸನಗೌಡ ಗೌಡರ
                            ಉಪನ್ಯಾಸಕರು 

Sunday, March 29, 2020

ಮದದಿಂದ ಮೆರೆದ ಮನುಕುಲದ
ಮದ ಹದವಾಗಿ ಕರಗಿಸಿದೆ ಕೊರೊನಾ
ಸ್ವಚ್ಚತೆ ಪಾಠ ಮಾಡಿದವ ಹುಚ್ಚನಾದ
ಬಚ್ಚಲು ನೀರೇ ಮಚ್ಚರ ಗಾನ
ಎಚ್ಚರಗೊಳ್ಳ ಲಿಲ್ಲ ಕೊರೊನಾ

ನೆರೆ ಚೀನದ ಬರೆ ಗಮನಿಸದೆ
ಗೊರಕೆ ಹೊಡೆದೆವು ಕೊರೊನಾ
ವೈದ್ಯ ದಾದಿಯರೇ ದೇವರು
ಶುದ್ದ ಸರಕಾರ ದೇವರು
ಬದ್ದ ವೈರಿಗಳರಿಯದವರು

ಮನೆ ಮಂತ್ರಾಲಯವರಿಯದವ
ಹೊಣೆ ಹೊತ್ತು ತಿರುಗದವ
ಕೋಣೆಗೆ ತೆರಳಿದರು ಕೊರೊನಾ
ನೀನೆ ದೇವರನ್ನಲೆ ದೆವ್ವವೆನ್ನ ಲೆ
ಅರಿತವರೆ ದೇವರು ಕೊರೊನಾ

ವಿದೇಶಿ ವ್ಯಾಮೋಹ ಪಿತ್ತ ನೆತ್ತಿಗೆರಿ
ಸ್ವದೇಶಿಗಳನ್ನೇ ಕಿಳಾಗಿ ಕಂಡರು
ನಗರದ ವ್ಯಾಮೋಹ ಪಿತ್ತ ನೆತ್ತಿಗೆರಿ
ಹಳ್ಳಿ ಗಳನ್ನೇ ಕಿಳಾಗಿ ಕಂಡರು
ಸ್ವದೇಶಿಯೇ ಸ್ವರ್ಗವೆಂದೆ ಕೊರೊನಾ

ಕರ ಜೋಡಿಸಿ ಕೈಮುಗಿಯುವೆ
ಕೈಜೋಡಿಸಿ ಸರಕಾರದೊಂದಿಗೆ
ಅಂತರವಿರವಿರಲಿ ಸರಿಕರೊಂದಿಗೆ

               
ಬಸನಗೌಡ ಗೌಡರ
                         ಉಪನ್ಯಾಸಕರು

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...