Thursday, April 16, 2020

ಜೀವಜಲ


ಕೆರೆ ಕಾಲುವೆ ಕಲ್ಯಾಣಿ, ಮನುಜ
ಕುಲದ ಜಿವಾಮೃತ ಗಣಿ
ಮನುಜನ ದುರಾಸೆಗಾತು ಬಲಿ
ಮರೆತರೆ ಬಸ್ಮಾಸುರನಂತೆ ಬಲಿ //

ನೀರು ತರಲು ಮಾರು ದೂರ
ಬೊರವೆಲ್ ಆದವು  ಮಾನವಾಧಾರ
ನಾವು ನೆಚ್ಚಿದೆವು ಗಲ್ಲಿ  ಶುದ್ದನೀರು
ಪೈಸೆ ಹಾಕಿ ಚೌಕಾಸಿ ಕುಡಿದೆವು ನೀರು/

ರೈತನ ಹಾಲಿಗೆ ಹತ್ತು, ಇಪ್ಪತ್ತು
ಕೊಡದೆ ಕಾಡಿಸುವರು ಒಪ್ಪತ್ತು
ಸೋಷಿದ ನೀರಿಗೆ ತಕರಾರಿಲ್ಲದಿಪ್ಪತ್ತು
ಅರಿಯದೆ ಕಾಲ ದೂಡಿದರಾಪತ್ತು //

ಸತ್ಯ ಅರಿಯಬೇಕು ನಿತ್ಯಸತ್ಪ್ರಜೆ
ಸಾವಿರ ವರುಷದ ಇತಿಹಾಸ ಗಣಿ
ಮೌರ್ಯ ರಿಂದ ಹರ್ಷನವರಗೆ
ಮಯೂರನಿಂದ ಮೈಸೂರುವರೆಗೆ //

ಜಲವೆ ಪ್ರಾಣಿ,ಪಕ್ಷಿಗಳಿಗಾಧಾರ
ಹುಲು ಮಾನವನುದರಕೂ ಆಧಾರ
ಜಲ ಸಂರಕ್ಷಣೆ  ಶ್ರೇಷ್ಟ ಪರಂಪರೆ
ನಿರ್ಲಕ್ಷ  ಸಲ್ಲದು ಕೃಷಿ ಪರಂಪರೆ //

                  ಬಸನಗೌಡ ಗೌಡರ 

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...