ಕೆರೆ ಕಾಲುವೆ ಕಲ್ಯಾಣಿ, ಮನುಜ
ಕುಲದ ಜಿವಾಮೃತ ಗಣಿ
ಮನುಜನ ದುರಾಸೆಗಾತು ಬಲಿ
ಮರೆತರೆ ಬಸ್ಮಾಸುರನಂತೆ ಬಲಿ //
ನೀರು ತರಲು ಮಾರು ದೂರ
ಬೊರವೆಲ್ ಆದವು ಮಾನವಾಧಾರ
ನಾವು ನೆಚ್ಚಿದೆವು ಗಲ್ಲಿ ಶುದ್ದನೀರು
ಪೈಸೆ ಹಾಕಿ ಚೌಕಾಸಿ ಕುಡಿದೆವು ನೀರು/
ರೈತನ ಹಾಲಿಗೆ ಹತ್ತು, ಇಪ್ಪತ್ತು
ಕೊಡದೆ ಕಾಡಿಸುವರು ಒಪ್ಪತ್ತು
ಸೋಷಿದ ನೀರಿಗೆ ತಕರಾರಿಲ್ಲದಿಪ್ಪತ್ತು
ಅರಿಯದೆ ಕಾಲ ದೂಡಿದರಾಪತ್ತು //
ಸತ್ಯ ಅರಿಯಬೇಕು ನಿತ್ಯಸತ್ಪ್ರಜೆ
ಸಾವಿರ ವರುಷದ ಇತಿಹಾಸ ಗಣಿ
ಮೌರ್ಯ ರಿಂದ ಹರ್ಷನವರಗೆ
ಮಯೂರನಿಂದ ಮೈಸೂರುವರೆಗೆ //
ಜಲವೆ ಪ್ರಾಣಿ,ಪಕ್ಷಿಗಳಿಗಾಧಾರ
ಹುಲು ಮಾನವನುದರಕೂ ಆಧಾರ
ಜಲ ಸಂರಕ್ಷಣೆ ಶ್ರೇಷ್ಟ ಪರಂಪರೆ
ನಿರ್ಲಕ್ಷ ಸಲ್ಲದು ಕೃಷಿ ಪರಂಪರೆ //
ಬಸನಗೌಡ ಗೌಡರ
No comments:
Post a Comment