Saturday, April 18, 2020

ಕಾಲಮಹಿಮೆ

ಉದ್ಯೋಗದ ಮಧ್ಯ ವೃದ್ದಾಪ್ಯ
ಬಂದದ್ದು ಗೊತ್ತೆ ಆಗಲಿಲ್ಲ.
ಓದಿದ್ದು ಹಳ್ಳಿ ,ಶಾಲೆ ಸರ್ಕಾರಿ
ನಮ್ಮಪ್ಪ ಕೃಷಿಕ, ನಾನೀಗ ಶಿಕ್ಷಕ
ನಮ್ಮತ್ತೆ ನಿರಕ್ಷರಿ ಅಪ್ಪನಿಗೆ
ಕೊಡುತ್ತಿದ್ದಳು ಸಲೆಹೆ ತರೆಹೆವಾರಿ
ಶಾಲೆ ಕಲಿತವರೆಲ್ಲ ಸಾಲಗಾರರೆ
ನಿನ್ನ ಮಗನೂ ಸಾಕಲಿ ಕುರಿ
ಎನಿಸಬಹುದು ನೋಟು ಗರಿ ಗರಿ
ನಮ್ಮಪ್ಪ ಕಲಿತಿದ್ದ ನಾಲ್ಕಕ್ಷರ
ಸಾಲ ತರುವಾಗ ಹೇಳುತ್ತಿದ್ದ ಸರಿ ಸರಿ
ಸಿಕ್ಕಮೇಲೆ ಆರ್ದ ಕೃಷಿಗೆ
ಬಾಕಿ ಸರಾಯಿಗೆ ,ಮಳೆ ಮೂರು ದಿನ
ಆಸೆ ಚಿಗುರುತ್ತಿತ್ತು ಎಂಬತ್ತು ದಿನ
ಆ ಕಾಲ ಬಂದೆ ಬಿಡುತ್ತಿತ್ತು ಬರ ಬರ
ಒಪ್ಪತ್ತು ಊಟಕ್ಕೊ ತತ್ವಾರ
ಮತ್ತೆ ನಮ್ಮತ್ತೆಯೆ ಮಂತ್ರಿ.ಮತ್ತೆ
ಪುಂಖಾನು ಪುಂಖ ಸಲಹೆ
ನನ್ನ ಸಲಹೆ ಕೇಳದಿದ್ದರೆ ಕರ್ಮ
ನಿಮ್ಮದು ಮುಗಿಯದ ಗೋಳು,
ನಮ್ಮಪ್ಪ ಗಟ್ಟಿ ಕಿವುಡಾಗಿ ಬಿಟ್ಟ
ಓದಲು ಕೊಟ್ಟು ಬಿಟ್ಟ ರಹದಾರಿ
ಏನು ಮಾಡುವುದು ಕಲ್ಲು, ಮುಳ್ಳು
ಕಮರಿ ಒಟ್ಟಾಗಿ ಆಡರಿದವು
ನಾನೊಡುವ ದಾರಿಯಲ್ಲಿ.
ಸಾಗಿದ ದಾರಿಯ ಸಂಕಷ್ಟಕೆ ಲೆಕ್ಕವಿಲ್ಲ
ನಾನೊದಿದ್ದು ಒಂದು ಕಾಲು
ಅದು ತರೆಹೆವಾರಿ ಪರೀಕ್ಷೆಗಾಗಿ
ದಾರಿಯಲ್ಲಿ ಪಡೆದ ಅನುಭವವೇ
ಮುಕ್ಕಾಲು, ಅದುವೆ ಬದುಕಿಗೆ ದಾರಿ
ನಮ್ಮಪ್ಪನ ವಯಸ್ಸು ಬಂದೆ ಬಿಟ್ಟಿತು
ಮಕ್ಕಳಿಗೆ ಹೇಳಿದರೆ ಇದು ಬಿಟ್ಟಿ ಸಲಹೆ
ಎನ್ನಬೇಕೆ ! ಕಾಲು ಬಾಚಿ ಕುಳಿತು
ಕೊಳ್ಳುವದೊಂದೆ ಬಾಕಿ.

             ಬಸನಗೌಡ ಗೌಡರ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...