Saturday, April 18, 2020

ಕವನ ವಿಮರ್ಶೆ

*ಜೀವನ⭕ಚಕ್ರ*

ಕಾಲ ನಿಲ್ಲುವುದಿಲ್ಲ... ಚಕ್ರ ಉರುಳುತ್ತಿದೆ..
ಬದುಕ ಬಂಡಿಯ "ಹೂಡಿ"ದನು ಜಾದುಗಾರ!
ಕೊರಡುಗಳ ಬಂಧಿಸುತ..ಕನಸುಗಳ ವರವಿತ್ತ..
ತೂಗೋ ತೊಟ್ಟಿಲ ಒಡೆಯ ಓ ಮಾಯಾಗಾರ!

ಜನ ಸೇರಿದೆಡೆಯಲ್ಲಿ ಮಹಾಜಾತ್ರೆಗೈಯುವನು!
ಅಪಹರಣಗೈಯುವನು ದುಗುಡವೆಲ್ಲಾ!
ತನುಮನಕೆ ಸೋಲಿಲ್ಲ... ಕರಗಳಿಗೆ ಬಿಡುವಿಲ್ಲ..
ನಗುಮೊಗದ ಉತ್ಸಾಹಿ ಜಗದೇಕ ಮಲ್ಲ!

ಬಾಲ್ಯಮಯ ತೊಟ್ಟಿಲಿಗೆ ಸಾಧನೆಯ ಮೆಟ್ಟಿಲಿದು!
ಹತ್ತುವಾಗಿಹ ತೋಷ.. ಇಳಿವಾಗ ಇಲ್ಲ!
ಒಮ್ಮೊಮ್ಮೆ ಸೋಲುಗಳು; ಕೆಲವೊಮ್ಮೆ ಸಾಲ್ಗೆಲುವು..
ಏರಿದವರಿಗೇ ಮಾತ್ರ! ಹೆದರಿದವರಿಗಿಲ್ಲ...

"ಅವನು" ಆಡಿಸಿದಂತೆ ನಾವೂ ಆಡಲೇಬೇಕು!
ನೋವು ನಲಿವನು ಮರೆತೂ ಹಾಡಬೇಕು!
ಗುಂಪು ಗುಂಪುಗಳೇಕೆ? "ತಂಪು" ಸಿಹಿ ಸಿಗಬೇಕೆ?
ಬಯಸಿ, ಬಯಸದೇ "ಸರತಿ" ಕಾಯಬೇಕು!

ಏರುಪೇರಿನ ಬಂಡಿ 'ಒಳಗೆ' ಸೊಗಸಿನ ಪಯಣ!
ಎಷ್ಟು ತಲೆ "ಸುತ್ತಿದರೂ" ಇಳಿಸೋದು ಬಲ್ಲೆ!
ಹಮ್ಮಿರದ ನಗೆಯಿರಲಿ; ಎತ್ತರಕ್ಕೆ ಏರಿದೊಡೆ..
*ಸಮರಸದ* ಬಾಳ್ಗೀತೆ ಹಾಡುವೆನು "ಇಲ್ಲೇ"!

*🖊ಮೊಗೇರಿ ಶೇಖರ ದೇವಾಡಿಗ*




ಮೊಗೇರಿ ಶೇಖರ ದೇವಾಡಿಗರ
 "ಜೀವನಚಕ್ರ " ಕವನ ....ಜೀವನವೆಂಬ ದೋಣಿಗೆ ದಾರಿದೀಪ, ಕಾಲ ನಿಲ್ಲುವುದಿಲ್ಲ ಜೀವನ ಚಕ್ರ ಉರುಳುತ್ತದೆ ಎನ್ನುವ ಭಾವ ಮಾರ್ಮಿಕವಾಗಿದೆ ಸಮಯ ಇದ್ದಾಗ ದುಡಿದುಕೊಳ್ಳಬೇಕು  ಕಾಲಾವಧಿ ಮೀರಿದ ಮೇಲೆ ದುಡಿದುಕೊಳ್ಳಬೇಕಂದರೂ  ಅವಕಾಶ ಜಾರಿ ಹೋಗಿರುತ್ತದೆ ಚಿಂತಿಸಿ ಫಲವಿಲ್ಲ ಕಾರ್ಯ ಮಗ್ನನಾದ ಅವದಿಯಲ್ಲಿ ಎಡರು ತೊಡರು ಅನಿವಾರ್ಯ,ಜಾದೂಗಾರ ಆಡಿಸಿದಂತೆ ಆಡುವ ಗೊಂಬೆಗಳು  ನಾವು ಎಂಬ ಅರಿವು ನಮಾಗಿರಬೇಕು. ಇಂದಿನ ಯುವಕರಿಗೆ ಕಾಲದ ಪರಿವೆಯೇ ಇಲ್ಲ ಹೀಗಾಗಿ ಅವಕಾಶ ವಂಚಿತರಾಗಿ ಚಿಂತಿತರಾಗುತ್ತಿದ್ದಾರೆ ಕೆಲವೊಮ್ಮೆ ಅಡ್ಡ ದಾರಿ ಹಿಡಿದ ಉದಾಹರಣೆಗಳು ಉಂಟು. ದೇವನೆಂಬ ಜಾದೂಗಾರ ಕೆಲವೊಮ್ಮೆ ಒಳ್ಳೆಯದನ್ನು ದಯಪಾಲಿಸುತ್ತಾನೆ ಅದನ್ನು ಜಾಗುರಕನಾಗಿ ಆಯ್ಕೆ ಮಾಡಿಕೊಳ್ಳಬೇಕು. ಗುಂಪು ಸೇರುತ್ತೆ ಅಂದರೆ ಸ್ಪರ್ಧೆ ಅನಿವಾರ್ಯ ಅಡ್ಡ ದಾರಿ ಬೇಡ  ಕೆಲವೊಮ್ಮೆ ನೇರವಲ್ಲದ ಅಡ್ಡ ದಾರಿಗಳು ಕಾಣಬಹುದು ಆ ದಾರಿ ಹಿಡಿಯದೆ ಸರತಿಯ ಸಾಲಿನಲ್ಲಿ ನಿಲ್ಲಬೇಕೆನ್ನುವುದು ಕವಿಯ "ಕಾನೂನು ಪಾಲನೆ ಚಿಂತನೆ" ತೋರಿಸುತ್ತದೆ  ಸೋಲಾದರು ವಿಷವುಂಡ ವಿಷಕಂಠನಾಗಬೇಕು ಅಮೃತ ಹೊರ ಹಾಕಬೇಕು ನಾವು (ಬಂಡಿ )ಬದುಕುವ ದಾರಿ ಕ್ಲಿಷ್ಟತೆ ತೆಯಿಂದಿರಬಹುದು,ಸಾಗುವ ಮಾರ್ಗದಲ್ಲಿ ಸಂತೋಷ ಕಾಣಬೇ ಕೆನ್ನುವುದು ಕವಿ ಆಶಯ .ದಡ  ಸೇರಿದಾಗ ಹಮ್ಮು ಇಲ್ಲದ,  ಬಿಮ್ಮು ಇಲ್ಲದ ಜೀವನ,ಅಂದರೆ ಸಮರಸದ  ಜೀವನ ಸಾಗಿಸಬೆಕೇನ್ನುವುದು ಕವಿಯ ಆಶಯ ಅದುವೆ ಬದುಕಿನ ಬಂಡಿ ನೆಡೆಸುವ ಪರಿ.

🖋️ ಬಸನಗೌಡ ಗೌಡರ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...