ನಾವಂದಷ್ಟು ಸರಳವಲ್ಲ ಜಗತ್ತು
ನಿಷ್ಕಾಳಜಿ ಮಾಡಿದರೆ ಅಪತ್ತು
ಅವರು ಬಿದ್ದದ್ದು ಎರಡು ಹೊತ್ತು
ಹೆಣ್ಣು ಹೊನ್ನು ಮಣ್ಣು ಬನ್ನು //
ಬಳಗವೆಲ್ಲ ಬರುತ್ತೆ ,ಬಂದಾಗ ಆಪತ್ತು
ಅದು ನಂದಾ ಅವರದಾ ಅವರವರೆ
ಬೆಳೆಸಿದ ಅವರೆ ನಿರ್ಮಿಸಿದ ಜಗತ್ತು
ಅದು ಬಿಡಿಸಲು ಬೇಕು ತಾಕತ್ತು //
ಹಿಗೊಬ್ಬ ಪೆದ್ದ ಪ್ರೀತಿಯ ಗುಂಗಿನಲೆದ್ದ
ನಾನೇನು ಕಡಿಮೆ ತಾಜ್ ಮಹಲ್
ಕಟ್ಟುವೆನೆಂದ, ಬೆಳಗಾಗುವದರಲ್ಲಿ
ತಾನೆ ತೊಡಿದ ತನ್ನ ಗೋರಿಯಲ್ಲಿದ್ದ. //
ಮಗದೊಬ್ಬನಿದ್ದ ಹಾಕಿದ್ದು ದ್ವಿಗುಣ,
ಗಲ್ಲಿ ಗಲ್ಲಿ ಸಾರಿದ್ದ, ಸುದ್ದಿ ತಿಳಿದದ್ದೆ ತಡ
ಕೂಡಿಟ್ಟ ಹಣ,ತಂದಾಕಿ ಸಾಲು ಸಾಲು
ಬೆಳಗಾಗುತ್ತಲೆ ಅಸಾಮಿ ಜೈಲು ಪಾಲು //
ಸಣ್ಣ ವಿಷಯಕ್ಕೂ ಸಾವಿರ ಭಾಷಣ
ಮಣ್ಣಿನ ವಿಷಯಕ್ಕೆ ವಿಭೂಷಣ
ಕುರಿ ಕೋಳಿ ಸಿಂದಿ ಸರಾಬು ಸೇವೆ
ಬೆಳಗಾಗುವದರಲ್ಲಿ ಜನನಾಯಕ //
🖋️ಬಸನಗೌಡ ಗೌಡರ
ನಿಷ್ಕಾಳಜಿ ಮಾಡಿದರೆ ಅಪತ್ತು
ಅವರು ಬಿದ್ದದ್ದು ಎರಡು ಹೊತ್ತು
ಹೆಣ್ಣು ಹೊನ್ನು ಮಣ್ಣು ಬನ್ನು //
ಬಳಗವೆಲ್ಲ ಬರುತ್ತೆ ,ಬಂದಾಗ ಆಪತ್ತು
ಅದು ನಂದಾ ಅವರದಾ ಅವರವರೆ
ಬೆಳೆಸಿದ ಅವರೆ ನಿರ್ಮಿಸಿದ ಜಗತ್ತು
ಅದು ಬಿಡಿಸಲು ಬೇಕು ತಾಕತ್ತು //
ಹಿಗೊಬ್ಬ ಪೆದ್ದ ಪ್ರೀತಿಯ ಗುಂಗಿನಲೆದ್ದ
ನಾನೇನು ಕಡಿಮೆ ತಾಜ್ ಮಹಲ್
ಕಟ್ಟುವೆನೆಂದ, ಬೆಳಗಾಗುವದರಲ್ಲಿ
ತಾನೆ ತೊಡಿದ ತನ್ನ ಗೋರಿಯಲ್ಲಿದ್ದ. //
ಮಗದೊಬ್ಬನಿದ್ದ ಹಾಕಿದ್ದು ದ್ವಿಗುಣ,
ಗಲ್ಲಿ ಗಲ್ಲಿ ಸಾರಿದ್ದ, ಸುದ್ದಿ ತಿಳಿದದ್ದೆ ತಡ
ಕೂಡಿಟ್ಟ ಹಣ,ತಂದಾಕಿ ಸಾಲು ಸಾಲು
ಬೆಳಗಾಗುತ್ತಲೆ ಅಸಾಮಿ ಜೈಲು ಪಾಲು //
ಸಣ್ಣ ವಿಷಯಕ್ಕೂ ಸಾವಿರ ಭಾಷಣ
ಮಣ್ಣಿನ ವಿಷಯಕ್ಕೆ ವಿಭೂಷಣ
ಕುರಿ ಕೋಳಿ ಸಿಂದಿ ಸರಾಬು ಸೇವೆ
ಬೆಳಗಾಗುವದರಲ್ಲಿ ಜನನಾಯಕ //
🖋️ಬಸನಗೌಡ ಗೌಡರ
No comments:
Post a Comment