ನಾನು ನನ್ನದೆನ್ನುವ ಮಮಕಾರ
ಬಿಟ್ಟು ನಡೆ ಮುಂದೆ, ನುಗ್ಗಿ ನಡೆ ಮುಂದೆ,
ಹೆಡಮುರಿ ಕಟ್ಟುವರು
ನಿನ್ನ ಹಿಂದೆ ಹಿಂದೆ. //
ಸಾವು ಗೆದ್ದವರಿಲ್ಲ ನೋವು ಕೊಟ್ಟವರು
ಉಳಿದಿಲ್ಲ ಬದುಕಿ ಬಾಳಿಲ್ಲ
ಕೊಂದವನು ನಿಂದಕನು
ನೊಂದುಕೊಳ್ಳುವರು ಇಂದೆ ಇಂದೆ //
ಶ್ಮಶಾನದ ದಾರಿಯಲಿ ಸಾವಿರ, ಸಾವಿರ
ಸತ್ತ ಮೇಲೂ ಉತ್ತರಿಸುವರು
ಸಾಧನೆಯ ಶಿಖರಕ್ಕೆರಿದ ಗುಟ್ಟು
ಸಾವೆ ಸನ್ಮಾನವಾಗಿತ್ತಂದು. //
ಬದುಕ ಕಟ್ಟಲು ಬಾಳಿದ ಮೂರು ದಿನ
ಬೆವರಾಗಿ ಹರಿದಿತ್ತು ಶ್ರಮದ ದಾನ
ಕಣ್ಣಿರು ಕಡಲಾಗಿ ಉಸಿರು ಬಿಸಿಯಾಗಿ
ಕಾರ್ಮೋಡ ಕರಗಿತ್ತಂದು. //
ಬಸನಗೌಡ ಗೌಡರ
No comments:
Post a Comment