ಭಾವಗೀತೆ
ಸಾಕು ಮಾಡು ಸಾಲು ಮಾತು
ಸಕಲವು ಇದರಲ್ಲಿ ಸಿಗುವುದೆನಿತು
ಸಪ್ತ ಸ್ವರದ ಹಾಡು ಕಲಿತು
ನಿತ್ಯ ರಮಿಸುವುದು ತಿಳಿಯಿತು// ಪ//
ಮಲ್ಲಿಗೆ ಸೇವಂತಿಗೆ ಮಾರು ತಂದು
ಮೆಲ್ಲಗೆ ಗಲ್ಲಕೆ ನವಿರು ಬೆಲ್ಲವಿಂದು
ಬೇಸಿಗೆ ಸುಟ್ಟ ಭುವಿಯ ಮಣ್ಣಿಗೆ
ಮುಂಗಾರು ಮಳೆ ಸುರಿಯಿತಿಂದು //
ಕಾಲದಾ ಕಹಿ ಕಷ್ಟ ಏನೇ ಇರಲಿ
ಕಡಲುಬ್ಬರ ಸೊಕ್ಕಿ ಉಕ್ಕಿ ಬರಲಿ
ಕವಲು ದಾರಿಯ ತೆವಲು ನನ್ನದಲ್ಲ
ಸಿಡಿಲು ಬಂದಡರಿದರು ಕದಲಲ್ಲ//
ಸಕಲವು ಇದ್ದು ಸಹನೆ ಗೆಲ್ಲದ
ಸುಕುಮಾರಿ ಹಿಂದೆ ಬಿದ್ದವನು ನಿನಲ್ಲ
ಸರಿಯಾದ ದಾರಿಯ ನನ್ನ ನಲ್ಲ
ಸಂಸಾರಕೆ ನೀ ಹೆದರ ಬೇಕಿಲ್ಲ//
ಬಸನಗೌಡ ಗೌಡರ
ಸಾಕು ಮಾಡು ಸಾಲು ಮಾತು
ಸಕಲವು ಇದರಲ್ಲಿ ಸಿಗುವುದೆನಿತು
ಸಪ್ತ ಸ್ವರದ ಹಾಡು ಕಲಿತು
ನಿತ್ಯ ರಮಿಸುವುದು ತಿಳಿಯಿತು// ಪ//
ಮಲ್ಲಿಗೆ ಸೇವಂತಿಗೆ ಮಾರು ತಂದು
ಮೆಲ್ಲಗೆ ಗಲ್ಲಕೆ ನವಿರು ಬೆಲ್ಲವಿಂದು
ಬೇಸಿಗೆ ಸುಟ್ಟ ಭುವಿಯ ಮಣ್ಣಿಗೆ
ಮುಂಗಾರು ಮಳೆ ಸುರಿಯಿತಿಂದು //
ಕಾಲದಾ ಕಹಿ ಕಷ್ಟ ಏನೇ ಇರಲಿ
ಕಡಲುಬ್ಬರ ಸೊಕ್ಕಿ ಉಕ್ಕಿ ಬರಲಿ
ಕವಲು ದಾರಿಯ ತೆವಲು ನನ್ನದಲ್ಲ
ಸಿಡಿಲು ಬಂದಡರಿದರು ಕದಲಲ್ಲ//
ಸಕಲವು ಇದ್ದು ಸಹನೆ ಗೆಲ್ಲದ
ಸುಕುಮಾರಿ ಹಿಂದೆ ಬಿದ್ದವನು ನಿನಲ್ಲ
ಸರಿಯಾದ ದಾರಿಯ ನನ್ನ ನಲ್ಲ
ಸಂಸಾರಕೆ ನೀ ಹೆದರ ಬೇಕಿಲ್ಲ//
ಬಸನಗೌಡ ಗೌಡರ
No comments:
Post a Comment