Wednesday, April 29, 2020

ನನ್ನ ಕವನದ ವಿಮರ್ಶೆ

ಬಸವನ ಗೌಡರ.

ಸರ್🙏🏼

ನಿಮ್ಮ ಬದುಕು ವಿಸ್ಮಯ

ಕವನ..
ಬದುಕು ವಿಶ್ಮಯ

ಬದುಕು ಒಂದು ಪ್ರಶ್ನೆಯ ಕಟ್ಟು
ಇಲ್ಲಿ ಬಂದವರೆಷ್ಟು ಹೋದವರೆಷ್ಟು
ಲೆಕ್ಕವಿಟ್ಟ ವರಾರು ಆ ಸಾಲುಪಟ್ಟಿ
ಜಗದ ಹುಟ್ಟನು ರಟ್ಟು ಮಾಡಲು ಹೊರಟು ಮಾಡಿ ಕೊಂಡರೆಡವಟ್ಟು //
👆🏻ಬದುಕು ವಿಸ್ಮಯವೇ ಸರಿ

ಯಾವ ನಿಮಿಷ ವೂ ನಮಗೆ ತಿಳಿಯದು...ಬರೀ‌ ಪ್ರಶ್ನೆ!!‌ಎಂಬುದನ್ನು..ಕಟ್ಟು ಎನ್ನುವ‌ ಪದದಲ್ಲಿ..
ಕಟ್ಟಿದ್ದಾರೆ ಕವಿ..ಅದು‌ತಿಳಿಯಲಾಗದ...ವಿಸ್ಮಯ...!!.ಅದು ಸೃಷ್ಟಿ ಕರ್ತನ..ಆಟ...ಏನೋ‌ಸಾಧಿಸುತ್ತೇವೆ ಅನ್ನುವ ಹಠ..
ಬೇಡ..
ತೊಂದರೆ..
ಕಟ್ಟೊಟ್ಟದ್ದು..


ಜಗದ ನಿಯಮಿ ಮೀರಿ ತಾನೆ
ಏನು ಮಾಡಲಾಗದು, ಆಡಿಸಿದಂತೆ
ಆಡಬೇಕು ಅಲುಗಾಡದೆ ಸುಮ್ಮನೆ ಜಾಣರಂತೆ ಬರೆದ ನಿಯಮವೆಲ್ಲ
ಬಾಗದೆ ತಾಳೆಯಾಗದು ಇಲ್ಲಿ //
👆🏻...ನಾವು ಏನನ್ನೂ ಬದಲು ಮಾಡಲಾಗದು.
ನಿಯಾಮಕನ ನಿಮಯವಕ್ಕೆ ಎಲ್ಲರೂ ಬದ್ದ ಅಷ್ಟೇ....ನಾವು ಬಾಗಿ.
ಒಪ್ಪಿ..ನಡೆಯ ಬೇಕು...

ಜನರು ತಿಳಿದ ಹಾಗೆ ಜನನ
ಮರಣ ಸಹಜ ನಿತ್ಯಪ್ರಕರಣ
ಸಹಜವೆಂದ ಮೇಲೆ ಯಾಕೆ ರಣ
ಸತತ ಸವಿಯಬೇಕು ಜೀವನ
ಸಮನ್ವಯ ಸಾಧಿಸದಿರೆ ಹರಣ   //
😌👆🏻ಇಲ್ಲಿ ಬಹಳ ಅದ್ಭುತವಾದ..ಸಾಲುಗಳು‌ಹೃದಯದಲ್ಲಿ.
ನಿಲ್ಲುತ್ತದೆ.
ಹುಟ್ಟು ಸಾವಿನಲ್ಲಿ‌ನಮ್ಮ‌ಮನಸ್ಸು‌ಸಮನ್ವಯವನ್ನು ಸಾಧಿಸ ಬೇಕಷ್ಟೇ..!! ಎಲ್ಲವೂ ಸಹಜ...ಒಪ್ಪಬೇಕು.
.ತಿದ್ದಲಾಗದು...ಸಮನಾಗಿ... ಸ್ವೀಕರಿಸಿ..ನಡೆಯಬೇಕು.

ಬಹಳ ಅದ್ಭುತ..ಚಿಂತನಾರ್ಹ!!

ಲೋಕನಾಯಕ  ತಿರುಗಿಸಿದಂತೆ
ತಿರುಗುವ ಖಾಲಿ ಗೊಂಬೆಗಳು
ಕಾಲ ಮುಗಿದ ಮೇಲೆ ದಾರ
ಹರಿದು ಎಲ್ಲಾ ಹರ ಹರ,ಬದುಕು
ಸವಿಯಬೇಕು ಇಲ್ಲಿ ಪ್ರಶ್ನೆ ಮಾಡದೆ //
👆🏻ಸೂತ್ರಧಾರನ‌‌ನಿಯಮದಂತೆ ಮೌನವಾಗಿ ನಮ್ಮ‌‌ನಮ್ಮ‌ಕರ್ತವ್ಯವನ್ನು ಮಾಡ ಬೇಕು ಯಾವುದೇ ಪ್ರಶ್ನೆ ಮಾಡ ಬಾರದು..ಅದಕ್ಕೆ ಉತ್ತರ ಇಲ್ಲ..

ಬಹಳ ಚಿಂತನಾರ್ಹ...ಕವನ...ನನಗೆ ಬಹಳ..ಇಷ್ಟವಾಯ್ತು..ಸರ್🙏🏼
..
           🖋️ಬಸನಗೌಡ ಗೌಡರ
ಅವರಿಗೆ  ಧನ್ಯವಾದಗಳು.

ಎಸ್. ನಾಗಮ್ಮ🌹

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...