Thursday, April 30, 2020

ಚುಟುಕುಗಳು

1)       
ಸ್ವಾತಂತ್ರ್ಯ ಸವಿಯರಿಯದೆ ಜನ
ಸ್ವೇಚ್ಚೆಗೆ ಮುತ್ತಿಕ್ಕುತಿರಲು ಶಿವ ನಕ್ಕ
ಸ್ವಾತಂತ್ರ್ಯ ವೆಂಬ ಹಕ್ಕುಕೊಡಾಕಾ
ಕಾರ್ಡ ಹಾಕಿ ಪಡೆದಂತಲ್ಲ ರೊಕ್ಕ //

2)
ಹದ ಮಳೆಗೆ ಅರಳುವುದು ಮಣ್ಣು
ಅದಕಿರಬೆಕು ಸೂರ್ಯನ ಕಣ್ಣು
ರೈತ ಶ್ರಮ ಹಾಕಿದರೆ ಹೊನ್ನು
ಇಲ್ಲದಿದ್ದರೆ ಏನು ಮಾಡಿತು ಪೆನ್ನು //

3)
ಪ್ರಕೃತಿ ಮಾಡಿದರೆ ವಿರೂಪ.
ತಾತ್ಕಾಲ ಸಿಗಬಹುದು ಪರಾಕ
ಕಾಲ ಮುಗಿದಾದ ಮೇಲೆ ಶಾಪ
ಕಳೆದು ಕೊಳ್ಳ ಬೇಕು ಸ್ವರೂಪ //

4)
ನಮಗೆ ಒಳ್ಳೆಯದು ಬರುವಾಗ
ನಾವು ಹೇಳುವುದೆಲ್ಲ ಏಕತೆ ಮಂತ್ರ
ಲಾಭ  ತಪ್ಪಿತೆಂದು ತಿಳಿಯಿತೊ
ನಾವು ಮಾಡುವುದೆಲ್ಲ ಕುತಂತ್ರ//

5)
ಅವರಪ್ಪನ ಆಸ್ತಿಗೆಲ್ಲ ಅವರೆ
ನೈಜ ಹಕ್ಕುದಾರರು ಅಪ್ಪನ
ಆದಾಯ ತಪ್ಪಿತೊ  ಅವರವರ
ಆ ಹಕ್ಕು ಹಂಚುವವರು ಅವರೆ//

6)
ಮಾತಿಗೆ ಒಂದೆ ಅರ್ಥ
ಹೇಳಿದವರಾರು ನಾನಾ ಅರ್ಥ? ಪೂರ್ವಾಗ್ರಹ,
ಗ್ರಹಿಕೆಗಳ ಎಡವಟ್ಟು  ಅಪಾರ್ಥ
ಹೇಳಿದವನದು ಒಂದೆ ಅರ್ಥ//

7)
ಸರಿಯಾಗಿ ಇರುವವನು
ಯಾವಾಗಲು ನೇರ
ಬಾಗಿ ಬೆಸೆದವನಿಗೆ ಬರೆ ಬಿತ್ತೊ
ಆಗ ಸರಿಯಾಗಿರುವವನೆ ಸುಮಾರ//

8)
ಸಾಧನೆಗೆ ಉಳಿದಿದ್ದೆ ಅವಶೇಷ
ಸಾವಿರ ವರುಷದ ಮೇಲೂ ಉಳಿದರೆ
ಅದು ನಮ್ಮೆಲ್ಲರ ಆದಿಶೇಷ,
ಅದಕ್ಕೆ ನಾವು ಮಾಡಬೇಕು  ನಾಮಾವಶೇಷ /
ಚುಟುಕು ಸ್ಪರ್ಧೆಗಾಗಿ:

9) ಕ್ರಮ ಸಂಖ್ಯೆ:  13

* ಕಲಿಕೆ  *

ಅಳುತ ಕಲಿತು, ಕಲಿತು ಮರೆತು.
ಅನುದಿನ,ಪರೀಕ್ಷೆಗೆ ಕಲಿಯುವ
ಕಲಿಯುಗದ,ಕಲಿಸುವಿಕೆಗೆ ಸಲಾಮ
ಕಲಿಕೆಯದು ಗ್ರಹಿಕೆಗಳ ವಿಕರಣ.


No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...