Monday, May 18, 2020

* ತೆಪ್ಪ ಪಯಣ *

ತುಂಬಿದ ಹೂಳೆಯದು ನನ್ನೂರಿನ,
ನಂಬಿ ಬಂದವರು ನೂರಾರು ಜನ
ದಡ ತಲುಪಿಸಬೇಕು ಕಡೆ ನನ್ನವರನ್ನು
ಸುಳಿಗಳು ಕಾಯುತಿವೆ ಸೋತವರನ್ನು//

ತೆಪ್ಪವ ತಯಾರಿಸಿದೆ ನನಗೊಪ್ಪಿದಂತೆ
ಸಪ್ಪೆಯಂತಲ್ಲ ಸವಿಯಾದ ಪಯಣ
ಒಪ್ಪಿಸಿದ  ಜಾಗಕ್ಕೆ ತಲುಪಿಸಬೇಕಿವರನು
ತಪ್ಪಿನಡೆದವನಲ್ಲ ಸತ್ಯದಿ ನಡೆದವನು//

ಹೊಳೆಯ ತುಂಬಿದೆ, ಕೊಳೆ ಸಾವಿರಾರು
ಜಾಳಿಗೆ ಹಾಕಿ ಹೊರತೆಗೆಯುವೆ ನೂರಾರು .
ಕಲ್ಮಶವೆಂದು ಕೈಲಾಗದೆಂದು ಬಿಡುವರೇನು?
ತಪ್ಪದೆ ಬದುಕಿನ ದಡ ತಲುಪಿಸುವೆನಿವರನು//

ಸತ್ಯವೆಂಬ ಹುಟ್ಟು ,ಸ್ನೇಹವೆಂಬ ತೆಪ್ಪ,
ಸೆಳುವೆ ಸವಾಲು,ಬಾಗುತ ಸಾಗುವೆ .
ದಡವ ತಲುಪಲು ಗಡಿಬಿಡಿಯೆ ಶಾಪ
ದೂರದ ದಾರಿಯ ಗುರಿ ತಲುಪಿಸುವೆ.//

ತೆಪ್ಪದ ತೂತಿಗೆ ಸವಿಯ ಮುತ್ತಿಗೆ ಹಾಕಿ
ಸಕಲರ ಕರದ ಸಹಕಾರದಿಂದ ಜೀಕಿ
ಬಿರುಗಾಳಿಗೆ ಬಗ್ಗದೆ ತೂರೆ ಸೀಳಬೇಕು
ಸಾವೆಂದರು ಹಿತವಾಗಿ ಸ್ವೀಕರಿಸಬೇಕು//

              ಬಸನಗೌಡ ಗೌಡರ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...