ತುಂಬಿದ ಹೂಳೆಯದು ನನ್ನೂರಿನ,
ನಂಬಿ ಬಂದವರು ನೂರಾರು ಜನ
ದಡ ತಲುಪಿಸಬೇಕು ಕಡೆ ನನ್ನವರನ್ನು
ಸುಳಿಗಳು ಕಾಯುತಿವೆ ಸೋತವರನ್ನು//
ತೆಪ್ಪವ ತಯಾರಿಸಿದೆ ನನಗೊಪ್ಪಿದಂತೆ
ಸಪ್ಪೆಯಂತಲ್ಲ ಸವಿಯಾದ ಪಯಣ
ಒಪ್ಪಿಸಿದ ಜಾಗಕ್ಕೆ ತಲುಪಿಸಬೇಕಿವರನು
ತಪ್ಪಿನಡೆದವನಲ್ಲ ಸತ್ಯದಿ ನಡೆದವನು//
ಹೊಳೆಯ ತುಂಬಿದೆ, ಕೊಳೆ ಸಾವಿರಾರು
ಜಾಳಿಗೆ ಹಾಕಿ ಹೊರತೆಗೆಯುವೆ ನೂರಾರು .
ಕಲ್ಮಶವೆಂದು ಕೈಲಾಗದೆಂದು ಬಿಡುವರೇನು?
ತಪ್ಪದೆ ಬದುಕಿನ ದಡ ತಲುಪಿಸುವೆನಿವರನು//
ಸತ್ಯವೆಂಬ ಹುಟ್ಟು ,ಸ್ನೇಹವೆಂಬ ತೆಪ್ಪ,
ಸೆಳುವೆ ಸವಾಲು,ಬಾಗುತ ಸಾಗುವೆ .
ದಡವ ತಲುಪಲು ಗಡಿಬಿಡಿಯೆ ಶಾಪ
ದೂರದ ದಾರಿಯ ಗುರಿ ತಲುಪಿಸುವೆ.//
ತೆಪ್ಪದ ತೂತಿಗೆ ಸವಿಯ ಮುತ್ತಿಗೆ ಹಾಕಿ
ಸಕಲರ ಕರದ ಸಹಕಾರದಿಂದ ಜೀಕಿ
ಬಿರುಗಾಳಿಗೆ ಬಗ್ಗದೆ ತೂರೆ ಸೀಳಬೇಕು
ಸಾವೆಂದರು ಹಿತವಾಗಿ ಸ್ವೀಕರಿಸಬೇಕು//
ಬಸನಗೌಡ ಗೌಡರ
ನಂಬಿ ಬಂದವರು ನೂರಾರು ಜನ
ದಡ ತಲುಪಿಸಬೇಕು ಕಡೆ ನನ್ನವರನ್ನು
ಸುಳಿಗಳು ಕಾಯುತಿವೆ ಸೋತವರನ್ನು//
ತೆಪ್ಪವ ತಯಾರಿಸಿದೆ ನನಗೊಪ್ಪಿದಂತೆ
ಸಪ್ಪೆಯಂತಲ್ಲ ಸವಿಯಾದ ಪಯಣ
ಒಪ್ಪಿಸಿದ ಜಾಗಕ್ಕೆ ತಲುಪಿಸಬೇಕಿವರನು
ತಪ್ಪಿನಡೆದವನಲ್ಲ ಸತ್ಯದಿ ನಡೆದವನು//
ಹೊಳೆಯ ತುಂಬಿದೆ, ಕೊಳೆ ಸಾವಿರಾರು
ಜಾಳಿಗೆ ಹಾಕಿ ಹೊರತೆಗೆಯುವೆ ನೂರಾರು .
ಕಲ್ಮಶವೆಂದು ಕೈಲಾಗದೆಂದು ಬಿಡುವರೇನು?
ತಪ್ಪದೆ ಬದುಕಿನ ದಡ ತಲುಪಿಸುವೆನಿವರನು//
ಸತ್ಯವೆಂಬ ಹುಟ್ಟು ,ಸ್ನೇಹವೆಂಬ ತೆಪ್ಪ,
ಸೆಳುವೆ ಸವಾಲು,ಬಾಗುತ ಸಾಗುವೆ .
ದಡವ ತಲುಪಲು ಗಡಿಬಿಡಿಯೆ ಶಾಪ
ದೂರದ ದಾರಿಯ ಗುರಿ ತಲುಪಿಸುವೆ.//
ತೆಪ್ಪದ ತೂತಿಗೆ ಸವಿಯ ಮುತ್ತಿಗೆ ಹಾಕಿ
ಸಕಲರ ಕರದ ಸಹಕಾರದಿಂದ ಜೀಕಿ
ಬಿರುಗಾಳಿಗೆ ಬಗ್ಗದೆ ತೂರೆ ಸೀಳಬೇಕು
ಸಾವೆಂದರು ಹಿತವಾಗಿ ಸ್ವೀಕರಿಸಬೇಕು//
ಬಸನಗೌಡ ಗೌಡರ
No comments:
Post a Comment