Monday, May 18, 2020

* ತೆಪ್ಪ ಪಯಣ *

ತುಂಬಿದ ಹೂಳೆಯದು ನನ್ನೂರಿನ,
ನಂಬಿ ಬಂದವರು ನೂರಾರು ಜನ
ದಡ ತಲುಪಿಸಬೇಕು ಕಡೆ ನನ್ನವರನ್ನು
ಸುಳಿಗಳು ಕಾಯುತಿವೆ ಸೋತವರನ್ನು//

ತೆಪ್ಪವ ತಯಾರಿಸಿದೆ ನನಗೊಪ್ಪಿದಂತೆ
ಸಪ್ಪೆಯಂತಲ್ಲ ಸವಿಯಾದ ಪಯಣ
ಒಪ್ಪಿಸಿದ  ಜಾಗಕ್ಕೆ ತಲುಪಿಸಬೇಕಿವರನು
ತಪ್ಪಿನಡೆದವನಲ್ಲ ಸತ್ಯದಿ ನಡೆದವನು//

ಹೊಳೆಯ ತುಂಬಿದೆ, ಕೊಳೆ ಸಾವಿರಾರು
ಜಾಳಿಗೆ ಹಾಕಿ ಹೊರತೆಗೆಯುವೆ ನೂರಾರು .
ಕಲ್ಮಶವೆಂದು ಕೈಲಾಗದೆಂದು ಬಿಡುವರೇನು?
ತಪ್ಪದೆ ಬದುಕಿನ ದಡ ತಲುಪಿಸುವೆನಿವರನು//

ಸತ್ಯವೆಂಬ ಹುಟ್ಟು ,ಸ್ನೇಹವೆಂಬ ತೆಪ್ಪ,
ಸೆಳುವೆ ಸವಾಲು,ಬಾಗುತ ಸಾಗುವೆ .
ದಡವ ತಲುಪಲು ಗಡಿಬಿಡಿಯೆ ಶಾಪ
ದೂರದ ದಾರಿಯ ಗುರಿ ತಲುಪಿಸುವೆ.//

ತೆಪ್ಪದ ತೂತಿಗೆ ಸವಿಯ ಮುತ್ತಿಗೆ ಹಾಕಿ
ಸಕಲರ ಕರದ ಸಹಕಾರದಿಂದ ಜೀಕಿ
ಬಿರುಗಾಳಿಗೆ ಬಗ್ಗದೆ ತೂರೆ ಸೀಳಬೇಕು
ಸಾವೆಂದರು ಹಿತವಾಗಿ ಸ್ವೀಕರಿಸಬೇಕು//

              ಬಸನಗೌಡ ಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...