Sunday, May 31, 2020

* ಸೈನಿಕ ಸಮರ್ಪಣೆ *

ಮರೆಯಲಾಗದು ಭರತ ಭೂಮಿ
ವೀರಪುತ್ರ ಸೈನಿಕನ ತ್ಯಾಗ ಜೀವನ
ಮಡದಿ ಮಕ್ಕಳಮೋಹವ ತೊರೆದು
ಹಿಮತುದಿಗೆ ನಡೆದ ವೈರಿ ಕಾವುಲದು/

ಹಿಮದ ರಭಸಕ್ಕೆ ರಕ್ತ ಹೆಪ್ಪುಗಟ್ಟಿತು
ದೇಶಾಭಿಮಾನದಲಿ ಅವಡುಗಚ್ಚಿದ
ವೈರಿಯ ಬಿಸಿ ರಕ್ತವ ತರ್ಪಣಗೈದನು
ಭಾರತ ಪುತ್ರ ಗೌರವ ನಿನಗರ್ಪಣೆ//

ಹಳ್ಳಿಯ ಬವಣೆ ಬದುಕು ಬಿಟ್ಟು
ತಂದೆ ತಾಯಿಗೆ ವಚನ ಕೊಟ್ಟು
ಹಿಮದ ಗಿರಿ ಮುಖುಟ ಮೀಟಿ
ಹಾರಿಸಿದಲ್ಲಿ ಗೌರವದ ಬಾವುಟ //

ವೈರಿಯ ಶೇಷವೆ ಸಾಗಿ ಬಂದು
ಸಾವಾಗಿ ಕಾದ ಜವರಾಯ ಅಂದು
ದೇಶ ಸೇವೆಗೆ ಹುತಾತ್ಮನಾದ ಬಂಧು
ಶೋಕಸಾಗರ ದೇಶ ಮರುಗಿತಿಂದು//

ಮಡದಿ ಮಕ್ಕಳ ಮೂಕ ರೋದನ
ಮಾತು ಮೌನದಲಿ ಆಯಿತು ಲೀನ
ಮತ್ತೆ ಶಪತ ಕಳಿಸುವೆ ಸೇವೆಗೆ ಮಗನ
ಕಾಡಿದ ಕಣ್ಣೀರು ದೇಶಕೆ ಸಮರ್ಪಣೆ//

             ಬಸನಗೌಡ ಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...