Thursday, May 28, 2020

* ಬದುಕಿನ ತೇರು*









ಪತಿ ಪರದೈವ ಎಳೆ ಬದುಕಿನ ತೇರ
ಪಟ್ಟಣ ದೂರ ಬೆಟ್ಟ ಬಹು ಇಳಿಜಾರು
ಪರ ಚಿಂತೆ ಬಿಡು, ಬೇಡ ಬೇಜಾರು
ಪರಶಿವನ ನಾಮ ಒಂದೇ ಜಾಗರಣೆ//

ಬಾಹುಬಲದಲಿ ಸಾಕಿದೆ ಹತ್ತು ಹಲವು
ಪಕ್ಕ ಬಲಿತ ಮೇಲೆ ಹಕ್ಕಿ ಹಾರಿದವು
ಸಿಕ್ಕ ಸಿಕ್ಕಲ್ಲಿ ತೆಲುತಿದೆ ತಾ ಮುದಿಹಾವು
ನಿನ್ನ ಸಲುಗೆ ಅವರಿಗೆಸೇರವ ಭಯವು

ಹುಟ್ಟಿ ತವರೆಳೆದೆ, ಬೆಳೆದು ಬಳ್ಳಿ ಎಳೆದೆ
ಬದುಕು ಬಡಿವಾರ, ಗಾಲಿ ಜೋಕಾಲಿ
ನಿಲ್ಲದೆ ನಿಟ್ಟುಸಿರಾಕಿ ಎಳೆದೆ ಬೀಳದೆ
ಸಲ್ಲದೆ ಬರು ಬಿರು ಬಾಣಕೆ ಕಿವುಡಾಗಿ

ದಾರಿ ಯಾವುದು ತಿರುವುಗಳದೆ ಚಿಂತೆ
ಅಪ್ಪಮ್ಮ ಕಲಿಸಿದ ಪತಿಪರದೈವವಂತೆ
ಬಾಗಿ ಬೆಂಡಾದರೂ ಬಿಡದ ಮಾಯೆ
ಬಿಡದೆ ನೆನಪಿಸುವವು ಕನಸಿನ ಛಾಯೆ

               ಬಸನಗೌಡ ಗೌಡರ 

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...