ಕಣ್ಣಲ್ಲಿ ಹುಟ್ಟುವ ಪ್ರೇಮನಿವೇದನೆ
ಕಾಡಾದರೇನು ನಾಡಾದರೇನು ?
ಹೃದಯ ತಟ್ಟಿ ಅರಳಿತು ತನು ಮನ
ಕಾಳಿದಾಸನ ಲೇಖನಿಗದು ಪ್ರೇರಣ//
ಅರಸನ ಸರಸ ಬಯಸಬಹುದೆ ?
ಶಾಕುಂತಲೆಗೆ ಸಾಗಿ ಬಂತು ಬಾಗ್ಯ
ಅಪ್ಸರೆಯ ಮೀರೀಸುವ ತಪಸ್ವಿ ಕನ್ಯೆ
ಕಣ್ಣು ಮಾತನಾಡಿ ಕನಸು ಕಟ್ಟಿದವು.//
ಬಳ್ಳಿ ಬೆಸುಗೆಗೆ ಬೆಳದಿಂಗಳು ಸೂಸಿ
ಬೀಜಾಂಕುರಕೆ ಉಂಗುರವೆ ಸಾಕ್ಷಿ
ದೊರೆ ಮರೆತನು ಜಿಂಕೆ ಶಾಪವಾಗಿ
ಮುರಿಯಿತು ಹೃದಯ ವಿರಹವಾಗಿ //
ಪ್ರೀತಿಗೆ ಬಂತು ಸೇತುವೆ ಮತ್ಸ್ಯವಾಗಿ
ಸಾವು ಸಾರ್ಥಕ ತಾ ಉಂಗುರ ನುಂಗಿ
ಕಾಡು ಮಲ್ಲಿಗೆ ನಾಡು ಸೇರಿ ಹಾಡಿತು
ನಾಡ ಬೃಂದಾವನದಿ ಜಿಂಕೆ ಚೆಲ್ಲಾಡಿತು//
ಬಸನಗೌಡ ಗೌಡರ
No comments:
Post a Comment