Thursday, May 28, 2020

ಸಾರ್ಥಕತೆ






ಕಣ್ಣಲ್ಲಿ ಹುಟ್ಟುವ ಪ್ರೇಮನಿವೇದನೆ
ಕಾಡಾದರೇನು ನಾಡಾದರೇನು ?
ಹೃದಯ ತಟ್ಟಿ ಅರಳಿತು ತನು ಮನ
ಕಾಳಿದಾಸನ ಲೇಖನಿಗದು ಪ್ರೇರಣ//

ಅರಸನ ಸರಸ ಬಯಸಬಹುದೆ ?
ಶಾಕುಂತಲೆಗೆ ಸಾಗಿ ಬಂತು ಬಾಗ್ಯ
ಅಪ್ಸರೆಯ ಮೀರೀಸುವ ತಪಸ್ವಿ ಕನ್ಯೆ
ಕಣ್ಣು ಮಾತನಾಡಿ ಕನಸು ಕಟ್ಟಿದವು.//

ಬಳ್ಳಿ ಬೆಸುಗೆಗೆ ಬೆಳದಿಂಗಳು ಸೂಸಿ
ಬೀಜಾಂಕುರಕೆ ಉಂಗುರವೆ ಸಾಕ್ಷಿ
ದೊರೆ ಮರೆತನು ಜಿಂಕೆ ಶಾಪವಾಗಿ
ಮುರಿಯಿತು ಹೃದಯ ವಿರಹವಾಗಿ //

ಪ್ರೀತಿಗೆ ಬಂತು ಸೇತುವೆ ಮತ್ಸ್ಯವಾಗಿ
ಸಾವು ಸಾರ್ಥಕ ತಾ ಉಂಗುರ ನುಂಗಿ
ಕಾಡು ಮಲ್ಲಿಗೆ ನಾಡು ಸೇರಿ ಹಾಡಿತು
ನಾಡ ಬೃಂದಾವನದಿ ಜಿಂಕೆ ಚೆಲ್ಲಾಡಿತು//

           ಬಸನಗೌಡ ಗೌಡರ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...