ದಿವ್ಯದೃಷ್ಟಿ ನಮ್ಮಸೃಷ್ಟಿ ಸಾಗಲು
ದಿನದ ಬದುಕಿನ ಕೊವಿಡ್ ಕೊಲ್ಲಲು
ನಮ್ಮ ಸಂರಕ್ಷಣೆ ಮೆರೆಯಲು
ಅಚರಿಸಬೇಕು ನಿಜ ದಿಪಾವಳಿ
ದೀಪದಿಂದ ಕೊರೊನಾ ಅಳಿಯಲಿ
ದಿಪದಿಂದ ಶಾಪ ದಿವಾಳಿಯಾಗಲಿ
ಲೋಕ ತಮಂದವಳಿದು ನಾಕವಾಗಲು
ಆಚರಿಸುಬೇಕು ನಿಜ ದೀಪಾವಳಿ//
ಆರಿಸಿ ಆಚರಣೆ ನಮ್ಮದಲ್ಲ ಕೇಳಿ
ಎಚ್ಚರದಿಂದ ಹಚ್ಚಿ ದೀಪ,ತಾಳಿ
ಹುಚ್ಚರಾಗಿವಿ ಕೊರೊನಾ ಕೇಳಿ ಕೇಳಿ
ಅಚ್ಚರಿಫಲಿತಾಂಶಕೆ ನಿಜ ದೀಪಾವಳಿ//
ದೀಪ ಸಂಕೇತ, ಭಾವ ಬಿತ್ತ ಬೇಕು
ಭವ್ಯ ಭಾರತ ಕಟ್ಟಬೇಕು ಜನಕ
ಕಾಶ್ಮೀರದಿಂದ ಕನ್ಯಾಕುಮಾರಿ ತನಕ
ಆಚರಿಸಬೇಕು ನಿಜ ದೀಪಾವಳಿ//
ಭವ್ಯ ಪರಂಪರೆ ಭುವನ ಪುತ್ರರು
ವಿಶ್ವ ಮಾನವತ್ವ ಬೆಳವಣಿಗೆ ಮಿತ್ರರು
ಭೇಧ ಭಾವ ಮನದಿಂದ ಅಳಿಯಲು
ಆಚರಿಸಬೇಕು ನಿಜ ದೀಪಾವಳಿ//
ದಾದಿ ವೈದ್ಯ, ಆರಕ್ಷಕರ ಸ್ಮರಣೆಗೆ
ಪ್ರಧಾನಿಯ ಕರೆಗೆ,ರೋಗ ನಿವಾರಣೆಗೆ
ಕೋಟಿ,ಕೋಟಿ ಭಾರತೀಯರ ರಕ್ಷಣೆಗೆ ಬೆಳಗಬೇಕು ದೀಪದಿಂದ ದೀಪಾವಳಿ//
ಬಸನಗೌಡ ಗೌಡರ
No comments:
Post a Comment