ಅನುದಿನವು ಬರಿ ಚಪಲಕೆ ಮಾತಾಡಿ
ಅರೆಕ್ಷಣವೂ ಓದದೆ ಬರೆಯುವೆ ಕೊಡಿ
ಆರು ಓದುವವರು ಈ ನಿನ್ನ ಕವನ
ಅರಳುಮರಳು ಹಿಡಿದ ಮುದಿ ಜೀವನ//
ಬೇಟೆಯಾಡಿದಂತೆ ನಾಟಕವಾಡಿ
ಸರಿಸಾಟಿಯಲ್ಲದವರ ಜೊತೆಗೂಡಿ
ಸಮಾಜಸೇವೆ ರಂಗತಾಲೀಮು ಮಾಡಿ
ಕುಣಿದು ಬೆತ್ತಲಾಗಿ ನಿಲ್ಲುವೆ ಹಾಡಿ//
ಅರೆಕ್ಷಣವೂ ಓದದೆ ಬರೆಯುವೆ ಕೊಡಿ
ಆರು ಓದುವವರು ಈ ನಿನ್ನ ಕವನ
ಅರಳುಮರಳು ಹಿಡಿದ ಮುದಿ ಜೀವನ//
ಬೇಟೆಯಾಡಿದಂತೆ ನಾಟಕವಾಡಿ
ಸರಿಸಾಟಿಯಲ್ಲದವರ ಜೊತೆಗೂಡಿ
ಸಮಾಜಸೇವೆ ರಂಗತಾಲೀಮು ಮಾಡಿ
ಕುಣಿದು ಬೆತ್ತಲಾಗಿ ನಿಲ್ಲುವೆ ಹಾಡಿ//
ಬಂಜರು ನೆಲದ ಭತ್ತದ ಹುಡಕಾಟ
ಬಿರುಗಾಳಿಗೆ ಸಾಲುಗಳೆಲ್ಲ ಅಲುಗಾಟ
ಭಾಗುವ ಗಿಡ ಬದುಕುವುದು ದಿಟ
ಬಾಗದೆ ಬಗ್ಗದೆ ನಿಲ್ಲಲು ಯಾಕಿ ಹಠ//
ಬಿರುಗಾಳಿಗೆ ಸಾಲುಗಳೆಲ್ಲ ಅಲುಗಾಟ
ಭಾಗುವ ಗಿಡ ಬದುಕುವುದು ದಿಟ
ಬಾಗದೆ ಬಗ್ಗದೆ ನಿಲ್ಲಲು ಯಾಕಿ ಹಠ//
ಮಾಡಿದ ಪಾಪಗಳೆ ಮೇಲೆರಗುವವು
ಮಧ್ಯರಾತ್ರಿಯಲ್ಲಿ ಬಿರುಗಾಳಿಯಾಗಿ
ಮಾಡಿದ ಪುಣ್ಯಗಳೆ ಸುರಿಯುವವು
ಮಾಮರದ ಮಂದ ಮಾರುತಗಳಾಗಿ //
ಮಾಡಿದ ಪುಣ್ಯಗಳೆ ಸುರಿಯುವವು
ಮಾಮರದ ಮಂದ ಮಾರುತಗಳಾಗಿ //
ಮನಪರಿವರ್ತನೆಗೆ ಮಿಸುಕಾಡಿತಾ ಹಿಡಿ
ಮಾವುತಗೆ ಮಣಿಯಲಾರದೆ ಆ ಕರಿ
ಅಂಕುಶವೆ ಕಿರಿದೆಂದು ಬಿಂಕವ ಬಿಡು
ಅಂಕೆಯಲಿಡಲು ಸಂಕೀರ್ತನೆ ಹಾಡು//
ಬಸನಗೌಡ ಗೌಡರ
No comments:
Post a Comment