Tuesday, July 7, 2020

ಬಾಗು ಮನ


ಅನುದಿನವು ಬರಿ ಚಪಲಕೆ ಮಾತಾಡಿ
ಅರೆಕ್ಷಣವೂ ಓದದೆ ಬರೆಯುವೆ ಕೊಡಿ
ಆರು ಓದುವವರು ಈ ನಿನ್ನ ಕವನ
ಅರಳುಮರಳು ಹಿಡಿದ ಮುದಿ ಜೀವನ//

ಬೇಟೆಯಾಡಿದಂತೆ ನಾಟಕವಾಡಿ
ಸರಿಸಾಟಿಯಲ್ಲದವರ ಜೊತೆಗೂಡಿ
ಸಮಾಜಸೇವೆ ರಂಗತಾಲೀಮು ಮಾಡಿ
ಕುಣಿದು ಬೆತ್ತಲಾಗಿ ನಿಲ್ಲುವೆ ಹಾಡಿ//

ಬಂಜರು ನೆಲದ ಭತ್ತದ ಹುಡಕಾಟ
ಬಿರುಗಾಳಿಗೆ ಸಾಲುಗಳೆಲ್ಲ ಅಲುಗಾಟ
ಭಾಗುವ ಗಿಡ ಬದುಕುವುದು ದಿಟ
ಬಾಗದೆ ಬಗ್ಗದೆ ನಿಲ್ಲಲು ಯಾಕಿ ಹಠ//

ಮಾಡಿದ ಪಾಪಗಳೆ ಮೇಲೆರಗುವವು  
ಮಧ್ಯರಾತ್ರಿಯಲ್ಲಿ ಬಿರುಗಾಳಿಯಾಗಿ
ಮಾಡಿದ ಪುಣ್ಯಗಳೆ ಸುರಿಯುವವು
ಮಾಮರದ ಮಂದ ಮಾರುತಗಳಾಗಿ //

ಮನಪರಿವರ್ತನೆಗೆ ಮಿಸುಕಾಡಿತಾ ಹಿಡಿ 
ಮಾವುತಗೆ ಮಣಿಯಲಾರದೆ ಆ ಕರಿ
ಅಂಕುಶವೆ ಕಿರಿದೆಂದು ಬಿಂಕವ ಬಿಡು
ಅಂಕೆಯಲಿಡಲು ಸಂಕೀರ್ತನೆ ಹಾಡು//

         ಬಸನಗೌಡ ಗೌಡರ 





No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...