ಇಂದು ಬದಲಾಗಿದೆ ಜಗತ್ತು
ಅದು ತರಲು ಹೊರಟಿದೆ ಆಪತ್ತು
ಮಾಹಿತಿಗಳೆ ಗುರುಗಳು ಇವತ್ತು
ಅರ್ದ ತಿಳಿದವನಿಗೂ ಬಂದಿದೆ ಗತ್ತು//
ಮಾಹಿತಿಗಳೆ ಗುರುಗಳು ಇವತ್ತು
ಅರ್ದ ತಿಳಿದವನಿಗೂ ಬಂದಿದೆ ಗತ್ತು//
ಗರು ಸೃಷ್ಟಿ ಸ್ಥಿತಿ ಲಯ ಕರ್ತೃವಾದ ಕಾಲವಿತ್ತು
ಮಾಹಿತಿ ಮಾಣಿಕ್ಯವೆಂಬ ಕಾಲ ತೇಲಿ ಬಂದಿತ್ತು
ಮನೆ ಪಾಠದ ಸಾಧನವಾಗಿ ಗುರು ಸಾಕಾಗಿತ್ತು
ಗರು ಕೊಂಡುಕೊಂಡರು ಮಾಹಿತಿಗಾಗಿ ಇವತ್ತು //
ಗರು ಕೊಂಡುಕೊಂಡರು ಮಾಹಿತಿಗಾಗಿ ಇವತ್ತು //
ಮಾಹಿತಿಗಳೇರುವ ವಾಹಕಗಳೆ ಗುರುವಾಗಿ
ಗುರುಗಳಿಗೆ ಕಾಡುತಿದೆ ಸಂಬಳವೆ ಶಾಪವಾಗಿ
ಗುರು ಮಟ್ಟಕ್ಕೇರದೆ ಸಾಧನಗಳೇ ಲಘುವಾಗಿ
ಸಾಧನಗಳೆ ಬೀಳಬಹುದು ತೆಲೆ ಕೆಳಗಾಗಿ//
ಗುರು ಹರನಂತೆ ಬದಲಾಗಬೇಕು
ವಿಷ ಕುಡಿಯಲು ತಯಾರಿರಬೇಕು
ಸಮುದ್ರ ಮಂಥನ ಮಾಡಬೇಕು
ಸಾಧನಗಳ ಹುರಿದು ಜೀರ್ಣಿಸಬೇಕು
ನನ್ನ ಗುರುವು ನನಗಿಂತ ಭಿನ್ನ ನಾಗಿದ್ದ
ಆಹಾರ ತಯಾರಿಸಿ ನಳಪಾಕನಾಗದ್ದ
ಊರಿನ ಹಬ್ಬಹರಿದಿನದ ಸೇವಕನಾಗಿದ್ದ
ಓದಿ ಬ್ರಾಹ್ಮಣ, ಮಕ್ಕಳ ನಾಯಕನಾಗಿದ್ದ //
ಬಸನಗೌಡ ಗೌಡರ
ಗುರುಗಳಿಗೆ ಕಾಡುತಿದೆ ಸಂಬಳವೆ ಶಾಪವಾಗಿ
ಗುರು ಮಟ್ಟಕ್ಕೇರದೆ ಸಾಧನಗಳೇ ಲಘುವಾಗಿ
ಸಾಧನಗಳೆ ಬೀಳಬಹುದು ತೆಲೆ ಕೆಳಗಾಗಿ//
ಗುರು ಹರನಂತೆ ಬದಲಾಗಬೇಕು
ವಿಷ ಕುಡಿಯಲು ತಯಾರಿರಬೇಕು
ಸಮುದ್ರ ಮಂಥನ ಮಾಡಬೇಕು
ಸಾಧನಗಳ ಹುರಿದು ಜೀರ್ಣಿಸಬೇಕು
ನನ್ನ ಗುರುವು ನನಗಿಂತ ಭಿನ್ನ ನಾಗಿದ್ದ
ಆಹಾರ ತಯಾರಿಸಿ ನಳಪಾಕನಾಗದ್ದ
ಊರಿನ ಹಬ್ಬಹರಿದಿನದ ಸೇವಕನಾಗಿದ್ದ
ಓದಿ ಬ್ರಾಹ್ಮಣ, ಮಕ್ಕಳ ನಾಯಕನಾಗಿದ್ದ //
ಬಸನಗೌಡ ಗೌಡರ
No comments:
Post a Comment