Sunday, July 5, 2020

ಮಾಹಿತಿ ಗುರು

ಇಂದು ಬದಲಾಗಿದೆ ಜಗತ್ತು
ಅದು ತರಲು ಹೊರಟಿದೆ ಆಪತ್ತು
ಮಾಹಿತಿಗಳೆ ಗುರುಗಳು ಇವತ್ತು
ಅರ್ದ ತಿಳಿದವನಿಗೂ ಬಂದಿದೆ ಗತ್ತು//

ಗರು ಸೃಷ್ಟಿ ಸ್ಥಿತಿ ಲಯ ಕರ್ತೃವಾದ ಕಾಲವಿತ್ತು
ಮಾಹಿತಿ ಮಾಣಿಕ್ಯವೆಂಬ ಕಾಲ ತೇಲಿ ಬಂದಿತ್ತು
ಮನೆ ಪಾಠದ ಸಾಧನವಾಗಿ ಗುರು ಸಾಕಾಗಿತ್ತು
ಗರು ಕೊಂಡುಕೊಂಡರು ಮಾಹಿತಿಗಾಗಿ ಇವತ್ತು //

ಮಾಹಿತಿಗಳೇರುವ ವಾಹಕಗಳೆ ಗುರುವಾಗಿ
ಗುರುಗಳಿಗೆ ಕಾಡುತಿದೆ ಸಂಬಳವೆ ಶಾಪವಾಗಿ
ಗುರು ಮಟ್ಟಕ್ಕೇರದೆ ಸಾಧನಗಳೇ ಲಘುವಾಗಿ
ಸಾಧನಗಳೆ ಬೀಳಬಹುದು ತೆಲೆ ಕೆಳಗಾಗಿ//

ಗುರು  ಹರನಂತೆ ಬದಲಾಗಬೇಕು
ವಿಷ ಕುಡಿಯಲು ತಯಾರಿರಬೇಕು
ಸಮುದ್ರ ಮಂಥನ ಮಾಡಬೇಕು
ಸಾಧನಗಳ ಹುರಿದು ಜೀರ್ಣಿಸಬೇಕು

ನನ್ನ ಗುರುವು ನನಗಿಂತ ಭಿನ್ನ ನಾಗಿದ್ದ
ಆಹಾರ ತಯಾರಿಸಿ ನಳಪಾಕನಾಗದ್ದ
ಊರಿನ ಹಬ್ಬಹರಿದಿನದ ಸೇವಕನಾಗಿದ್ದ
ಓದಿ ಬ್ರಾಹ್ಮಣ, ಮಕ್ಕಳ ನಾಯಕನಾಗಿದ್ದ //

          ಬಸನಗೌಡ ಗೌಡರ









No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...