ಜಗದ ನಿಯಮ ಮೀರಲಾಗದು
ನಮ್ಮದೇನೂ ಅಲ್ಲಿ ನಡೆಯದು/
ನಿನ್ನ ಕರುಣೆ ಇಲ್ಲದೇನು ತಿಳಿಯದು
ಹುಲ್ಲು ಕಡ್ಡಿ ಇಲ್ಲಿ ಅಲುಗಾಡದು //
ಹೆಣ್ಣು ಗಂಡು ಲೋಕದೆರಡು ಕಣ್ಣು
ಸುಂದರವಾಗಲು ಹೊರಬೇಕು ಮಣ್ಣು
ಹೊಂದಿಕೊಂಡಿರಲು ಜೀವನ ಪಾವನ
ನಡೆಯಬೇಕು ಅಲ್ಲಿ ಸೃಷ್ಟಿ ವಿಕಸನ//
ಮದುವೆಯೆಂಬ ಮೂರಕ್ಷರ ಜಾತ್ರೆ
ಮಸಣದವರೆಗೆ ನಡೆಯುವ ಯಾತ್ರೆ/
ಮಹಾದೇವನವರೆಗೆ ತಲುಪುವ ಸೂತ್ರ
ಕರಿಮಣಿ ಕಟ್ಟಿ ಬೆಳಗಬೇಕು ಮಿತ್ರ//
ಸಪ್ತಪದಿ ತುಳಿದು ಸತ್ಯದಿಂದ ನುಡಿದು
ಸಾಗಬೇಕು ಸಂಸಾರ ಸಾಗರ ಹಿಡಿದು/
ಸಹಜ ಏರಬೇಕು ಸವಾಲು ಪಡೆದು
ಸಾಗಬೇಕು ಸಂಸಾರ ಸಾಗರ ಹಿಡಿದು/
ಸಹಜ ಏರಬೇಕು ಸವಾಲು ಪಡೆದು
ಸೋತು ಗೆಲ್ಲಬೇಕು ಸಾವು ತಡೆದು//
ಜಾತಿಯಭ್ರಮೆ ಅಳಿಸಿ ನೀತಿ ಬೆಳಸಿ
ಪ್ರೀತಿ ಪ್ರೇಮದ ಮಹಲು ನಿರ್ಮಿಸಿ/
ಚಾತಿಯಿಂದ ಕಟ್ಟಬೇಕು ನಂದನವನ
ಹೂವಾಗಿ ಅರಳಬೇಕು ನಮ್ಮತನ //
✒ ಬಸನಗೌಡ ಗೌಡರ
No comments:
Post a Comment