Wednesday, August 12, 2020

* ದರ್ಪಣ*

ವಲವಿನ ಸ್ನೇಹ ಜಡವಾಗಿ ತಪ್ಪಿದೆ ದಾರಿ  

ಬಲವು ಜಾರುತಿದೆ ಕಾಲ ಕೈಮೀರಿ 

ವಿಕ್ರಮಸಾಧಿಸುವ ಪರಿ ಹೇಳು ನಾರಿ

ಸಕ್ರಮ ದಾರಿಯಲಿ ಕಾಣುತಿವೆ  ಕಮರಿ//


ಕಣ್ಣೀರು ಕರಗಿ ಹೊಳೆಯಾಗಿ ಹರಿದು

ಕಡಲು ತಡಿಗೆ ಗಡಿಬಿಡಿಯಿಂದ ಸರಿದು

ನೇಸರನ ರಶ್ಮಿಗೆ ಹೆದರಿ ನಭಕೆ ಜಿಗಿದು 

ಕರಿಮೋಡ ನಿನ್ನೊಡಲ ಸೇರಬರುತಿದೆ//


ಇಬ್ಬನಿ ದರ್ಪಣದ ಬಿಂಬ ಬೆಂಬತ್ತಿ

ಮುಸುಕಿದ ಮಬ್ಬಿನಲ್ಲಿನೋಡಿದೆ ಕತ್ತೆತ್ತಿ

ಮನಶಾಂತಿಗೆ ತಿರುಗಿದೆ ಮಾಯೆ ಸುತ್ತಿ 

ನೀನಡಗಿದ ಸುಡಗಾಡದಲಿ ನಾ ಸತ್ತೆ//


ನೆನಪಿನ ಡೋಣಿಯ ನಲ್ಮೆಯ ಕನಸು 

ವೇದನಯ ಕರಗಿಸಿ ಹೂವುನು ಹಾಸಿ

ಕೋಗಿಲೆ ಕೂಗು ಜೋಗುಳ ಹಾಡಿಸಿ//

ನವಿಲಿನ ನರ್ತನ ತಂತು ಮಂದಹಾಸ


                 ✒ ಬಸನಗೌಡ ಗೌಡರ


No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...