Saturday, August 15, 2020

* ತರುಣ *

ಪ್ರೀತಿ ಜ್ವರ ತರಣರಲ್ಲೇರುವುದು ಸಹಜ
ಯುವ ಬೆವರಿನಲ್ಲೆ ನಿಂತಿದೆ ಸಮಾಜ/

ಚಾಕರಿ ಬದುಕಿಗೂ ಕ್ಯೂಗಳ ಸಾಲು

ಬಿಕಾರಿಯಾಗದೆ ಸ್ವೀಕರಿಸು ಸವಾಲು//

ಜಗಕೆ ಪಾಠ ಹೇಳಿದ ದೇಶ ನಮ್ಮದು
ಭವ್ಯ ಇತಿಹಾಸ ಪರಂಪರೆ ತವರಿದು /
ಬಿಸಿರಕ್ತದುಸಿರಿಲ್ಲದೆ ಜಡ ಕರಗದು
ಯುವ ಪಡೆ ನಡೆಯದೆ ತಲುಪದು //

ಯುವಕಂಗಳಲ್ಲಿ ಬೆಟ್ಟದಷ್ಚು ಆಸೆ
ದಡ ಸೇರಲು ಬೇಕು ಗಟ್ಟಿ ಸಾಹಸ
ಭಟ್ಟಿ ಇಳಿಸದೆ ಪರಶುದ್ಧತೆ ಬರಿ ಕನಸು
ಬಯಲಿಗೆ ಬಿದ್ದು ಗೆದ್ದರದು ನನಸು//

ತರುಣರ ಕಿರಣ ಬೀಳದೆ ಇಲ್ಲ ಬೆಳಕು
ಗುರಾಣಿ ಹಿಡಿದು ಮುನ್ನುಗ್ಗಬೇಕು /
ದೇಶ ಕಟ್ಟಲು ನಾಳೆ ಎನ್ನುವುದು ಸಾಕು
ಹಗಲುಗಾಣಲು ಭಾಸ್ಕರ ಬರಬೇಕು//

            ಬಸನಗೌಡ  ಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...