ಚಂದ್ರನ ಬೆಳದಿಂಗಳು ತಂಪು ಸೂಸಿ
ಇಂದ್ರನ ಸಭಾಂಗಣ ವೈಭವ ಮೀರಿಸಿ
ಹೊಂಬೆಳಕು ಸೂಸುವ,ಯಾರಿ ಅರಸಿ
ನಸುನಾಚಿ ನೀರಾಗಿ ನಿಂತಳುಸಿರಾಕಿ//
ಮಹಲು ಉರುಳಾಗಿ ನತ್ತು ಬಾರವಾಗಿ
ನೈದಿಲೆಯಂತೆ ಚಾಚಿಹಳು ಕೆಸರಿನಾಚೆ
ಈಚೆ ಬಂದರೆ ಕಷ್ಟ, ಆಚೆ ಬರಿ ಕೊಳಚೆ
ಸ್ವಾತಂತ್ರ್ಯ ಬಯಸಿ ಬಂದಿಹಳೀಚೆ //
ಕಿತ್ತು ತಿನ್ನುವ ಹತ್ತು ಕಣ್ಣುಹೊರಗೆ
ನಮ್ಮ ಸಂಸ್ಕೃತಿಯ ಪಾಠ ಒಳಗೆ/
ಕತ್ತು ಬಗ್ಗಿದರೆ ಸಂಪ್ರದಾಯ ಕುಲಾವಿ
ತಲೆಯತ್ತಿ ನಡೆದೆ ಹೆಮ್ಮಾರಿ ಪದವಿ//
ಬೆಳೆದವಳು, ಕಾದು ಗೆಳೆಯನಿಗೆ
ಬೆಳಕಾಗುವಳು ಸೇರುವ ಮನೆಗೆ
ಬದುಕಲು ಬಿಡಿ ಬಂದಂತೆ ಮನ
ಬೆಂದು ಮಾಡುವಳು ನಂದನವನ//
ಬಸನಗೌಡ ಗೌಡರ
No comments:
Post a Comment