ವಸಂತ ಬಂದ ಜಗದ ತಮಕೊಂದ
ಸಂತೋಷದ ಸವಿಯದು ಶ್ರೀಗಂಧ
ಮಾವು ಬೇವಿಗೂ ಮಂದ ಹಾಸ
ಜೀವ ಸಂಕುಲಕರಳಿತು ಕೈಲಾಸ //
ಸಂತೋಷದ ಸವಿಯದು ಶ್ರೀಗಂಧ
ಮಾವು ಬೇವಿಗೂ ಮಂದ ಹಾಸ
ಜೀವ ಸಂಕುಲಕರಳಿತು ಕೈಲಾಸ //
ಋತುವಿನ ಶೃಂಗದ ನೃತ್ಯ ಅಭಂಗ
ಮೈಮನದಲ್ಲೇಳುತಿದೆ ಭಾವತರಂಗ
ಭುವಿಯಾಗಿದೆ ಸಂಗೀತದ ನವರಂಗ
ಮೇಳೈಸಿದೆ ಕೋಗಿಲೆಗಳಂತರಂಗ//
ಹೋಂಗೆಯ ಹೂವಿನ ಮಕರಂದ
ಚೆಂಗುಲಾಬಿಯ ಮೋಹಕ ಅಂದ
ಭೃಂಗದ ಜೇಂಕಾರ ಮಹದಾನಂದ
ಸವಿಯಬೇಕು ಸಂತ ವಿನಯದಿಂದ//
ಕವಿಯ ಕಲ್ಪನೆ ಕೋಗಿಲೆ ಕೂಗಿಗೆ
ಅರಳಿತು ಜುಳು ಜುಳು ತೊರೆಯಾಗಿ
ಕರಳು ಕುಡಿಗಳ ಬೆರಳು ತುದಿಗೆ
ಆಟದ ಪಾಠ ಕಳೆಕಟ್ಟಿತು ಬೆಸುಗೆ//
ಹೊಸತನ ಪಸರಿಸಿ ನಸುನಗೆ ಪೇರಿಸಿ
ಹುಸಿನಗು ತುಳಿದನು ದಿನಕರ ಸೋಸಿ
ಕನಸನು ಕಟ್ಟುವ ಮನಸನು ಬಿತ್ತಿ
ಹರುಷವ ತೇಲಿಸಿ ನಡೆದನು ಕೈ ಎತ್ತಿ//
✒.ಬಸನಗೌಡ ಗೌಡರ
No comments:
Post a Comment