Monday, September 14, 2020

* ವಸಂತ ಮಾಸ *

ವಸಂತ ಬಂದ ಜಗದ ತಮಕೊಂದ 
ಸಂತೋಷದ ಸವಿಯದು ಶ್ರೀಗಂಧ
ಮಾವು ಬೇವಿಗೂ ಮಂದ ಹಾಸ
ಜೀವ ಸಂಕುಲಕರಳಿತು ಕೈಲಾಸ //

ಋತುವಿನ ಶೃಂಗದ ನೃತ್ಯ ಅಭಂಗ
ಮೈಮನದಲ್ಲೇಳುತಿದೆ ಭಾವತರಂಗ
ಭುವಿಯಾಗಿದೆ ಸಂಗೀತದ ನವರಂಗ
ಮೇಳೈಸಿದೆ ಕೋಗಿಲೆಗಳಂತರಂಗ//

ಹೋಂಗೆಯ ಹೂವಿನ ಮಕರಂದ
ಚೆಂಗುಲಾಬಿಯ ಮೋಹಕ ಅಂದ
ಭೃಂಗದ ಜೇಂಕಾರ ಮಹದಾನಂದ  
ಸವಿಯಬೇಕು ಸಂತ ವಿನಯದಿಂದ//

ಕವಿಯ ಕಲ್ಪನೆ ಕೋಗಿಲೆ ಕೂಗಿಗೆ
ಅರಳಿತು ಜುಳು ಜುಳು ತೊರೆಯಾಗಿ
ಕರಳು ಕುಡಿಗಳ ಬೆರಳು ತುದಿಗೆ
ಆಟದ ಪಾಠ ಕಳೆಕಟ್ಟಿತು ಬೆಸುಗೆ//

ಹೊಸತನ ಪಸರಿಸಿ ನಸುನಗೆ ಪೇರಿಸಿ
ಹುಸಿನಗು ತುಳಿದನು ದಿನಕರ ಸೋಸಿ
ಕನಸನು ಕಟ್ಟುವ ಮನಸನು ಬಿತ್ತಿ
ಹರುಷವ ತೇಲಿಸಿ ನಡೆದನು ಕೈ ಎತ್ತಿ//  

       ✒.ಬಸನಗೌಡ ಗೌಡರ 
   

 

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...