ಅಳೆದು ತೂಗಿ ಮೌನದಲಿ ಹೊಲಸು
ಮರೆಮಾಡಿ ಮರೆಯಬೇಡ ಮೂಢ
ಹುಳವಾಡಿ ಕೊಳೆತು ತೇಲಿತು ಕೇಡು
ಬೆಳಕಿಗಿಲ್ಲ ಬರವು ಅದು ರವಿ ಹಾಡು//
ಬೆಕ್ಕಿಗೂ ಕೊರಮರ ಬಲೆಯ ಭಯ
ಸೊಕ್ಕಿ ನಡೆದರೆ ಅದು ಉಕ್ಕಿದ ಸಾರು
ಲೆಕ್ಕ ವಿಡದೆ ಬಿಡುವನೇನು ಮಹಾಶಿವ
ಪಕ್ಕೆಲಬು ಮುರಿದು ಕಕ್ಕಿಸದೆ ಬಿಡನು//
ಅಧಿಕಾರ ಮೂರುದಿನದ ಸಂತೆ ಕಂತೆ
ಎತ್ತಿ ಮೆರೆದವರ ಬಾಳು ಸದಾ ಹಸಿರು
ಎತ್ತದೆ ಮೆರೆದವರ ಕತ್ತು ಬರಿ ಮೇಲು
ಸತ್ತ ಮೇಲೂ ಕಾಡುವುದು ಗರ್ವ ಫಲ//
ಅಣಬೆ ಆಯುಷ್ಯ ಅಲ್ಪ, ಆಹಾರದ
ಮನೆ ಸೇರಿದ ಮರುಗಳಗೆ ಅಮೃತ
ಅರಿಯದೆ ಮೆರೆದರದು ಕಾಣುವ ಕಂಬ
ಬರಿ ಹುಳಗಳೆ ಸೇರುವುವು ಮೈತುಂಬ //
ಬಸನಗೌಡ ಗೌಡರ
No comments:
Post a Comment