ಯಾರು ತೇಲಿ ಬಿಟ್ಟರೀ ರಮ್ಯ ಧರಣಿ
ತಾರೆಗಳ ಹಿಂಡೆ ಇದರ ಕಡೆ ಗುಮಾನಿ
ಭಾಸ್ಕರನಾಗಮನ ಕಾದವರೀಗ ಕಾಣೆ
ಸಸ್ಯರಾಶಿಯಾಯಿತು ಶಿವನ ಶಯನ//
ಅರಳಿಯ ಹಿಂಜಿ ಹಾಕಿದ ಅರಳುವ
ಸುರಳಿ ಚಿತ್ತಾರ ಮೋಡದ ರಂಗೋಲಿ /
ಚುಮು ಚುಮು ಚಳಿಯ ಮಂದ ಗಾಳಿ
ಇಬ್ಬನಿ ನರ್ತನ ಆರ್ದ್ರ ದರ್ಪಣ ದೂಳಿ//
ಶಿವ ಜಿಪುಣ ನೀಡಿದ ಎರಡೆ ನಯನ
ಸೊಬಗು ಸವಿಯಲು ನಡೆದಿದೆ ಕದನ
ಜೊಂಜಾಟದ ಬದುಕಾಗಬೇಕು ನಿಧನ
ಆಸ್ವಾದಿಸುವ ಗುರುವಿಗೆ ನನ್ನ ನಮನ//
ಶಶಿಧರನುದಯವ ತಿಳಿಯದ ಗಹನ
ರೂಪ ಬದಲಿಸಿ ಬರುವನು ದಿನ ದಿನ
ತಂಪನು ನೀಡಿದ ಕದಡಿದ ತಮವನು
ಇವನಿಗೂ ಕಾದಿದೆ ಮೋಸದ ಗ್ರಹಣ//
ಬಸನಗೌಡ ಗೌಡರ
No comments:
Post a Comment