ದಾರಿ ತೋರಿದರು ಮನುಜಗೆ ಪ್ರಾಣಿ
ಪಕ್ಷಿಗಳಾದರೇನು ಸರಿ ಸಹ ಜೀವನ
ಮರೆತು ಪಾಲಿಸದೆ ಮಾಡಿದರು ಹರಣ
ಜೀವಸಂಕುಲ ದಾರಿ ತಪ್ಪಿತು ಈ ದಿನ//
ಕಾಡಿನ ಕಾವಲು ಮುರಿದ ಕದಿಮರು
ನಾಗರಿಕತೆ ಬೆಳವಣಿಗೆಯ ಹಾಡಿದರು
ಕವಲು ದಾರಿಯಲ್ಲಿ ಅರಿಯದವರು,
ಕಾಲ ಬಂದಾಗ ಉತ್ತರಿಸವರಾರು//
ಕತೆ ಹೇಳಲು ನೈತಿಕತೆಯ ಬಳಸಿ
ಜೊತೆ ನಡೆದು ಹೇಳಿದ್ದು ಬರಿ ಹುಸಿ
ಪ್ರಕೃತಿಯ ಹಿತ ಬಯಸಿದಂತೆ ನಟಿಸಿ
ವಿಕೃತಿ ಮೆರೆದರು ಸಮಯ ಸಾಧಿಸಿ//
ಬನದ ಮುಖವೆಲ್ಲ ಕೆಂಪಾದವೊ
ನಾಡಿನ ಬದುಕೆಲ್ಲ ಕೊಂಪೆಯಾದವು
ದುರಾಶೆಯ ಜೀವನ ನಿರಾಶೆಯಾದರು
ಬರಲಿಲ್ಲ ಬುದ್ಧಿ ಬವಣೆ ಬಂದರು. //
🖋️.ಬಸನಗೌಡ ಗೌಡರ
No comments:
Post a Comment